ಆ್ಯಪ್ನಗರ

ಲವ್‌ ಜಿಹಾದ್‌ ಹೆಸರಲ್ಲಿ ಯುವತಿ ಕೊಂದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಬಾಬಾ ರಾಮದೇವ್‌ ಆಗ್ರಹ

ಹರಿಯಾಣದ ಬಲ್ಲಾಬ್‌ಗರ್‌ ಕಾಲೇಜಿನ ಮುಂದೆ ಅಕ್ಟೋಬರ್ 26ರಂದು 21 ವರ್ಷದ ಯುವತಿ ನಿಖಿತಾ ತೋಮರ್‌ನನ್ನು ಗುಂಡಿಕ್ಕಿ ಕೊಂದಿರುವ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ ಎಂದು ಯೋಗ ಗುರು ಬಾಬಾ ರಾಮದೇವ್‌ ಒತ್ತಾಯಿಸಿದ್ದಾರೆ. ಈ ಮೂಲಕ ಘಟನೆ ಮರುಕಳಿಸದಂತೆ ತಡೆಯಿರಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Agencies 30 Oct 2020, 4:15 pm
ಹರಿದ್ವಾರ: ಹರಿಯಾಣದ ಬಲ್ಲಾಬ್‌ಗರ್‌ ಕಾಲೇಜಿನ ಮುಂದೆ 21 ವರ್ಷದ ಯುವತಿ ನಿಖಿತಾ ತೋಮರ್‌ನನ್ನು ಗುಂಡಿಕ್ಕಿ ಕೊಂದಿರುವ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ ಎಂದು ಯೋಗ ಗುರು ಬಾಬಾ ರಾಮದೇವ್‌ ಒತ್ತಾಯಿಸಿದ್ದಾರೆ.
Vijaya Karnataka Web ballabhgarh murder ramdev demands public hanging of nikita tomars killer
ಲವ್‌ ಜಿಹಾದ್‌ ಹೆಸರಲ್ಲಿ ಯುವತಿ ಕೊಂದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಬಾಬಾ ರಾಮದೇವ್‌ ಆಗ್ರಹ


ಈ ಹತ್ಯೆಯನ್ನು ಲವ್‌ ಜಿಹಾದ್‌ ಎಂದು ಕರೆದಿರುವ ಯೋಗಗುರು ಬಾಬಾ ರಾಮ್‌ದೇವ್‌, ದೇಶದ ವಿವಿಧ ಭಾಗಗಳಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳು ನಾಚಿಕೆಗೇಡು. ಇವು ಭಾರತದ ಹೆಸರಿನ ಮೇಲೆ ಕಳಂಕ ತರುತ್ತಿವೆ ಎಂದು ಹೇಳಿದ್ದಾರೆ.

ಪತಂಜಲಿ ಯೋಗಪೀಠದಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದರಿಂದ ಮಾತ್ರ ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

ಲವ್‌ ಜಿಹಾದ್‌ ತಡೆಯಲು ಕಠಿಣ ಕಾನೂನುಗಳನ್ನು ರೂಪಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳಿದ ಅವರು, ಇಂತಹ ಘಟನೆಗಳಿಗೆ ಬ್ರೇಕ್‌ ಹಾಕಲು ಲವ್‌ ಜಿಹಾದ್‌ನ್ನು ವಿರೋಧಿಸುವಂತೆ ಮುಸ್ಲಿಂ ಧರ್ಮಗುರುಗಳಿಗೆ ಕರೆ ನೀಡಿದರು.

ಮಟ ಮಟ ಮಧ್ಯಾಹ್ನವೇ ಶೂಟೌಟ್‌ ಮಾಡಿದ ಕಿರಾತಕರು; ಹರ್ಯಾಣದ ರಸ್ತೆಯಲ್ಲಿ ಬಿತ್ತು 21ರ ಯುವತಿಯ ಹೆಣ..!

ಅಕ್ಟೋಬರ್ 26ರಂದು ನಿಕಿತಾ ತೋಮರ್ ಎಂಬ ಯುವತಿಯನ್ನು ಬಲ್ಲಾಬ್‌ಗರ್‌ ಕಾಲೇಜಿನ ಹೊರಗೆ ಹಾಡಹಗಲಲ್ಲಿಯೇ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಗುರ್‌ಗಾಂವ್‌ನ ಸೊಹ್ನಾ ಮೂಲದ ಮುಖ್ಯ ಆರೋಪಿ ತೌಸೆಫ್ ಮತ್ತು ಆತನ ಸಹಚರ ನುಹ್‌ ಮೂಲದ ರೆಹಾನ್ ಎಂಬಾತನನ್ನು ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ