ಆ್ಯಪ್ನಗರ

ಈರುಳ್ಳಿ ಮಾರುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಬಂಡಾರು

ಈರುಳ್ಳಿ ಮಾರಾಟ ಮಾಡಲು ತಾಯಿಗೆ ನೆರವಾಗುತ್ತಿದ್ದನ್ನು ಬಂಡಾರು ದತ್ತಾತ್ರೇಯ ಸ್ಮರಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 20 Jul 2016, 2:14 pm
ಹೊಸದಿಲ್ಲಿ: 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕುಟುಂಬದ ಉದ್ದಿಮೆಯಲ್ಲಿ ತೊಡಗಿಕೊಳ್ಳುವುದನ್ನು ಬಾಲ ಕಾರ್ಮಿಕರ (ನಿಷೇಧ) ವಿಧೇಯಕದಿಂದ ಹೊರಗಿಟ್ಟಿರುವ ನಿರ್ಧಾರವನ್ನು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web bandaru dattatreya recalls days as onion seller
ಈರುಳ್ಳಿ ಮಾರುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಬಂಡಾರು


ತಮ್ಮ ಬಾಲ್ಯದ ದಿನಗಳನ್ನು ನೆನೆಪಿಸಿಕೊಂಡ ದತ್ತಾತ್ರೇಯ, ಶಾಲೆ ಮುಗಿದ ನಂತರ ಈರುಳ್ಳಿ ಮಾರಾಟ ಮಾಡಲು ತಾಯಿಗೆ ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯಿದೆ ವಿಧೇಯಕವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದ್ದು, ಲೋಕಸಭೆ ಅನುಮೋದನೆ ಪಡೆದ ನಂತರ ಅಧಿಕೃತವಾಗಿ ಕಾನೂನು ಆಗಲಿದೆ.

ಬಚ್ಪನ್‌ ಬಚಾವೋ ಆಂದೋಲನ್‌ ಸೇರಿದಂತೆ ಕೆಲ ಎನ್‌ಜಿಓಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇನೆ. ಎನ್‌ಜಿಓಗಳ ಒತ್ತಡಕ್ಕೆ ಮಣಿದು ಕೆಲವು ತಿದ್ದುಪಡಿಗಳನ್ನು ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಧೇಯಕದಡಿ 14 ವರ್ಷದೊಳಗಿನವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. 15-18ವರ್ಷದೊಳಗಿನವರನ್ನು ಅಪಾಯಕಾರಿ ಕೆಲಸಕ್ಕೆ ನಿಯೋಜಿಸುವಂತಿಲ್ಲ. ಕುಲಕಸುಬಿಗೆ ಮನೆ ಮಕ್ಕಳು ನೆರವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ