ಆ್ಯಪ್ನಗರ

ಬೆಳೆ ಸಾಲಕ್ಕೆ ‘ಹಾಸಿಗೆ’ಯ ಲಂಚ ಬಯಸಿದ ಅಧಿಕಾರಿ

ಬೆಳೆ ಸಾಲ ಪಡೆಯಲು ಬಂದ ರೈತ ಮಹಿಳೆಯೊಬ್ಬರನ್ನು ಹಣಕಾಸು ಸಂಸ್ಥೆಯ ಅಧಿಕಾರಿ ‘ಹಾಸಿಗೆ’ಗೆ ಕರೆದ ಅಸಹ್ಯಕರ ಪ್ರಕರಣ ಶನಿವಾರ ವರದಿಯಾಗಿದೆ.

TIMESOFINDIA.COM 24 Jun 2018, 9:26 am
ಮುಂಬಯಿ: ಬೆಳೆ ಸಾಲ ಪಡೆಯಲು ಬಂದ ರೈತ ಮಹಿಳೆಯೊಬ್ಬರನ್ನು ಹಣಕಾಸು ಸಂಸ್ಥೆಯ ಅಧಿಕಾರಿ ‘ಹಾಸಿಗೆ’ಗೆ ಕರೆದ ಅಸಹ್ಯಕರ ಪ್ರಕರಣ ಶನಿವಾರ ವರದಿಯಾಗಿದೆ.
Vijaya Karnataka Web sex demand


ಮಲ್ಕಾಪುರ ತಹಸೀಲ್‌ ವ್ಯಾಪ್ತಿಯ ದಾಟಲಾದಲ್ಲಿ ಈ ಪ್ರಕರಣ ನಡೆದಿದ್ದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ ರಾಜೇಶ್‌ ಹಿವಸೆ ಮತ್ತು ಇಲಾಖೆಯ ಗುಮಾಸ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯ ಜತೆಗೂಡಿ ಬಂದಿದ್ದ ಮಹಿಳೆಯಿಂದ ಅರ್ಜಿ ಹಾಗೂ ಅವರ ಸಂಪರ್ಕ ವಿವರ ಪಡೆದುಕೊಂಡ ಅಧಿಕಾರಿ, ಆ ಬಳಿಕ ಕರೆ ಮಾಡಿ ಸಾಲ ಮಂಜೂರಿಗೆ ಪ್ರತಿಯಾಗಿ ತಮ್ಮ ಲೈಂಗಿಕ ವಾಂಛೆ ಈಡೇರಿಸುವಂತೆ ಕೇಳಿಕೊಂಡಿದ್ದ. ಅದಾಗಿ, ಅಂತಿಮ ಸಮ್ಮತಿ ಪಡೆದು ಬರಲು ಮಹಿಳೆಯ ಬಳಿಗೆ ಗುಮಾಸ್ತನನ್ನೂ ಕಳಿಸಿಕೊಟ್ಟಿದ್ದ.

ಅಧಿಕಾರಿ ಜತೆಗಿನ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದ ಮಹಿಳೆ, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ರಾಜೇಶ್‌ ಮತ್ತು ಗುಮಾಸ್ತ ಇಬ್ಬರೂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರ ಕಸರತ್ತು ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ