ಆ್ಯಪ್ನಗರ

ಕಾನೂನಿನ ಬಲೆಗೆ ಸಿಲುಕಿದ್ದ ಸ್ವ ಘೋಷಿತ ದೇವಮಾನವರು...!

ಸ್ವ ಘೋಷಿತ ದೇವಮಾನವ ರಾಮ್‌ ರಹೀಂ ಈಗ ದೋಷಿಯಾಗಿ ಜೈಲು ಸೇರಿದ್ದಾರೆ. ಇಂಥ ಹಲವಾರು ಮಂದಿಯೂ ಕಾನೂನಿನ ಮುಂದೆ ಮಂಡಿಯೂರಿದ್ದಾರೆ.

TNN 26 Aug 2017, 4:21 pm
ಹೊಸದಿಲ್ಲಿ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್‌ ರಹೀಂ ಈಗ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿದ್ದಾನೆ. ಹಲವಾರು ಸ್ವ ಘೋಷಿತ ದೇವಮಾನವರು ಈಗಾಗಲೇ ಕಾನೂನಿನ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅಂಥವರ ವಿವರ ಇಲ್ಲಿದೆ.
Vijaya Karnataka Web babas behind bars godmen who fell foul of the law
ಕಾನೂನಿನ ಬಲೆಗೆ ಸಿಲುಕಿದ್ದ ಸ್ವ ಘೋಷಿತ ದೇವಮಾನವರು...!


ರಾಮ್‌ಪಾಲ್‌
ಹಾಲಿ ಸ್ಥಿತಿ: ಜೈಲು ಶಿಕ್ಷೆ, ವಿಚಾರಣೆ ನಡೆಯುತ್ತಿದೆ
ಆರೋಪ: ಕೊಲೆ ಹಾಗೂ ದೇಶದ್ರೋಹ
ವಾಸಸ್ಥಾನ: ಹರಿಯಾಣ
ಸಂಸ್ಥಾಪಕ: ಸತ್ಲೋಕ ಆಶ್ರಮ
* ಹರಿಯಾಣದ ಹಿಸ್ಸಾರನಲ್ಲಿರುವ ಆಶ್ರಮದಲ್ಲಿ ಐವರು ಮಹಿಳೆಯರು ಹಾಗೂ ಹದಿನೆಂಟು ತಿಂಗಳ ಮಗುವಿನ ಮೃತದೇಹ ಪತ್ತೆಯಾಗಿತ್ತು.
* ಐಟಿಐ ತರಬೇತಿ ಪಡೆದು ಹರಿಯಾಣ ರಾಜ್ಯ ನೀರಾವರಿ ಇಲಾಖೆಯಲ್ಲಿ ರಾಮ್‌ ಪಾಲ್‌ ಎಂಜಿನಿಯರ್‌ ಆಗಿದ್ದ. ನಂತರ ಸ್ವ ಘೋಷಿತ ದೇವಮಾನವನಾಗಿ ಆಶ್ರಮ ಸ್ಥಾಪಿಸಿದ್ದ.
* ಕೊಲೆ ಪ್ರಕರಣ ಸಂಬಂಧ 2010 ರಿಂದ 2014ರವರೆಗೆ
42 ಬಾರಿ ಸಮನ್ಸ್‌ ನೀಡಿದ್ದರೂ ಅದನ್ನು ತಿರಸ್ಕರಿಸಿ ನ್ಯಾಯಾಲಯಕ್ಕೆ ಹಾಜರಿರಲಿಲ್ಲ.
* 2014ರಲ್ಲಿ ರಾಮ್‌ಪಾಲ್‌ ಬಂಧಿಸಲು ಪೊಲೀಸರು ಆಶ್ರಮಕ್ಕೆ ಆಗಮಿಸಿದಾಗ ಬೆಂಬಲಿಗರು, ಭಕ್ತರು ಭಾರಿ ಹಿಂಸಾಚಾರ ನಡೆಸಿದ್ದರು.

------

ರಾಮ್‌ ವೃಕೇಶ್‌ ಯಾದವ್‌
ಮರಣ: 2016
ವಾಸಸ್ಥಾನ: ಉತ್ತರ ಪ್ರದೇಶ
ಆರೋಪ: ಒತ್ತುವರಿ, ಕೊಲೆ, ದೊಂಬಿ
ಸಂಸ್ಥಾಪಕ: ಸ್ವಾಧೀನ ಭಾರತ್‌ ಸುಭಾಷ್‌ ಸೇನಾ, ಮಥುರಾ ಜೈ ಗುರುದೇವ ಭಕ್ತ
* 2016ರಲ್ಲಿ ಮಥುರಾದ ಜವಾಹರ್‌ ಭಾಗ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಬಾಬಾ ಯಾದವ್‌ ಹಾಗೂ ಆತನ ಎರಡು ಸಾವಿರ ಬೆಂಬಲಿಗರು ಹಿಂಸಾಚಾರ ನಡೆಸಿದರು. ಪೊಲೀಸರ ಕಾರ್ಯಾಚರಣೆಯಲ್ಲಿ ಯಾದವ್‌ ಸೇರಿದಂತೆ 24 ಮಂದಿ ಮೃತಪಟಿದ್ದರು.
* ಬಾಬಾ ಯಾದವ್‌ ಹೆಸರಿನಲ್ಲಿದ್ದ 12 ಸಾವಿರ ಕೋಟಿ ರೂ. ಆಸ್ತಿಗಾಗಿ ಬೆಂಬಲಿಗರಲ್ಲಿ ವಿವಾದ ಉಂಟಾಯಿತು.

----------

ನಿತ್ಯಾನಂದ
ಹಾಲಿಸ್ಥಿತಿ: ಅತ್ಯಾಚಾರ ಪ್ರಕರಣ: ಜಾಮೀನು ಮಂಜೂರು
ಸಂಸ್ಥಾಪಕ: ಧ್ಯಾನಪೀಠ, ಬೆಂಗಳೂರು
ಆರೋಪ: ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕ್ರಿಯೆ
* 2010ರಲ್ಲಿ ವಿಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ತಮಿಳು ಚಿತ್ರನಟಿ ಜತೆ ನಿತ್ಯಾನಂದ 'ಆನಂದ'ದಲ್ಲಿ ತೇಲಿ ಹೋಗಿದ್ದ ದೃಶ್ಯಗಳು ಪ್ರಸಾರವಾಗಿದ್ದವು.
* ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಭಕ್ತೆಯೊಬ್ಬರು ಆರೋಪಿಸಿದ್ದು, ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ನಿತ್ಯಾನಂದ ವಿರುದ್ಧ ಅತ್ಯಾಚಾರ ಹಾಗೂ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಇದೆ.

-------------

ಇಚ್ಛಾಧಾರಿ ಭೀಮಾನಂದ

ಶ್ರೀ ಮೂರತ್‌ ದ್ವೀವೇದಿ 1988ರಲ್ಲಿ ಹೋಟೆಲ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ನಂತರ ಸ್ವ ಘೋಷಿತ ದೇವಮಾನವನಾಗಿ ಭೀಮಾನಂದನಾದ..
* ಸೆಕ್ಸ್‌ ದಂಧೆ ನಡೆಸುತ್ತಿದ್ದ ಆರೋಪ ಈತನ ಮೇಲಿದೆ.
* 2010ರಲ್ಲಿ ಈತನನ್ನ ಬಂಧಿಸಲಾಗಿದೆ.
ಇವರಲ್ಲದೇ ಮೃತ ದೇವಮಾನವರು ಕಾನೂನಿನ ಕಟಕಟೆಯಲ್ಲಿ ಸಿಲುಕಿದ್ದರು.

-----------

ಅಸಾರಾಮ್‌ ಬಾಪು

ಆರೋಪ: ಚಿಣ್ಣರ ಮೇಲೆ ಲೈಂಗಿಕ ದೌರ್ಜನ್ಯ
ಹಾಲಿ: ಜೈಲು ವಾಸ
* ಮೊದಲು ಸೈಕಲ್‌ ಮೆಕ್ಯಾನಿಕ್‌ ಆಗಿದ್ದ ಅಸಾರಾಮ್‌ ಬಾಪು ನಂತರ ಸ್ವ ಘೋಷಿತ ದೇವಮಾನವನಾದ.
* 2013ರಲ್ಲಿ 16 ವರ್ಷದವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
* ಅಸಾರಾಮ್‌ ಬಾಪು ಪುತ್ರ ನಾರಾಯಣ ಸಾಯಿಯನ್ನು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿಸಲಾಗಿದೆ.

---------

ಚಂದ್ರಸ್ವಾಮಿ
ಮೂಲ ಹೆಸರು: ನೇಮಿ ಚಂದ್ರ ಜೈನ್‌
ಮರಣ: 2017
ಸ್ವಘೋಷಿತ ದೇವಮಾನವ ಚಂದ್ರಸ್ವಾಮಿ ಪ್ರಮುಖ ರಾಜಕೀಯ ನಾಯಕರ ನಂಟು ಹೊಂದಿದ್ದ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಆತ್ಮೀಯರಾಗಿದ್ದ ಚಂದ್ರಸ್ವಾಮಿ ವಿರುದ್ಧ ವಿದೇಶಿ ವಿನಿಮಯ ಉಲ್ಲಂಘನೆ ಸೇರಿದಂತೆ ಹಲವಾರು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು.
* ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿಯೂ ಚಂದ್ರಸ್ವಾಮಿ ವಿಚಾರಣೆ ನಡೆಸಲಾಗಿತ್ತು.
* 2017ರಲ್ಲಿ ಚಂದ್ರಸ್ವಾಮಿ ನಿಧನ.

------------

ಅಶುತೋಷ್‌ ಮಹಾರಾಜ್‌
ಮರಣ: ಜನವರಿ 2014
ಮೂಲಸ್ಥಾನ: ಪಂಜಾಬ್‌
ಸಂಸ್ಥಾಪಕ: ದಿವ್ಯಜ್ಯೋತಿ ಜಾಗೃತಿ ಸಂಸ್ಥಾನ
* ಉತ್ತರಾಧಿಕಾರಿ ಯಾರಾಗಬೇಕೆಂಬ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
* ಬೆಂಬಲಿಗರು ಅಶುತೋಷ್‌ ಮಹಾರಾಜ್‌ ಪಾರ್ಥಿವ ಶರೀರವನ್ನು ಆಶ್ರಮದಲ್ಲಿಯೇ ಇಟ್ಟಿದ್ದರು. ಪಂಜಾಬ್‌ ಹರಿಯಾಣ ಹೈಕೋರ್ಟ್‌ ಆದೇಶ ನೀಡಿ ಗಾಜಿನ ಪೆಟ್ಟಿಗೆಯಲ್ಲಿ ಮೃತ ದೇಹ ಇಡಲು ಸೂಚಿಸಿತ್ತು.

---------

ಬಾಲಕ್‌ ಬ್ರಹ್ಮಚಾರಿ

ಮರಣ: 1993
ಮೂಲಸ್ಥಾನ: ಹೂಗ್ಲಿ, ಪಶ್ಚಿಮ ಬಂಗಾಳ
ಸಂಸ್ಥಾಪಕ: ಸಂತಾನ್‌ ದಾಲ್‌
ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಈತನ ಹೆಸರಿತ್ತು. ಈತನ ನಿಧನ ನಂತರ ಬೆಂಬಲಿಗರು 55 ದಿನಗಳ ಕಾಲ ಮೃತ ದೇಹವನ್ನು ಆಶ್ರಮದಲ್ಲಿಯೇ ಇಟ್ಟಿದ್ದರು.
* ಪೊಲೀಸರು ಆಶ್ರಮದೊಳಗೆ ನುಗ್ಗಿ ಮೃತದೇಹದ ಅವಶೇಷಗಳನ್ನು ಹೊರತಂದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಭಾರಿ ಪ್ರಮಾಣ ಶಸ್ತ್ರಾಸ್ತ್ರ, ಬಾಂಬ್‌ಗಳು ಸಿಕ್ಕಿದ್ದವು.

-----------

ಆನಂದಮೂರ್ತಿ
ಸಂಸ್ಥಾಪಕ: ಆನಂದ ಮಾರ್ಗ
ಮರಣ: 1993
* ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಭಾತ್‌ ರಂಜನ್‌ ಸರ್ಕಾರ್‌ ಎಂಬ ಮಾಜಿ ಪತ್ರಕರ್ತ ನಂತರ ಆನಂದ ಮಾರ್ಗ ಸ್ಥಾಪಿಸಿದ.
* ಸುಮಾರು 80ಕ್ಕೂ ಹೆಚ್ಚು ದೇಶಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದರು.
ಪುರುಲಿಯಾ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ಆನಂದ ಮಾರ್ಗದ ಹೆಸರು ಕೇಳಿಬಂದಿತ್ತು.

Babas behind bars: Godmen who fell foul of the law

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ