ಆ್ಯಪ್ನಗರ

ಮುಸ್ಲಿಂ ಮಹಿಳೆಯ ಬೆರಳು, ಮಗನ ಕೈ ಕತ್ತರಿಸಿದ ಬಜರಂಗಿಗಳು

ಗಾಂಧಿನಗರದ ಛತ್ರಾಲ್‌ನಲ್ಲಿ ಇತ್ತೀಚೆಗೆ ಬಜರಂಗದಳದ ಕಾರ್ಯಕರ್ತರು ಮುಸ್ಲಿಂ ಮಹಿಳೆಯೊಬ್ಬರ ಬೆರಳುಗಳನ್ನು ಕತ್ತರಿಸಿ ಆಕೆಯ ಮಗನ ಕೈಗಳನ್ನು ಮುರಿದ್ದಾರೆ.

Vijaya Karnataka Web 12 Mar 2018, 11:37 am
ಅಹಮದಾಬಾದ್‌: ಗಾಂಧಿನಗರದ ಛತ್ರಾಲ್‌ನಲ್ಲಿ ಇತ್ತೀಚೆಗೆ ಬಜರಂಗದಳದ ಕಾರ್ಯಕರ್ತರು ಮುಸ್ಲಿಂ ಮಹಿಳೆಯೊಬ್ಬರ ಬೆರಳುಗಳನ್ನು ಕತ್ತರಿಸಿ ಆಕೆಯ ಮಗನ ಕೈಗಳನ್ನು ಮುರಿದ್ದಾರೆ.
Vijaya Karnataka Web bajrang dal men chop womans fingers break sons hands in gujarat
ಮುಸ್ಲಿಂ ಮಹಿಳೆಯ ಬೆರಳು, ಮಗನ ಕೈ ಕತ್ತರಿಸಿದ ಬಜರಂಗಿಗಳು


ಹಿಂದೂ ಸಂಘಟನೆಗಳ ಆದೇಶವನ್ನು ಉಲ್ಲಂಘಿಸಿರುವುದಕ್ಕೆ ಬಜರಂಗದಳದವರು ರೋಶನ್‌ ಬೀವಿ ಅವರ ಎಡ್ಐನ ಹೆಬ್ಬೆರಳು, ತೋರು ಬೆರಳು, ಮಧ್ಯದ ಬೆರಳನ್ನು ಕತ್ತರಿಸಿದ್ದಾರೆ. ಅವರ ಮಗ ಫರ್ಜಾನ್‌ ಎಂಬವನ ಕೈಗಳನ್ನು ಮುರಿದಿದ್ದಾರೆ. ಇಬ್ಬರೂ ಈಗ ಆಸ್ಪತ್ರೆಯಲ್ಲಿದ್ದಾರೆ.

ಈ ಪ್ರದೇಶದಲ್ಲಿ ಡಿಸೆಂಬರ್‌ ಆರರ ಬಳಿಕ ಉದ್ವಿಗ್ನ ವಾತಾವರಣವಿದೆ. 1992ರಲ್ಲಿ ಬಾಬರಿ ಮಸೀದಿ ಕೆಡವಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳವರು ಆ ಪ್ರದೇಶದಲ್ಲಿ ಮೆರವಣಿಗೆ ಆಯೋಜಿಸಿದ್ದರು. ಮೆರವಣಿಗೆಯ ದಿನ ಮನೆಯಿಂದ ಹೊರ ಬರದಂತೆ ಈ ಸಂತ್ರಸ್ತ ತಾಯಿ ಮತ್ತು ಮಗನಿಗೆ ಬಜರಂಗದಳದವರು ಸೂಚಿಸಿದ್ದರು. ಆದರೆ ಅವರು ತಮ್ಮ ಜಾನುವಾರು ಮೇಯಿಸಲು ಹೊರಗೆ ಬಂದಿದ್ದರು.ಹಾಲು ಮಾರುವ ವ್ಯಕ್ತಿಯೊಬ್ಬರು ಬಜರಂಗದಳದವರ ಈ ದೌರ್ಜನ್ಯ ನೋಡಿ ತಾಯಿ, ಮಗನನ್ನು ರಕ್ಷಿಸಿದ್ದಾರೆ ಎಂದು ಸಂಬಂಧಿ ಅಸ್ಲಂ ಸೈಯ್ಯದ್‌ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ