ಆ್ಯಪ್ನಗರ

ಆಂಧ್ರ ಪ್ರದೇಶ ದೇಗುಲಗಳ ಮಂಡಳಿಯಲ್ಲಿ 50% ಮೀಸಲು

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯಲ್ಲಿಟ್ರಸ್ಟಿಗಳ ಸಂಖ್ಯೆಯನ್ನು 16ರಿಂದ 25ಕ್ಕೆ ಏರಿಸಲು ಸುಗ್ರೀವಾಜ್ಞೆ ಹೊರಡಿಸಿದೆ.

PTI 14 Sep 2019, 6:22 am
Vijaya Karnataka Web jagan
ಅಮರಾವತಿ: ರಾಜ್ಯದಲ್ಲಿರುವ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಟ್ರಸ್ಟಿಗಳಿಗೆ ಶೇಕಡ 50ರಷ್ಟು ಮೀಸಲು ಕಲ್ಪಿಸಿ ಆಂಧ್ರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. 1

987ರ ಆಂಧ್ರ ಪ್ರದೇಶ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ಟ್ರಸ್ಟಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸರಕಾರ ಈ ಮೀಸಲು ಕಲ್ಪಿಸಿದೆ. ಇನ್ನುಮುಂದೆ ದೇವಸ್ಥಾನದ ಆಡಳಿತ ಮಂಡಳಿಗಳಲ್ಲಿಸಾಮಾನ್ಯ ವರ್ಗಕ್ಕೆ ಸೇರಿದ ಟ್ರಸ್ಟಿಗಳ ಸಂಖ್ಯೆಗೆ ಸಮನಾಗಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವರ್ಗದ ಟ್ರಸ್ಟಿಗಳು ಇರಲಿದ್ದಾರೆ. ಇದೇ ವೇಳೆ ಸರಕಾರ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯಲ್ಲಿ ಟ್ರಸ್ಟಿಗಳ ಸಂಖ್ಯೆಯನ್ನು 16ರಿಂದ 25ಕ್ಕೆ ಏರಿಸಲು ಸುಗ್ರೀವಾಜ್ಞೆ ಹೊರಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ