ಆ್ಯಪ್ನಗರ

ಬಾಬರ್‌ ಅಯೋಧ್ಯೆಗೆ ಭೇಟಿ ನೀಡಿರಲೇ ಇಲ್ಲ!

ಮೊಘಲ್‌ ದೊರೆ ಬಾಬರ್‌ 1528ರಲ್ಲಿ ಅಯೋಧ್ಯೆಗೆ ಭೇಟಿ ನೀಡಿರಲಿಲ್ಲ. ಅಂದು ಆತ ಈಗಿನ ವಿವಾದಗ್ರಸ್ತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳದಲ್ಲಿದ್ದ ದೇವಸ್ಥಾನ ಧ್ವಂಸಕ್ಕೂ ಆದೇಶ ನೀಡಿರಲಿಲ್ಲ ಎಂದು ಅಖಿಲ್‌ ಭಾರತ ಶ್ರೀರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.

PTI 29 Aug 2019, 5:00 am
ಹೊಸದಿಲ್ಲಿ: ಮೊಘಲ್‌ ದೊರೆ ಬಾಬರ್‌ 1528ರಲ್ಲಿ ಅಯೋಧ್ಯೆಗೆ ಭೇಟಿ ನೀಡಿರಲಿಲ್ಲ. ಅಂದು ಆತ ಈಗಿನ ವಿವಾದಗ್ರಸ್ತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳದಲ್ಲಿದ್ದ ದೇವಸ್ಥಾನ ಧ್ವಂಸಕ್ಕೂ ಆದೇಶ ನೀಡಿರಲಿಲ್ಲ ಎಂದು ಅಖಿಲ್‌ ಭಾರತ ಶ್ರೀರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಪೀಠದ ಮುಂದೆ ಮುಸ್ಲಿಂ ಸಂಘಟನೆಯೊಂದು ಸಲ್ಲಿಸಿದ್ದ ಮೊಕದ್ದಮೆಯಲ್ಲಿ ಪ್ರತಿವಾದ ಮಂಡಿಸಿದ ಸಮಿತಿ ಪರ ವಕೀಲ ಪಿ.ಎನ್‌.ಮಿಶ್ರಾ,''ಬಾಬರನ ಇತಿಹಾಸ ಕುರಿತು ಅನೇಕ ಪುಸ್ತಕಗಳು ಪ್ರಕಟಗೊಂಡಿವೆ. 'ತುಝಕ್‌-ಐ-ಬಾಬುರಿ ಅಥವಾ ಬಾಬರ್‌ನಾಮ', 'ಹುಮಾಯುನ್‌ನಾಮ', 'ಅಕ್ಬರ್‌ನಾಮ' ಮತ್ತು 'ತುಜುಕ್‌-ಐ-ಜಹಾಂಗಿರಿ' ಎಂದು ಇತಿಹಾಸ ಪುಸ್ತಕಗಳು ಮುಖ್ಯವಾಗಿದ್ದು, ಈ ಪೈಕಿ ಯಾವ ಪುಸ್ತಕದಲ್ಲೂ ಬಾಬ್ರಿ ಮಸೀದಿ ಅಸ್ತಿತ್ವದ ಪ್ರಸ್ತಾಪವೇ ಇಲ್ಲ ಎಂದು ತಿಳಿಸಿದರು. ''1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ ಮಿರ್‌ ಬಕಿ ಎಂಬಾತ ಬಾಬರ್‌ನ ಆಸ್ಥಾನದಲ್ಲಿ ಕಮಾಂಡರ್‌ ಆಗಿರಲೇ ಇಲ್ಲ. ಔರಂಗಜೇಬನ ಕಾಲಕ್ಕೆ ಹಿಂದೂ ದೇವಸ್ಥಾನಗಳ ಧ್ವಂಸದ ಬಗ್ಗೆ ಇತಿಹಾಸ ಉಲ್ಲೇಖಗಳು ಲಭಿಸುತ್ತವೆ. ಇಂತಹ ಉಲ್ಲೇಖಗಳನ್ನು ಆಧರಿಸಿ ಖಚಿತತೆಗೆ ಬರುವ ಅಗತ್ಯ ಇದೆ,'' ಎಂದು ಮಿಶ್ರಾ ವಾದಿಸಿದರು.
Vijaya Karnataka Web supreme-court

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ