ಶ್ರೀನಗರ: 370ನೇ ವಿಧಿ ರದ್ದತಿ ಹಾಗೂ ರಾಜ್ಯ ಪುನರ್ವಿಂಗಡನೆ ಕ್ರಮಕ್ಕೆ ಮುನ್ನೆಚ್ಚರಿಕೆಯಾಗಿ ಕಳೆದ 15 ದಿನಗಳಿಂದ ವಿಧಿಸಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರಕಾರ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಜಮ್ಮು ಮತ್ತು ಕಾಶ್ಮೀರ ರಾಜಧಾನಿಯ ವಾಣಿಜ್ಯ ಕೇಂದ್ರ 'ಲಾಲ್ ಚೌಕ್'ನಲ್ಲಿ ಭದ್ರತಾ ಪಡೆಗಳು ಬ್ಯಾರಿಕೇಡನ್ನು ತೆಗೆದು ಹಾಕಿವೆ. ಈ ಮೂಲಕ ವ್ಯಾಪಾರಸ್ಥರಿಗೆ ಆತಂಕ ಮುಕ್ತ ವಾತಾವರಣವನ್ನು ಭದ್ರತಾ ಪಡೆಗಳು ನಿರ್ಮಿಸಿಕೊಟ್ಟಂತಾಗಿದೆ.
ವಿವಿಧ ಜಿಲ್ಲೆಗಳ ನಡುವೆ ಖಾಸಗಿ ಕಾರುಗಳ ಸಂಚಾರ, ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸರಾಗವಾಗಿ ಸಾಗುತ್ತಿದೆ. ಶೇ. 98ರಷ್ಟು ಅಧಿಕಾರಿಗಳು ಕಚೇರಿಗಳಿಗೆ ಹಾಜರಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬರಬೇಕಿದೆ.
......
ಪೂಂಛ್ನಲ್ಲಿ ಯೋಧ ಹುತಾತ್ಮ
ಜಮ್ಮು: ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಪಾಕಿಸ್ತಾನ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಬಿಹಾರ ಮೂಲದ ಯೋಧ ರವಿರಂಜನ್ ಕುಮಾರ್ ಸಿಂಗ್(36) ಹುತಾತ್ಮರಾಗಿದ್ದಾರೆ.
ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಗಡಿಯಲ್ಲಿನ ಭಾರತೀಯ ಸೇನೆ ಚೆಕ್ಪೋಸ್ಟ್ ಮತ್ತು ಗ್ರಾಮಗಳನ್ನು ಗುರಿಯಾಗಿಸಿ ಪಾಕ್ ಸೈನಿಕರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
.................
ಪ್ರಜಾಪ್ರಭುತ್ವದ ಹೊರತಾಗಿ ಬೇರೆ ನಿರ್ಣಯವನ್ನು ಕಾಶ್ಮೀರ ವಿಚಾರವಾಗಿ ಹೊಂದಲು ಸಾಧ್ಯವೇ ಇಲ್ಲ.
ವಿಶ್ವದಲ್ಲಿ ಪ್ರಜಾಪ್ರಭುತ್ವ ಹೊಂದಿದ ಮೊದಲ ಪಾಶ್ಚಿಮಾತ್ಯವಲ್ಲದ ರಾಷ್ಟ್ರ ಎಂಬ ಹೆಗ್ಗಳಿಕೆಯ ಭಾರತ, ಕಾಶ್ಮೀರದ ಕುರಿತಾದ ನಡೆಯಿಂದ ತನ್ನ ಘನತೆ ಕಳೆದುಕೊಳ್ಳುತ್ತಿರುವ ಬಗ್ಗೆ ಬೇಸರವಿದೆ. ಸರಕಾರ ತನ್ನ ಹಲವು ನಡೆಗಳಲ್ಲಿ ಸೋತಿದೆ. ನಾನೊಬ್ಬ ಭಾರತೀಯ ಎಂಬ ಬಗ್ಗೆ ಈಗ ಹೆಮ್ಮೆ ಎನಿಸುತ್ತಿಲ್ಲ.
- ಅಮತ್ರ್ಯ ಸೇನ್, ಖ್ಯಾತ ಆರ್ಥಿಕ ತಜ್ಞ
ವಿವಿಧ ಜಿಲ್ಲೆಗಳ ನಡುವೆ ಖಾಸಗಿ ಕಾರುಗಳ ಸಂಚಾರ, ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸರಾಗವಾಗಿ ಸಾಗುತ್ತಿದೆ. ಶೇ. 98ರಷ್ಟು ಅಧಿಕಾರಿಗಳು ಕಚೇರಿಗಳಿಗೆ ಹಾಜರಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬರಬೇಕಿದೆ.
......
ಪೂಂಛ್ನಲ್ಲಿ ಯೋಧ ಹುತಾತ್ಮ
ಜಮ್ಮು: ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಪಾಕಿಸ್ತಾನ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಬಿಹಾರ ಮೂಲದ ಯೋಧ ರವಿರಂಜನ್ ಕುಮಾರ್ ಸಿಂಗ್(36) ಹುತಾತ್ಮರಾಗಿದ್ದಾರೆ.
ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಗಡಿಯಲ್ಲಿನ ಭಾರತೀಯ ಸೇನೆ ಚೆಕ್ಪೋಸ್ಟ್ ಮತ್ತು ಗ್ರಾಮಗಳನ್ನು ಗುರಿಯಾಗಿಸಿ ಪಾಕ್ ಸೈನಿಕರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
.................
ಪ್ರಜಾಪ್ರಭುತ್ವದ ಹೊರತಾಗಿ ಬೇರೆ ನಿರ್ಣಯವನ್ನು ಕಾಶ್ಮೀರ ವಿಚಾರವಾಗಿ ಹೊಂದಲು ಸಾಧ್ಯವೇ ಇಲ್ಲ.
ವಿಶ್ವದಲ್ಲಿ ಪ್ರಜಾಪ್ರಭುತ್ವ ಹೊಂದಿದ ಮೊದಲ ಪಾಶ್ಚಿಮಾತ್ಯವಲ್ಲದ ರಾಷ್ಟ್ರ ಎಂಬ ಹೆಗ್ಗಳಿಕೆಯ ಭಾರತ, ಕಾಶ್ಮೀರದ ಕುರಿತಾದ ನಡೆಯಿಂದ ತನ್ನ ಘನತೆ ಕಳೆದುಕೊಳ್ಳುತ್ತಿರುವ ಬಗ್ಗೆ ಬೇಸರವಿದೆ. ಸರಕಾರ ತನ್ನ ಹಲವು ನಡೆಗಳಲ್ಲಿ ಸೋತಿದೆ. ನಾನೊಬ್ಬ ಭಾರತೀಯ ಎಂಬ ಬಗ್ಗೆ ಈಗ ಹೆಮ್ಮೆ ಎನಿಸುತ್ತಿಲ್ಲ.
- ಅಮತ್ರ್ಯ ಸೇನ್, ಖ್ಯಾತ ಆರ್ಥಿಕ ತಜ್ಞ