ಆ್ಯಪ್ನಗರ

ಮ್ಯಾಡಮ್ ಟುಸ್ಸಾಡ್ಸ್‌ನಲ್ಲಿ ಯೋಗ ಗುರು ಬಾಬಾ ರಾಮ್‍ದೇವ್

ಯೋಗ ಗುರು ಬಾಬಾ ರಾಮ್ ದೇವ್ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಲಂಡನ್‌ನ ವಿಶ್ವವಿಖ್ಯಾತ ಮ್ಯಾಡಮ್ ಟುಸ್ಸಾಡ್ಸ್‌ನಲ್ಲಿ ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು ಈ ಸಂಬಂಧ 20 ಸದಸ್ಯರ ತಂಡ ಆಗಮಿಸಿ ಬಾಬಾ ರಾಮ್ ದೇವ್ ಅವರ ಫೋಟೋ ಮತ್ತು ದೇಹದ ಅಳತೆಗಳನ್ನು ತೆಗೆದುಕೊಂಡಿದೆ.

TIMESOFINDIA.COM 26 Jun 2018, 12:43 pm
ಹರಿದ್ವಾರ: ಯೋಗ ಗುರು ಬಾಬಾ ರಾಮ್ ದೇವ್ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಲಂಡನ್‌ನ ವಿಶ್ವವಿಖ್ಯಾತ ಮ್ಯಾಡಮ್ ಟುಸ್ಸಾಡ್ಸ್‌ನಲ್ಲಿ ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು ಈ ಸಂಬಂಧ 20 ಸದಸ್ಯರ ತಂಡ ಆಗಮಿಸಿ ಬಾಬಾ ರಾಮ್ ದೇವ್ ಅವರ ಫೋಟೋ ಮತ್ತು ದೇಹದ ಅಳತೆಗಳನ್ನು ತೆಗೆದುಕೊಂಡಿದೆ.
Vijaya Karnataka Web ram-dev


ಇದಕ್ಕೆ ಸಂಬಂಧಿಸಿದಂತೆ ಸ್ವತಃ ಬಾಬಾ ರಾಮ್ ದೇವ್ ಅವರೇ ಟ್ವೀಟ್ ಮಾಡಿದ್ದು ವೃಕ್ಷಾಸನ ಮಾಡುತ್ತಿರುವ ಭಂಗಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮ್ಯಾಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ದೇವ್ ಪ್ರತಿಮೆ ವೃಕ್ಷಾಸನ ಭಂಗಿಯಲ್ಲೇ ಸ್ಥಾಪಿಸಲಿದ್ದಾರೆ. ಪ್ರತಿಮೆ ಸ್ಥಾಪನೆಗಾಗಿ ತಾವು ಬಳಸುವ ಬಣ್ಣದ ಕಾವಿ ನಿಲುವಂಗಿ ಹಾಗೂ ಒಂದು ಜೊತೆ ಪಾದುಕೆಗಳನ್ನು ನೀಡಲಿರುವುದಾಗಿ ಮೂಲಗಳು ತಿಳಿಸಿವೆ.

"ಇದೇ ಮೊದಲ ಬಾರಿಗೆ ಲಂಡನ್‌ನ ಮ್ಯಾಡಮ್ ಟುಸ್ಸಾಡ್ಸ್‌ನಲ್ಲಿ ಯೋಗಿಯೊಬ್ಬರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಇದು ಯೋಗ ವಿಜ್ಞಾನದ ವೈಭವ ಸಾರಲಿದ್ದು ಜಗತ್ತಿನಾದ್ಯಂತ ಜನರು ಯೋಗ ಜೀವನ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ" ಎಂದಿದ್ದಾರೆ ಯೋಗ ಗುರು.

ಆರಂಭದಲ್ಲಿ ತಮ್ಮ ಮೇಣದ ಪ್ರತಿಮೆಗೆ ರಾಮ್ ದೇವ್ ವಿರೋಧ ವ್ಯಕ್ತಪಡಿಸಿದರಂತೆ. ಪ್ರತಿಮೆ ಸ್ಥಾಪಿಸುವುದರಿಂದ ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಯೋಗ ಬಗ್ಗೆ ಕುತೂಹಲ ಮೂಡಿ ಅವರೂ ಈ ಬಗ್ಗೆ ತಿಳಿದುಕೊಂಡಂತಾಗುತ್ತದೆ ಎಂಬ ಉದ್ದೇಶದಿಂದ ಅಂಗೀಕರಿಸಿದ್ದಾಗಿ ಹರಿದ್ವಾರದ ರಾಮ್ ದೇವ್ ಸಹಾಯಕರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಯೋಗ ಗುರುವಿನ ವಕ್ತಾರರಾದ ಎಸ್ ಕೆ ತಿಜರವಾಲಾ, "ಸೋಮವಾರ ಅವರ ಅಳತೆಯನ್ನು 20 ಸದಸ್ಯರ ತಂಡ ಸುಮಾರು ಮೂರು ಗಂಟೆಗಳ ಕಾಲ ತೆಗೆದುಕೊಂಡಿತು. ಅವರ ಎತ್ತರ, ಕಣ್ಣುಗಳ ಹೊಂದಾಣಿಕೆ, ಕಿವಿ, ತಲೆಬುರುಡೆ, ಬಣ್ಣ ಮತ್ತು ಗಾತ್ರ, ಭಂಗಿಯ ಅಳತೆಯನ್ನು ತೆಗೆದುಕೊಳ್ಳಲಾಯಿತು. ಮ್ಯಾಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಈ ಗೌರವಕ್ಕೆ ಪಾತ್ರವಾಗುತ್ತಿರುವ ಮೊದಲ ಯೋಗಿ ಎಂಬುದು ವಿಶೇಷ" ಎಂದಿದ್ದಾರೆ.

ಮ್ಯಾಡಮ್ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಈಗಾಗಲೆ ಭಾರತದ ಖ್ಯಾತನಾಮರಾದ ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ ಬಚ್ಚನ್, ಕತ್ರಿನಾ ಕೈಫ್, ವಿರಾಟ್ ಕೊಹ್ಲಿ ಇನ್ನಿತರರ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

"ಪ್ರಧಾನಿ ನರೇಂದ್ರ ಮೋದಿ ಇಲ್ಲೇ ಇದ್ದಾರೆ. ಟ್ರಂಪ್ ನನ್ನ ಹಿಂದೆ ಇದ್ದಾರೆ. ಸಚಿನ್ ತೆಂಡೂಲ್ಕರ್, ಸಲ್ಮಾನ್, ಅಮಿತಾಬ್, ಶಾರುಖ್‌ನಂತಹ ಖ್ಯಾತನಾಮರು ಸಾಕಷ್ಟು ಮಂದಿ ಇಲ್ಲಿದ್ದಾರೆ. ಆಧ್ಯಾತ್ಮಿಕತೆಗೆ, ಯೋಗಿಯೊಬ್ಬರಿಗೆ ದಕ್ಕಿದ ಗೌರವ ಇದು." ಎಂದಿದ್ದಾರೆ ರಾಮ್ ದೇವ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ