ಆ್ಯಪ್ನಗರ

ವೇತನ ನೀಡದೆ ಉಚಿತ ಕೆಲಸ ಮಾಡಿಸಿಕೊಳ್ಳುವ ಬಾಬಾ ರಾಮ್‌ದೇವ್‌: ಪಾತ್ರಾ

ಯೋಗ ಗುರು ಬಾಬಾ ರಾಮ್‌ ದೇವ್‌ ಒಡೆತನದ ಪತಂಜಲಿ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

Indiatimes 5 Aug 2017, 9:17 pm
ಹೊಸದಿಲ್ಲಿ: ಯೋಗ ಗುರು ಬಾಬಾ ರಾಮ್‌ ದೇವ್‌ ಒಡೆತನದ ಪತಂಜಲಿ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸರಿಯಾಗಿ ವೇತನ ನೀಡದ ಕಾರಣ ಪತಂಜಲಿ ತೊರೆದಿರುವುದಾಗಿ ಇವರು ಹೇಳಿದ್ದಾರೆ.
Vijaya Karnataka Web baba ramdev wanted patanjali employees to work for free claims former ceo
ವೇತನ ನೀಡದೆ ಉಚಿತ ಕೆಲಸ ಮಾಡಿಸಿಕೊಳ್ಳುವ ಬಾಬಾ ರಾಮ್‌ದೇವ್‌: ಪಾತ್ರಾ


ಈ ಕುರಿತು ಲೈವ್‌ ಮಿಂಟ್‌ ಸಂದರ್ಶನದಲ್ಲಿ ಮಾತನಾಡಿರುವ ಪತಂಜಲಿಯ ಮಾಜಿ ಸಿಇಒ ಎಸ್‌ಕೆ ಪಾತ್ರಾ, 'ಪತಂಜಲಿ ಕಂಪನಿಯಲ್ಲಿ ರಾಮ್‌ದೇವ್‌ ತನ್ನ ನೌಕರರಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಾರೆ. ಅಲ್ಲದೇ ತಮ್ಮ ನೌಕರರು ಪತಂಜಲಿಗೆ ಸೇವೆ ಮಾಡುತ್ತಾರೆ ಎಂದು ರಾಮ್‌ದೇವ್‌ ಹೇಳಿಕೊಳ್ಳುತ್ತಿದ್ದು, ಸಿಬ್ಬಂದಿಗಳು ಸಂಬಳ ಬಯಸದೆ ಕೆಲಸ ಮಾಡಬೇಕೆಂಬುದು ಅವರ ಇಚ್ಛೆಯಾಗಿದೆ' ಎಂದಿದ್ದಾರೆ.

'ನಾನು ಮೊದಲು ಇಲ್ಲಿ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಉಳಿದ ನೌಕರರಿಗೆ ನನ್ನ ಪರಿಚಯ ಮಾಡಿದ್ದ ಬಾಬಾಜಿ, ಮುಂದಿನ ದಿನಗಳಲ್ಲಿ ಉಚಿತವಾಗಿ ಕೆಲಸ (ಸೇವೆ) ಮಾಡುವುದಾಗಿ ಹೇಳಿದ್ದರು. ಆದರೆ ನಾನು ವೇತನ ನೀಡಲೇ ಬೇಕು ಎಂದಿದ್ದೆ. ಏಕೆಂದರೆ ನನ್ನನ್ನು ನಂಬಿ ಹೆಂಡತಿ ಮಕ್ಕಳಿದ್ದಾರೆ ಅವರನ್ನು ಸಾಕಲು ಹಣದ ಅಗತ್ಯ ನನಗಿತ್ತು' ಎಂದು ಪಾತ್ರಾ ಹೇಳಿದ್ದಾರೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಸಿಇಒ ಮತ್ತು ಪತಂಜಲಿ ಫುಡ್‌ಪಾರ್ಕ್‌ನ ಮುಖ್ಯಸ್ಥನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ಪಾತ್ರಾಗೆ ಎರಡೂ ಸಂಸ್ಥೆಗಳ ವೇತನ ನೀಡಲು ಬಾಬಾಜಿ ಒಪ್ಪಿದ್ದರೂ ಕೇವಲ ಒಂದರ ಸಂಬಳ ಮಾತ್ರ ಕೊಡುತ್ತಿದ್ದರಂತೆ. 'ನಾನು ಎರಡರ ವೇತನವನ್ನು ಕೇಳಿದ ವೇಳೆ ಬಾಬಾಜಿ ನನ್ನ ಮಾತಿನಿಂದ ಸ್ವಲ್ಪ ಕೋಪಗೊಂಡಿದ್ದರು. ಒಟ್ಟಾರೆ ತಮ್ಮ ನೌಕರರು ಉಚಿತವಾಗಿಯೇ ಸಂಸ್ಥೆಗೆ ಸೇವೆ ಸಲ್ಲಿಸಬೇಕು ಎಂಬುದೇ ಬಾಬಾಜಿ ಇರಾದೆಯಾಗಿತ್ತು. ಸಂಸ್ಥೆ ಬೆಳೆಸಲು ನಾವೆಷ್ಟೇ ಶ್ರಮ ವಹಿಸಿದರೂ ವೇತನ ನೀಡಲು ಅವರು ಒಪ್ಪುತ್ತಿರಲ್ಲ' ಎಂದು ಪಾತ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

'ಹಲವು ಸಂದರ್ಭದಲ್ಲಿ ರಾಮ್‌ದೇವ್‌ ಮಾತಿಗೂ ಅವರ ನಡವಳಿಕೆಗೂ ಸಾಕಷ್ಟು ವ್ಯತ್ಯಾಸವಿತ್ತು. ಇದು ಕೆಲವೊಮ್ಮೆ ಅತಿಯಾಗುತ್ತಿತ್ತು, ಹೀಗಾಗಿ ನಾನು ಕೆಲಸ ತೊರೆದೆ' ಎಂದು ಪಾತ್ರಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ