ಆ್ಯಪ್ನಗರ

ಕೇರಳದಲ್ಲಿ ಬಿಸಿ ಏರಿಸಿದ 'ಬೀಫ್‌ ಫ್ರೈ' ವಿವಾದ: 'ಶೋಭಾ' ಟೀಕೆಗೆ ಎಲ್‌ಡಿಎಫ್‌ ಉತ್ತರ ಏನು ಗೊತ್ತ?

ಮಕರ ಸಂಕ್ರಾಂತಿ ಹಬ್ಬದಂದು ಕೇರಳ ಪ್ರವಾಸೋದ್ಯಮ ಸಚಿವಾಲಯ ಮಾಡಿದ 'ಬೀಫ್‌ ಫ್ರೈ' (ಗೋಮಾಂಸ) ಟ್ವೀಟ್‌ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಕೇರಳ ಸರಕಾರ ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಿದೆ.

Vijaya Karnataka Web 17 Jan 2020, 10:31 pm
ಹೊಸದಿಲ್ಲಿ: ಮಕರ ಸಂಕ್ರಾಂತಿ ಹಬ್ಬದಂದು ಕೇರಳ ಪ್ರವಾಸೋದ್ಯಮ ಸಚಿವಾಲಯ ಮಾಡಿದ 'ಬೀಫ್‌ ಫ್ರೈ' (ಗೋಮಾಂಸ) ಟ್ವೀಟ್‌ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಕೇರಳ ಸರಕಾರ ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಿದೆ.
Vijaya Karnataka Web beef fry


''ಯಾವುದೇ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವುದು ಇದರ ಉದ್ದೇಶವಾಗಿರಲಿಲ್ಲ,'' ಎಂದು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಸರಕಾರ ಪ್ರತಿಕ್ರಿಯೆ ನೀಡಿದೆ.



ಈ ಮಧ್ಯೆ, ''ಕೇರಳ ಕಮ್ಯುನಿಸ್ಟರು ರಾಜ್ಯದ ಹಿಂದೂಗಳ ವಿರುದ್ಧ ಸಮರ ಸಾರಿದ್ದಾರೆ,'' ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುಂರೇಂದ್ರನ್‌ ಅವರು, ಸಚಿವಾಲಯದ ಟ್ವೀಟ್‌ಗೆ ಬಿಜೆಪಿಯ ಕೆಲವರು ಕೋಮು ಬಣ್ಣ ಬಳಿದು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿ ಟಿ ರವಿಯಿಂದ ‘ಬೀಫ್’ ಟ್ವೀಟ್ ಎಡವಟ್ಟು ! ಅಪಾರ್ಥ ಮಾಡ್ಕೊಂಡ ನೆಟ್ಟಿಗರಿಂದ ಕ್ಲಾಸ್

ಕೇರಳದ ಪ್ರವಾಸೋದ್ಯಮ ಸಚಿವಾಲಯು ಪ್ರವಾಸಿಗರನ್ನು ಉತ್ತೇಜಿಸಲು ರಾಜ್ಯದ ಗೋಮಾಂಸದ ಬಗ್ಗೆ ರುಚಿಯ ಬಗ್ಗೆ ಪ್ರಸ್ತಾಪಿಸಿ ಟ್ವೀಟ್‌ ಮಾಡಿತ್ತು. ಸಂಕ್ರಾಂತಿ ಹಬ್ಬದಂದೇ ಈ ಟ್ವೀಟ್‌ ಮಾಡಿದ್ದರಿಂದ ಹಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇರಳ ಸರಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ