ಆ್ಯಪ್ನಗರ

ಗೋ ಸಮರ ತೀವ್ರ: ಕೇರಳ, ತ.ನಾಡು ಸಹಿತ ಹಲವೆಡೆ ಪ್ರತಿಭಟನೆ

: ಜಾನುವಾರು ಮಾರುಕಟ್ಟೆಗಳಿಂದ ರಾಸುಗಳನ್ನು ಕಸಾಯಿ ಖಾನೆಗಳಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸುವ ಕೇಂದ್ರ ಸರಕಾರ ನಿಯಮಾವಳಿಯಿಂದ ಹುಟ್ಟಿಕೊಂಡಿರುವ ಪರ-ವಿರೋಧ ಸಮರ ಸೋಮವಾರ ತೀವ್ರ ರೂಪವನ್ನು ಪಡೆದುಕೊಂಡಿದೆ.

ವಿಕ ಸುದ್ದಿಲೋಕ 30 May 2017, 7:22 am
ಹೊಸದಿಲ್ಲಿ/ಕೋಲ್ಕೊತ್ತಾ/ಚೆನ್ನೈ: ಜಾನುವಾರು ಮಾರುಕಟ್ಟೆಗಳಿಂದ ರಾಸುಗಳನ್ನು ಕಸಾಯಿ ಖಾನೆಗಳಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸುವ ಕೇಂದ್ರ ಸರಕಾರ ನಿಯಮಾವಳಿಯಿಂದ ಹುಟ್ಟಿಕೊಂಡಿರುವ ಪರ-ವಿರೋಧ ಸಮರ ಸೋಮವಾರ ತೀವ್ರ ರೂಪವನ್ನು ಪಡೆದುಕೊಂಡಿದೆ.
Vijaya Karnataka Web beef fest and protest
ಗೋ ಸಮರ ತೀವ್ರ: ಕೇರಳ, ತ.ನಾಡು ಸಹಿತ ಹಲವೆಡೆ ಪ್ರತಿಭಟನೆ


ಹೊಸ ನಿಯಮಾವಳಿ ಬಹುಜನರ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಎಂದು ಆಪಾದಿಸಿ ದೇಶದ ಹಲವೆಡೆ ಪ್ರತಿಭಟನೆ, ಬೀಫ್‌ ಫೆಸ್ಟ್‌ ಗಳು ನಡೆದವು. ಆದರೆ, ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಬೀಫ್‌ ಫೆಸ್ಟ್‌ ಪರ ಮತ್ತು ವಿರುದ್ಧ ಧ್ವನಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಯಿತು.

ಡಿವೈಎಫ್‌ಐ, ಎಸ್‌ಎಫ್‌ಐ ಸೇರಿದಂತೆ ನಾನಾ ಸಂಘಟನೆಗಳು ನಗರದ ಟೌನ್‌ ಹಾಲ್‌ ಮುಂದೆ ಸೋಮವಾರ ಸಂಜೆ ಪ್ರತಿಭಟನೆಗೆ ಮುಂದಾದರು. ರಾಜ್ಯ ಭಾರತೀಯ ಗೋಪರಿವಾರ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಅದಕ್ಕಿಂತ ಮೊದಲೇ ಜಮಾಯಿಸಿ ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು. ಮುಂಜಾನೆಯಿಂದಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೆ ಸಮರ ನಡೆಯುತ್ತಿದ್ದವು. ಅಂತಿಮವಾಗಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಪ್ರಕಟಿಸಿ, ಎರಡೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದರು.

ನಾವು ನಿಷೇಧವನ್ನು ಒಪ್ಪುವುದಿಲ್ಲ. ಕಾನೂನಾತ್ಮಕವಾಗಿ ಪ್ರಶ್ನಿಸುತ್ತೇವೆ. ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಧ್ವಂಸಗೊಳಿಸದಂತೆ ಮನವಿ ಮಾಡುತ್ತೇನೆ.
- ಮಮತಾ ಬ್ಯಾನರ್ಜಿ, ಪ.ಬಂಗಾಳ ಸಿಎಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ