ಆ್ಯಪ್ನಗರ

ಕ್ರೆಡಿಟ್, ಡೆಬಿಟ್ ಕಾರ್ಡ್ ಪಡೆದು ಓಡುವ ಈ ವಂಚಕನ ಬಗ್ಗೆ ಇರಲಿ ಎಚ್ಚರ

ವಾಣಿಜ್ಯನಗರಿ ಮುಂಬಯಿಯಲ್ಲಿ ಈತ ಜನರನ್ನು ವಂಚಿಸುತ್ತಿದ್ದು, ನಮ್ಮ ಬೆಂಗಳೂರಿಗೂ ಬರುವ ಸಾಧ್ಯತೆಯೂ ಇರುವುದರಿಂದ ಎಚ್ಚರಿಕೆಯಿಂದ ಇರುವುದು ಅನಿವಾರ್ಯ.

Mumbai Mirror 10 Sep 2016, 4:10 pm
ಮುಂಬಯಿ: ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕಾರ್ಯನಿರ್ವಹಿಸುವ ವೇಟರ್ ಒಬ್ಬನ ವಂಚನೆಯ ಕಥೆಯಿದು. ವಾಣಿಜ್ಯನಗರಿ ಮುಂಬಯಿಯಲ್ಲಿ ಈತ ಜನರನ್ನು ವಂಚಿಸುತ್ತಿದ್ದು, ನಮ್ಮ ಬೆಂಗಳೂರಿಗೂ ಬರುವ ಸಾಧ್ಯತೆಯೂ ಇರುವುದರಿಂದ ಎಚ್ಚರಿಕೆಯಿಂದ ಇರುವುದು ಅನಿವಾರ್ಯ.
Vijaya Karnataka Web credit card
ಕ್ರೆಡಿಟ್, ಡೆಬಿಟ್ ಕಾರ್ಡ್ ಪಡೆದು ಓಡುವ ಈ ವಂಚಕನ ಬಗ್ಗೆ ಇರಲಿ ಎಚ್ಚರ


ಒಂದಲ್ಲ, ಎರಡಲ್ಲ ಈಗಾಗಲೇ ಮಹಾನಗರಿಯ ಹಲವು ಬಾರ್‌ಗಳಲ್ಲಿ ಚಂದ್ರಶೇಖರ್ ಎಂಬ ಈ ವ್ಯಕ್ತಿ ಕಾರ್ಯನಿರ್ವಹಿಸಿದ್ದಾನೆ. ಹಾಗಂತ ಯಾವ ಬಾರಿನಲ್ಲಿಯೂ ಹೆಚ್ಚು ದಿನ ಉಳಿಯೋಲ್ಲ ಈತ. ಬಾರ್‌ಗೆ ಬರುವ ಗಿರಾಕಿಗಳು ಕಂಠಪೂರ್ತಿ ಕುಡಿದು, ದಿನಾ ಬರುವ ಬಾರ್ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ವೇಟರ್‌ ಮೇಲಿನ ಅಪಾರ ವಿಶ್ವಾಸದಿಂದ ಬಿಲ್ ಸೆಟಲ್ ಮಾಡಲು ಅಲ್ಲಿರುವ ವೇಟರ್‌ಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೀಡುವುದು ಸಾಮಾನ್ಯ. ಹಾಗೆ ಮಾಡುವ ಗಿರಾಕಿಗಳ ಕಾರ್ಡ್ ಪಡೆದು, ಓಡಿ ಹೋಗ್ತಾನೆ ಈ ಭೂಪ. ಸಮೀಪದ ಎಟಿಎಂ‌ಗಳಿಂದ ಆದಷ್ಟು ಹಣ ಪಡೆದು ಕಾಲ್ಕೀಳುತ್ತಿದ್ದಾನೆ.

ಈಗಾಗಲೇ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಬಾರ್‌ನಲ್ಲಿ ವೇಟರ್‌ಗಳನ್ನು ನೇಮಿಸಿಕೊಳ್ಳುವಾಗ ಇಂಥವರ ಬಗ್ಗೆ ಎಚ್ಚರದಿಂದ ಇರಬೇಕೆಂದು ಪೊಲೀಸರು ಎಚ್ಚರಿಸಿದ್ದಾರೆ.

ಈಗಾಗಲೇ ಒಂಬತ್ತು ಬಾರ್‌ಗಳ ಗಿರಾಕಿಗಳನ್ನು ವಂಚಿಸಿರುವ ಈತ, ಇತ್ತೀಚೆಗೆ ಗಿರಾಕಿಯೊಬ್ಬರ ಕಾರ್ಡ್ ಪಡೆದು, 40 ಸಾವಿರ ರೂ. ಎಗರಿಸಿದ್ದಾನೆ.ಕಾಯಂ ಗಿರಾಕಿಯಾಗಿದ್ದ ವ್ಯಕ್ತಿ, ಬಾರ್ ವೇಟರ್‌ಗಳ ಮೇಲೆ ವಿಶ್ವಾಸವಿಟ್ಟು, ತಮ್ಮ ಕಾರ್ಡ್ ನೀಡಿ, ಪಿನ್ ಹೇಳುತ್ತಿದ್ದರು. ಅಂಥ ವಿಶ್ವಾಸವಿಟ್ಟ ಗ್ರಾಹಕರನ್ನು ವಂಚಿಸುವುದು ಈ ಚಂದ್ರಶೇಖರ್ ಚಾಳಿ. ಇದುವರೆಗೆ ಸುಮಾರು 3 ಲಕ್ಷ ರೂ.ವಂಚಿಸಿರುವ ಬಗ್ಗೆ ಪೊಲೀಸರು ಶಂಕಿಸುತ್ತಿದ್ದು, ಈತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ