ಆ್ಯಪ್ನಗರ

'ವಿಶ್ವನಾಥ್, ಎಂಟಿಬಿಗೆ ಅನ್ಯಾಯವಾಗಿದೆ! ಗೆದ್ದವರು, ಸೋತವರೆಲ್ಲ ಸಭೆ ಮಾಡ್ತೀವಿ': ರಮೇಶ್ ಜಾರಕಿಹೊಳಿ

‘ಕಳೆದ ಒಂದೂವರೆ ತಿಂಗಳಿಂದ ನಾವು 18 ರಿಂದ 20 ಶಾಸಕರು ಭೇಟಿಯಾಗಿಲ್ಲ. ಎಂಟಿಬಿ ನಾಗರಾಜ್‌, ಎಚ್‌.ವಿಶ್ವನಾಥ್‌ ಅವರಿಗೆ ಅನ್ಯಾಯವಾಗಿದೆ. ಕೆಲವೊಂದಷ್ಟು ವಿಚಾರಗಳಿವೆ. ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ - ರಮೇಶ್ ಜಾರಕಿಹೊಳಿ

Vijaya Karnataka Web 10 Dec 2019, 7:49 pm
ಗೋಕಾಕ್ (ಬೆಳಗಾವಿ): ಬಿಜೆಪಿಯ ನೂತನ ಶಾಸಕರು, ಸೋತ ಅಭ್ಯರ್ಥಿಗಳೆಲ್ಲಾ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ಸೇರಿ ಚರ್ಚಿಸುತ್ತೇವೆ ಎಂದು ನೂತನ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯಾರಿಗೆ ಯಾವ ಖಾತೆ ಕೊಡಬೇಕು ಎಂಬುದನ್ನು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದೂ ರಮೇಶ್‌ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web ವಿಶ್ವನಾಥ್, ಎಂಟಿಬಿಗೆ ಅನ್ಯಾಯವಾಗಿದೆ! ಗೆದ್ದವರು, ಸೋತವರೆಲ್ಲ ಸಭೆ ಮಾಡ್ತೀವಿ: ರಮೇಶ್ ಜಾರಕಿಹೊಳಿ


ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ‘ಕಳೆದ ಒಂದೂವರೆ ತಿಂಗಳಿಂದ ನಾವು 18 ರಿಂದ 20 ಶಾಸಕರು ಭೇಟಿಯಾಗಿಲ್ಲ. ಎಂಟಿಬಿ ನಾಗರಾಜ್‌, ಎಚ್‌.ವಿಶ್ವನಾಥ್‌ ಅವರಿಗೆ ಅನ್ಯಾಯವಾಗಿದೆ. ಕೆಲವೊಂದಷ್ಟು ವಿಚಾರಗಳಿವೆ. ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

'ಬುರುಡೆ ಸಿದ್ದರಾಮಯ್ಯ ತೆಗೆದು ಹಾಕಲು ಕಾಂಗ್ರೆಸ್ ಮೀಟಿಂಗ್': ಸರ್ಕಾರ ಸುಭದ್ರ ಅಂದ್ರು ಅಶೋಕ್

ಅಣ್ಣನ ಮನೆಯಲ್ಲಿ ಸಂಭ್ರಮ, ತಮ್ಮನ ಮನೆಯಲ್ಲಿ ಬೇಸರ..!

ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಮೇಶ್‌ ಮನೆಯಲ್ಲಿ ಮಂಗಳವಾರ ಸಂಭ್ರಮಾಚರಣೆ ನಡೆದರೆ, ಸಹೋದರ ಲಖನ್‌ ಗೆಲ್ಲಿಸಲು ಪಣ ತೊಟ್ಟಿದ್ದ ಸತೀಶ್‌ ಜಾರಕಿಹೊಳಿ ಮನೆಯಲ್ಲಿ ಸೋಲಿನ ಪರಾಮರ್ಶೆ ನಡೆದಿತ್ತು. ನಗರದ ಹಿಲ್‌ ಗಾರ್ಡ್‌ನಲ್ಲಿರುವ ತಮ್ಮ ಮನೆಯಲ್ಲಿ ಸತೀಶ್‌ ಜಾರಕಿಹೊಳಿ, ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಯಾರೂ ಭಯ ಪಡುವ ಅಗತ್ಯವಿಲ್ಲ. ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ ಎಂದರು.

'ಜಾತಿ ಒಡೆದ ಸಿದ್ದರಾಮಯ್ಯರಿಂದ ಕನಕದಾಸರಿಗೆ ಅವಮಾನ, ಈಗ ಫ್ರೀ ಹೌಸ್‌ ಅರೆಸ್ಟ್‌': ಸೊಗಡು ಶಿವಣ್ಣ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌, ‘ಗೋಕಾಕ್‌ನಲ್ಲಿ ನಮ್ಮದೇ ಆದ ವೋಟ್‌ ಬ್ಯಾಂಕ್‌ ಮಾಡಿದ್ದೇವೆ. ಆದರೆ, ರಮೇಶ್‌ ವಿರೋಧಿಸುವವರೂ ಅವರ ಬೆನ್ನಿಗೆ ನಿಂತಿರೋದ್ರಿಂದ ಗೆದ್ದಿದ್ದಾರೆ. ಸರಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿಗೆ ಗೆಲುವಾಗಿದೆ. ಗೋಕಾಕ್ ಉಪ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳ ಬಗ್ಗೆ ಜನ ಗಮನ ಕೊಡಲಿಲ್ಲ’ ಎಂದರು.

ಸಿದ್ದರಾಮಯ್ಯ 'ಎಂಡ್ ಗೇಮ್'..! ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ 5 ಕಾರಣಗಳು

‘ಬಿಜೆಪಿ, ಜೆಡಿಎಸ್‌ ರೀತಿಯಲ್ಲೇ ಕಾಂಗ್ರೆಸ್‌ನಲ್ಲೂ ಒಂದು ಟೀಮ್‌ ಇದೆ. ರಾಜಕೀಯದಲ್ಲಿ ಇದು ಸ್ವಾಭಾವಿಕ. ಮೂಲ ಹಾಗೂ ವಲಸಿಗರ ಗುಂಪು ಇದ್ದೇ ಇರುತ್ತದೆ. ಭಿನ್ನಾಭಿಪ್ರಾಯವೂ ಇರುತ್ತದೆ. ಸಿಎಲ್‌ಪಿ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಂಡೂರಾವ್‌ ರಾಜೀನಾಮೆ ನೀಡಿರಬಹುದು. ಅವರ ಮನವೊಲಿಸುತ್ತೇವೆ. ಪಕ್ಷಕ್ಕೆ ಅವರು ಅನಿವಾರ್ಯ. ಅವರೇ ಮುಂದುವರಿಯುತ್ತಾರೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

'ರಾಜಾಹುಲಿ' ಸರ್ಕಾರ ಸುಭದ್ರ! ನಡೆಯಲಿಲ್ಲ 'ಹುಲಿಯ'ನ ಆಟ! ಎಚ್ಡಿಕೆ ಕಣ್ಣೀರಿಗೆ 'ಶೂನ್ಯ ಸಂಪಾದನೆ'!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ