ದೇಶದ ಗಮನ ಸೆಳೆದಿದ್ದ 'ಬಾಬಾ ಕಾ ಡಾಬಾ' ಮಾಲೀಕನಿಗೆ ಭಾರಿ ನಷ್ಟ: ಆತ್ಮಹತ್ಯೆಗೆ ಪ್ರಯತ್ನ
ರೆಸ್ಟೋರೆಂಟ್ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿ ಸಾಲದಲ್ಲಿ ಮುಳುಗಿದಿರುವ 'ಬಾಬಾ ಕಾ ಡಾಬಾ' ಮಾಲೀಕ ಕಾಂತ ಪ್ರಸಾದ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
Agencies 18 Jun 2021, 4:03 pm
ಹೈಲೈಟ್ಸ್:
- ಯೂಟ್ಯೂಬರ್ ಗೌರವ್ ವಾಸನ್ ಮೂಲಕ ಜನಪ್ರಿಯರಾಗಿದ್ದ ಕಾಂತ ಪ್ರಸಾದ್
- 'ಬಾಬಾ ಕಾ ಡಾಬಾ' ಮಾಲೀಕರಿಗೆ ದೇಶದೆಲ್ಲೆಡೆಯಿಂದ ಬಂದಿದ್ದ ಆರ್ಥಿಕ ನೆರವು
- ನೆರವಿನ ಹಣ ಬಳಸಿಕೊಂಡು ಹೊಸ ರೆಸ್ಟೋರೆಂಟ್ ಆರಂಭಿಸಿ ಕೈಸುಟ್ಟುಕೊಂಡ ಕಾಂತ ಪ್ರಸಾದ್
- ರೆಸ್ಟೋರೆಂಟ್ ಮುಚ್ಚಿ ತಮ್ಮ ಹಿಂದಿನ ಡಾಬಾಕ್ಕೆ ಮರಳಿದ್ದ ಅಜ್ಜ
- ಸಾಲದ ಹೊರೆಯಿಂದ ಬೇಸೆತ್ತು ಆತ್ಮಹತ್ಯೆಗೆ ಪ್ರಯತ್ನ, ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ: ಪುಟ್ಟ ಡಾಬಾ ಮೂಲಕ ದೇಶದ ಗಮನ ಸೆಳೆದು, ಜನರ ಆರ್ಥಿಕ ನೆರವಿನಿಂದ ತನ್ನದೇ ದೊಡ್ಡ ರೆಸ್ಟೋರೆಂಟ್ ಕಟ್ಟುವಲ್ಲಿ ಯಶಸ್ವಿಯಾಗಿದ್ದ 'ಬಾಬಾ ಕಾ ಡಾಬಾ' ಮಾಲೀಕ ಕಾಂತ ಪ್ರಸಾದ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರು ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 80 ವರ್ಷದ ಕಾಂತ ಪ್ರಸಾದ್ ಅವರು ತಮ್ಮ ಆರ್ಥಿಕ ಸ್ಥಿತಿಯಿಂದ ತೀವ್ರ ನೊಂದುಕೊಂಡು ನಿದ್ದೆ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಕಾಂತ ಪ್ರಸಾದ್ ಭಾರಿ ಸಾಲದಲ್ಲಿ ಮುಳುಗಿದ್ದಾರೆ. ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಹೊಸದಿಲ್ಲಿಯಲ್ಲಿ ತಾವು ಆರಂಭಿಸಿದ ರೆಸ್ಟೋರೆಂಟ್ನ ಬಾಡಿಗೆ ಒಂದು ಲಕ್ಷ ರೂಪಾಯಿ ಇದೆ. ಆದರೆ ತಿಂಗಳಿಗೆ ಪ್ರಸ್ತುತ ಸುಮಾರು 30,000 ರೂ ಆದಾಯ ಬರುತ್ತಿದೆ. ಹೀಗಾಗಿ ಸಾಲ ತೀರಿಸುವುದರ ಬಗ್ಗೆ ಕಾಂತ ಪ್ರಸಾದ್ ತೀವ್ರ ಚಿಂತೆಗೆ ಒಳಗಾಗಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ.
ಪುಟ್ಟ ಡಾಬಾ ನಡೆಸುತ್ತಿದ್ದ ಈ ವೃದ್ಧ ದಂಪತಿ ಕೋವಿಡ್ 19 ಸಾಂಕ್ರಾಮಿಕದ ನಡುವೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಯೂಟ್ಯೂಬರ್ ಗೌರವ್ ವಾಸನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರಿಗೂ ತಿಳಿಯುವಂತೆ ಮಾಡಿದ್ದರು. ಇದರ ಬೆನ್ನಲ್ಲೇ ದೇಶದ ಮೂಲೆ ಮೂಲೆಗಳಿಂದ ಕಾಂತ ಪ್ರಸಾದ್ ಅವರಿಗೆ ಆರ್ಥಿಕ ನೆರವಿನ ಮಹಾಪೂರ ಹರಿದುಬಂದಿತ್ತು.
ಬಳಿಕ ಕಾಂತ ಪ್ರಸಾದ್ ಮತ್ತು ಅವರ ಪತ್ನಿ ಬಾದಾಮಿ ದೇವಿ ಅವರು ದಕ್ಷಿಣ ದಿಲ್ಲಿಯ ಮಾಳವೀಯ ನಗರದಲ್ಲಿ ರೆಸ್ಟೋರೆಂಟ್ ಕಟ್ಟಿದ್ದರು. ಹೊಸ ರೆಸ್ಟೋರೆಂಟ್ಗೆ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದ ಕಾಂತ ಪ್ರಸಾದ್, ಮೂವರು ಕೆಲಸಗಾರರನ್ನು ಕೂಡ ನೇಮಿಸಿಕೊಂಡಿದ್ದರು. ಕೆಲವು ಸಮಯ ಚೆನ್ನಾಗಿ ಓಡಿದ್ದ ರೆಸ್ಟೋರೆಂಟ್, ಕ್ರಮೇಣ ನಷ್ಟಕ್ಕೆ ಸಿಲುಕತೊಡಗಿತ್ತು.
ರೆಸ್ಟೋರೆಂಟ್ ನಿರ್ಮಾಣಕ್ಕೆ ಹೆಚ್ಚುವರಿ ಸಾಲ ಪಡೆದಿದ್ದ ಅವರಿಗೆ, ಬರುತ್ತಿದ್ದ ಆದಾಯವು ಬಾಡಿಗೆ ಕಟ್ಟಲೂ ಸಾಲುತ್ತಿರಲಿಲ್ಲ. ಕೊನೆಗೆ ರೆಸ್ಟೋರೆಂಟ್ ಮುಚ್ಚಿ, ಈ ದಂಪತಿ ತಮ್ಮ ಹಿಂದಿನ ಡಾಬಾಕ್ಕೆ ಮರಳಿತ್ತು. ಹೊಸ ರೆಸ್ಟೋರೆಂಟ್ ಆರಂಭಿಸುವಂತೆ ತಮಗೆ ತಪ್ಪು ಸಲಹೆ ನೀಡಲಾಗಿತ್ತು. ಒಟ್ಟಾರೆ ಹೂಡಿದ್ದು ಐದು ಲಕ್ಷ ರೂಪಾಯಿ. ಆದರೆ, ಕುರ್ಚಿ, ಪಾತ್ರೆಗಳು ಮತ್ತು ಇತರೆ ವಸ್ತುಗಳ ಮಾರಾಟದಿಂದ ಕೇವಲ 36,000 ರೂ ವಾಪಸ್ ಬಂದಿದೆ ಎಂದು ಕಾಂತ ಪ್ರಸಾದ್ ಹೇಳಿಕೊಂಡಿದ್ದರು.
ತಮ್ಮನ್ನು ಜನಪ್ರಿಯರನ್ನಾಗಿ ಮಾಡಿದ್ದ ಗೌರವ್ ವಾಸನ್ ಅವರು ತಮಗೆ ಬಂದಿದ್ದ ಹಣದಲ್ಲಿ ಸಾಕಷ್ಟು ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂತ ಪ್ರಸಾದ್ ಆರೋಪಿಸಿದ್ದರು. ಆದರೆ ಕೆಲವು ದಿನಗಳ ಹಿಂದೆ ಕಾಂತ ಅವರ ವಿಡಿಯೋವೊಂದು ವೈರಲ್ ಆಗಿದ್ದು, 'ಗೌರವ್ ವಾಸನ್ ಕಳ್ಳತನ ಮಾಡಿಲ್ಲ. ನಾನು ಹಾಗೆ ಹೇಳಿಯೂ ಇಲ್ಲ. ನಾನು ಅವರನ್ನು ಕರೆದಿರಲಿಲ್ಲ. ಅವರಾಗಿಯೇ ನನ್ನನ್ನು ಸಂಪರ್ಕಿಸಿದ್ದು ಎಂದು ಹೇಳಿದ್ದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ' ಎಂದು ಅವರು ಕೈ ಮುಗಿದಿದ್ದರು.
ಹೊಸದಿಲ್ಲಿಯಲ್ಲಿ ತಾವು ಆರಂಭಿಸಿದ ರೆಸ್ಟೋರೆಂಟ್ನ ಬಾಡಿಗೆ ಒಂದು ಲಕ್ಷ ರೂಪಾಯಿ ಇದೆ. ಆದರೆ ತಿಂಗಳಿಗೆ ಪ್ರಸ್ತುತ ಸುಮಾರು 30,000 ರೂ ಆದಾಯ ಬರುತ್ತಿದೆ. ಹೀಗಾಗಿ ಸಾಲ ತೀರಿಸುವುದರ ಬಗ್ಗೆ ಕಾಂತ ಪ್ರಸಾದ್ ತೀವ್ರ ಚಿಂತೆಗೆ ಒಳಗಾಗಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ.
ಪುಟ್ಟ ಡಾಬಾ ನಡೆಸುತ್ತಿದ್ದ ಈ ವೃದ್ಧ ದಂಪತಿ ಕೋವಿಡ್ 19 ಸಾಂಕ್ರಾಮಿಕದ ನಡುವೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಯೂಟ್ಯೂಬರ್ ಗೌರವ್ ವಾಸನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರಿಗೂ ತಿಳಿಯುವಂತೆ ಮಾಡಿದ್ದರು. ಇದರ ಬೆನ್ನಲ್ಲೇ ದೇಶದ ಮೂಲೆ ಮೂಲೆಗಳಿಂದ ಕಾಂತ ಪ್ರಸಾದ್ ಅವರಿಗೆ ಆರ್ಥಿಕ ನೆರವಿನ ಮಹಾಪೂರ ಹರಿದುಬಂದಿತ್ತು.
ಬಳಿಕ ಕಾಂತ ಪ್ರಸಾದ್ ಮತ್ತು ಅವರ ಪತ್ನಿ ಬಾದಾಮಿ ದೇವಿ ಅವರು ದಕ್ಷಿಣ ದಿಲ್ಲಿಯ ಮಾಳವೀಯ ನಗರದಲ್ಲಿ ರೆಸ್ಟೋರೆಂಟ್ ಕಟ್ಟಿದ್ದರು. ಹೊಸ ರೆಸ್ಟೋರೆಂಟ್ಗೆ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದ ಕಾಂತ ಪ್ರಸಾದ್, ಮೂವರು ಕೆಲಸಗಾರರನ್ನು ಕೂಡ ನೇಮಿಸಿಕೊಂಡಿದ್ದರು. ಕೆಲವು ಸಮಯ ಚೆನ್ನಾಗಿ ಓಡಿದ್ದ ರೆಸ್ಟೋರೆಂಟ್, ಕ್ರಮೇಣ ನಷ್ಟಕ್ಕೆ ಸಿಲುಕತೊಡಗಿತ್ತು.
ರೆಸ್ಟೋರೆಂಟ್ ನಿರ್ಮಾಣಕ್ಕೆ ಹೆಚ್ಚುವರಿ ಸಾಲ ಪಡೆದಿದ್ದ ಅವರಿಗೆ, ಬರುತ್ತಿದ್ದ ಆದಾಯವು ಬಾಡಿಗೆ ಕಟ್ಟಲೂ ಸಾಲುತ್ತಿರಲಿಲ್ಲ. ಕೊನೆಗೆ ರೆಸ್ಟೋರೆಂಟ್ ಮುಚ್ಚಿ, ಈ ದಂಪತಿ ತಮ್ಮ ಹಿಂದಿನ ಡಾಬಾಕ್ಕೆ ಮರಳಿತ್ತು. ಹೊಸ ರೆಸ್ಟೋರೆಂಟ್ ಆರಂಭಿಸುವಂತೆ ತಮಗೆ ತಪ್ಪು ಸಲಹೆ ನೀಡಲಾಗಿತ್ತು. ಒಟ್ಟಾರೆ ಹೂಡಿದ್ದು ಐದು ಲಕ್ಷ ರೂಪಾಯಿ. ಆದರೆ, ಕುರ್ಚಿ, ಪಾತ್ರೆಗಳು ಮತ್ತು ಇತರೆ ವಸ್ತುಗಳ ಮಾರಾಟದಿಂದ ಕೇವಲ 36,000 ರೂ ವಾಪಸ್ ಬಂದಿದೆ ಎಂದು ಕಾಂತ ಪ್ರಸಾದ್ ಹೇಳಿಕೊಂಡಿದ್ದರು.
ತಮ್ಮನ್ನು ಜನಪ್ರಿಯರನ್ನಾಗಿ ಮಾಡಿದ್ದ ಗೌರವ್ ವಾಸನ್ ಅವರು ತಮಗೆ ಬಂದಿದ್ದ ಹಣದಲ್ಲಿ ಸಾಕಷ್ಟು ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂತ ಪ್ರಸಾದ್ ಆರೋಪಿಸಿದ್ದರು. ಆದರೆ ಕೆಲವು ದಿನಗಳ ಹಿಂದೆ ಕಾಂತ ಅವರ ವಿಡಿಯೋವೊಂದು ವೈರಲ್ ಆಗಿದ್ದು, 'ಗೌರವ್ ವಾಸನ್ ಕಳ್ಳತನ ಮಾಡಿಲ್ಲ. ನಾನು ಹಾಗೆ ಹೇಳಿಯೂ ಇಲ್ಲ. ನಾನು ಅವರನ್ನು ಕರೆದಿರಲಿಲ್ಲ. ಅವರಾಗಿಯೇ ನನ್ನನ್ನು ಸಂಪರ್ಕಿಸಿದ್ದು ಎಂದು ಹೇಳಿದ್ದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ' ಎಂದು ಅವರು ಕೈ ಮುಗಿದಿದ್ದರು.