ಆ್ಯಪ್ನಗರ

ಬಾಲಾಕೋಟ್‌ನಲ್ಲಿ 170 ಉಗ್ರರು ಔಟ್‌

ಭಾರತವು ಫೆಬ್ರವರಿ 26ರಂದು ಬಾಲಾಕೋಟ್‌ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಇಟಲಿಯ ಪತ್ರಕರ್ತೆಯೊಬ್ಬರು ಸುಳ್ಳು ಎಂದು ಸಾಕ್ಷಿ ಸಮೇತ ಬಯಲಿಗೆಳೆದಿದ್ದು, ಆ ದಾಳಿಯಲ್ಲಿ 170ರಷ್ಟು ಜೈಶೆ ಮೊಹಮ್ಮದ್‌ ಉಗ್ರರು ಹತರಾಗಿದ್ದಾರೆ ಎಂದು ವರದಿ ಮಾಡಿದ್ದಾರೆ.

Vijaya Karnataka 9 May 2019, 1:05 pm
ಭಾರತದ ವಾಯುದಾಳಿ ಬಗ್ಗೆ ಇಟಲಿ ಪತ್ರಕರ್ತೆ ಮಹತ್ವದ ವರದಿ
Vijaya Karnataka Web balakot strike 170 militants killed
ಬಾಲಾಕೋಟ್‌ನಲ್ಲಿ 170 ಉಗ್ರರು ಔಟ್‌


ಹೊಸದಿಲ್ಲಿ: ಭಾರತವು ಫೆಬ್ರವರಿ 26ರಂದು ಬಾಲಾಕೋಟ್‌ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಇಟಲಿಯ ಪತ್ರಕರ್ತೆಯೊಬ್ಬರು ಸುಳ್ಳು ಎಂದು ಸಾಕ್ಷಿ ಸಮೇತ ಬಯಲಿಗೆಳೆದಿದ್ದು, ಆ ದಾಳಿಯಲ್ಲಿ 170ರಷ್ಟು ಜೈಶೆ ಮೊಹಮ್ಮದ್‌ ಉಗ್ರರು ಹತರಾಗಿದ್ದಾರೆ ಎಂದು ವರದಿ ಮಾಡಿದ್ದಾರೆ.

ದಕ್ಷಿಣ ಏಷ್ಯಾ ಭಾಗದ ವರದಿಗಾರಿಕೆಯಲ್ಲಿ ವಿಶೇಷಜ್ಞೆಯಾಗಿರುವ ಪತ್ರಕರ್ತೆ ಫ್ರಾನ್ಸಿಸ್ಕಾ ಮರೀನೋ ಈ ವಿವರ ನೀಡಿದ್ದು, ದಾಳಿ ನಡೆದ ಮುಂಜಾನೆ ಆರು ಗಂಟೆಗೆ ಪಾಕಿಸ್ತಾನಿ ಸೇನೆಯ ಶಿಂಕಿಯಾಗಿ ನೆಲೆಯ ಸೈನಿಕರು ಬಾಲಾಕೋಟ್‌ಗೆ ಬಂದಿದ್ದು, ಶವಗಳು ಮತ್ತು ಗಾಯಾಳುಗಳನ್ನು ಅಲ್ಲಿಂದ ಸಾಗಿಸಿದ್ದಾರೆ. ಸ್ಥಳದಲ್ಲೇ 150 ಮಂದಿ ಮೃತಪಟ್ಟರೆ, 20 ಮಂದಿ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 45 ಮಂದಿ ಈಗಲೂ ಸೇನಾ ವೈದ್ಯರಿಂದ(ಆಸ್ಪತ್ರೆಯಲ್ಲಿ ಅಲ್ಲ) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮರೀನೊ ವರದಿ ಮಾಡಿದ್ದಾರೆ.

ಸತ್ತವರಲ್ಲಿ 11 ಮಂದಿ ಬಾಂಬ್‌ ತಯಾರಕರು, ಶಸ್ತ್ರಾಸ್ತ್ರ ತರಬೇತುದಾರರು ಸೇರಿದ್ದಾರೆ ಎನ್ನುತ್ತಾರೆ ಮರೀನೊ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ