ಆ್ಯಪ್ನಗರ

ಉಗ್ರಮುಕ್ತ ಜಿಲ್ಲೆಯಾದ ಬಾರಾಮುಲ್ಲಾ

2018ರಲ್ಲಿ ರಾಜ್ಯದಲ್ಲಿ 256 ಉಗ್ರರನ್ನು ಹತ್ಯೆ ಮಾಡಲಾಗಿದೆ. ಆ ಪೈಕಿ ದಕ್ಷಿಣ ಕಾಶ್ಮೀರದಲ್ಲಿ ಅತಿ ಹೆಚ್ಚು ಅಂದರೆ 127 ಉಗ್ರರನ್ನು ಹೊಡೆದುರುಳಿಸಲಾಗಿದೆ. ಜಮ್ಮು ವಲಯದಲ್ಲಿ ಒಂಬತ್ತು ಉಗ್ರರ ಹತ್ಯೆಯಾಗಿದೆ. ಉಗ್ರ ಸಂಘಟನೆಗಳ ಕಾರ್ಯಾಚರಣೆಯ ಪ್ರಮುಖ ತಾಣವಾಗಿರುವ ಶೋಪಿಯಾನ್‌ನಲ್ಲಿ 43 ಉಗ್ರರ ಹತ್ಯೆ ಮಾಡಲಾಗಿದೆ.

Vijaya Karnataka 25 Jan 2019, 5:00 am
ಶ್ರೀನಗರ: ಒಂದು ಕಾಲದಲ್ಲಿ ಉಗ್ರರ ಅಡಗುತಾಣವಾಗಿದ್ದ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯನ್ನು 'ಉಗ್ರರ ಉಪಟಳದಿಂದ ಮುಕ್ತವಾದ ಜಿಲ್ಲೆ' ಎಂದು ಘೋಷಿಸಲಾಗಿದೆ.
Vijaya Karnataka Web baramulla once the hotbed of militancy declared terrorist free
ಉಗ್ರಮುಕ್ತ ಜಿಲ್ಲೆಯಾದ ಬಾರಾಮುಲ್ಲಾ


''ಲಷ್ಕರೆ ತಯ್ಯಬಾ ಸಂಘಟನೆಯ ಮೂವರು ಉಗ್ರರನ್ನು ಬುಧವಾರ ಹತ್ಯೆ ಮಾಡಲಾಗಿದೆ. ಈಗ ಜಿಲ್ಲೆಯಲ್ಲಿ ಒಬ್ಬ ಉಗ್ರನೂ ಇಲ್ಲ. ವ್ಯಾಪಕ ಶೋಧ ಕಾರ್ಯದ ಬಳಿಕ ಇದನ್ನು ಖಚಿತಪಡಿಸಿಕೊಂಡೇ ಈ ಘೋಷಣೆ ಮಾಡಲಾಗುತ್ತಿದೆ,'' ಎಂದು ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ದಲ್ಬಾಗ್‌ ಸಿಂಗ್‌ ಗುರುವಾರ ಪ್ರಕಟಿಸಿದರು. ಬಾರಾಮುಲ್ಲಾ ಉಗ್ರರಿಂದ ಕಾಟದಿಂದ ಮುಕ್ತವಾದ ಕಣಿವೆ ರಾಜ್ಯದ ಮೊದಲ ಜಿಲ್ಲೆಯಾಗಿದೆ.

ಜಿಲ್ಲೆಯಲ್ಲಿ 2018ರಲ್ಲಿ ರಾಜ್ಯದಲ್ಲಿ 256 ಉಗ್ರರನ್ನು ಹತ್ಯೆ ಮಾಡಲಾಗಿದೆ. ಆ ಪೈಕಿ ದಕ್ಷಿಣ ಕಾಶ್ಮೀರದಲ್ಲಿ ಅತಿ ಹೆಚ್ಚು ಅಂದರೆ 127 ಉಗ್ರರನ್ನು ಹೊಡೆದುರುಳಿಸಲಾಗಿದೆ. ಜಮ್ಮು ವಲಯದಲ್ಲಿ ಒಂಬತ್ತು ಉಗ್ರರ ಹತ್ಯೆಯಾಗಿದೆ. ಉಗ್ರ ಸಂಘಟನೆಗಳ ಕಾರ್ಯಾಚರಣೆಯ ಪ್ರಮುಖ ತಾಣವಾಗಿರುವ ಶೋಪಿಯಾನ್‌ನಲ್ಲಿ 43 ಉಗ್ರರ ಹತ್ಯೆ ಮಾಡಲಾಗಿದೆ ಎಂದು ಸಿಂಗ್‌ ಮಾಹಿತಿ ನೀಡಿದ್ದಾರೆ.

ಬಂಧನ: ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಜೈಷೆ ಮೊಹಮದ್‌ ಸಂಘಟನೆಯ ಉಗ್ರನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್‌ ಲತೀಫ್‌ ಉರ್ಫ್‌ ದಿಲಾವರ್‌ ಬಂಧಿತ ಉಗ್ರ. ಜೈಷೆ ಸಂಘಟನೆಯು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ನಡೆಸಿದ್ದ ದಾಳಿ ಮಾದರಿಯಲ್ಲೇ ದಿಲ್ಲಿಯಲ್ಲಿಯೂ ಗಣರಾಜ್ಯೋತ್ಸವದಂದು ದಾಳಿ ನಡೆಸಲಿದ್ದಾರೆ ಎಂಬ ಖಚಿತ ಮಾಹಿತಿ ಬೆನ್ನು ಹತ್ತಿದ ಪೊಲೀಸರು ಈತನನ್ನು ಜ.21ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

...........

ಕೇರಳ ಸ್ಫೋಟದ ಆರೋಪಿ ಸೆರೆ

ಕೇರಳದ ಕೊಯಿಕ್ಕೋಡ್‌ನಲ್ಲಿ 2006ರಲ್ಲಿ ನಡೆದ ಬಾಂಬ್‌ ಸ್ಫೋಟದ ಆರೋಪಿಯನ್ನು ದಿಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಣ್ಣೂರು ಜಿಲ್ಲೆಯ ತಲಶ್ಶೇರಿ ನಿವಾಸಿ ಮೊಹಮದ್‌ ಅಶರ್‌ ಬಂಧಿತ ವ್ಯಕ್ಯಿ. ಈತ ಸೌದಿ ಅರೇಬಿಯಾದಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ)ದ ಅಧಿಕಾರಿಗಳು ಬಂಧಿಸಿದರು. 2006ರ ಮಾರ್ಚ್‌ 3ರಂದು ಕೊಯಿಕ್ಕೋಡ್‌ನ ಗ್ರಾಮಾಂತರ ಮತ್ತು ನಗರ ಬಸ್‌ ನಿಲ್ದಾಣಗಳಲ್ಲಿ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಇಬ್ಬರು ಮೃತಪಟ್ಟಿದ್ದರು. ಈತನ ವಿರುದ್ಧ ಎನ್‌ಐಎ 2010ರಲ್ಲಿ ಆರೋಪಪಟ್ಟಿ ದಾಖಲಿಸಿತ್ತು.

.....

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ