ಆ್ಯಪ್ನಗರ

ಸಾಲಕ್ಕಾಗಿ ಅಪರಿಚತರಿಗೆ ದಾಖಲೆ ಪತ್ರ ನೀಡ್ತೀರಾ? ಹುಷಾರ್

ಬ್ಯಾಂಕ್ ಆಫ್ ಬರೋಡಾದಿಂದ 1.45 ಕೋಟಿ ರೂಪಾಯಿ ಸಾಲ ಮರುಪಾವತಿಸಿ ಎಂದು ನೋಟಿಸ್ ಬಂದಾಗ ಚಾವ್ಡಾ ಅಕ್ಷರಶಃ ಆಘಾತಕ್ಕೊಳಗಾದರು.

ಟೈಮ್ಸ್ ಆಫ್ ಇಂಡಿಯಾ 27 Jun 2017, 12:50 pm
ವಡೋದರಾ: ಬ್ಯಾಂಕ್ ಆಫ್ ಬರೋಡಾದಿಂದ 1.45 ಕೋಟಿ ರೂಪಾಯಿ ಸಾಲ ಮರುಪಾವತಿಸಿ ಎಂದು ನೋಟಿಸ್ ಬಂದಾಗ ಕರ್ಜನ್ ಪಟ್ಟಣದಲ್ಲಿ ಬೋಧನಾ ತರಗತಿ ನಡೆಸುತ್ತಿರುವ ಸುರೇಂದ್ರಸೀನ್ ಚಾವ್ಡಾ ಅಕ್ಷರಶಃ ಆಘಾತಕ್ಕೊಳಗಾದರು.
Vijaya Karnataka Web bank asks man to repay rs 1 45 crore he never took
ಸಾಲಕ್ಕಾಗಿ ಅಪರಿಚತರಿಗೆ ದಾಖಲೆ ಪತ್ರ ನೀಡ್ತೀರಾ? ಹುಷಾರ್


ಬ್ಯಾಂಕ್ ನೀಡಿರುವ ನೋಟಿಸ್‌ನಲ್ಲಿ ಜಾಮೀನುದಾರ ಎಂದು ಉಲ್ಲೇಖಿಸಲಾಗಿದೆ. ಆದರೆ, ಚಾವ್ಡಾ ಅವರು ಯಾವುದೇ ಬ್ಯಾಂಕ್‌ನಲ್ಲಿ ಸಾಲವೂ ಪಡೆದಿಲ್ಲ, ಬೇರೊಬ್ಬರ ಸಾಲಕ್ಕೆ ಜಾಮೀನುದಾರೂ ಆಗಿಲ್ಲ. ಹಾಗಿದ್ದರೇ ಬ್ಯಾಂಕ್ ಅವರಿಗೇಕೆ ನೋಟಿಸ್ ಜಾರಿ ಮಾಡಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಚಾವ್ಡಾ ನೋಟಿಸ್ ಪರಿಶೀಲಿಸಿದ್ದು, ವಡೋದರಾ ಮೂಲದ ಎಂ ಟೆಕ್ ಹಾರ್ಡ್‌ವೇರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರು ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.

2014ರಲ್ಲಿ ಪತ್ರಿಕೆಯ ಜಾಹೀರಾತು ನೋಡಿ ಜಾವ್ಡಾ ಅವರು 15 ಲಕ್ಷ ರೂಪಾಯಿ ಶಿಕ್ಷಣ ಸಾಲಕ್ಕಾಗಿ ಎಂ ಟೆಕ್ ಹಾರ್ಡ್‌ವೇರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರನ್ನು ಭೇಟಿ ಮಾಡಿದ್ದರು. ಸಾಲ ಪಡೆಯಲು ರಾಜೇಶ್ ಸೋನಿ ಮತ್ತು ಕೌಮಿಲ್ ಮೋದಿ ಅವರಿಗೆ ಅಧಿಕೃತ ದಾಖಲೆಗಳನ್ನು ನೀಡಿದ್ದರು. ಆದರೆ, ಈ ಇಬ್ಬರು ವಂಚಕರು ಕಂಪನಿಯ ಹೆಸರಿನಲ್ಲಿ ಸಾಲ ಪಡೆದು ಜಾವ್ಡಾ ಅವರನ್ನು ಜಾಮೀನು ಮಾಡಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ದಾಖಲೆಗಳನ್ನು ದುರ್ಬಬಳಕೆ ಮಾಡಿಕೊಂಡು ವಂಚಿಸಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಬೇಕಿದ್ದರೆ ಬ್ಯಾಂಕ್‌ನ ಸಿಸಿಟಿವಿ ಪರಿಶೀಲಿಸಿ ಎಂದು ಚಾವ್ಡಾ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ