ಆ್ಯಪ್ನಗರ

ಭಾರತ್‌ ಬಂದ್‌ ಅಪ್ಡೇಟ್ಸ್‌: ಯಾವ ರಾಜ್ಯದಲ್ಲಿ ಹೇಗಿದೆ ಪ್ರತಿಭಟನೆ ಬಿಸಿ, ಹಲವೆಡೆ ರೈಲು ತಡೆದು ಅನ್ನದಾತರ ಆಕ್ರೋಶ!

​​ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ), ಅಖಿಲ ಭಾರತ ಕಿಸಾನ್ ಮಹಾಸಂಘ್ (ಎಐಕೆಎಂ) ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಭಾರತ್‌ ಬಂದ್‌ಗೆ ಕರೆ ನೀಡಿದ್ದು, ರಾಜ್ಯಗಳ ವಿವಿಧ ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

Agencies 25 Sep 2020, 2:22 pm
ಹೊಸದಿಲ್ಲಿ: ಕೇಂದ್ರ ಸರಕಾರ ಸಂಸತ್‌ನಲ್ಲಿ ಅನುಮೋದನೆ ಪಡೆದಿರುವ ಮೂರು ಕೃಷಿ ಬಿಲ್‌ ಸಂಬಂಧ ರೈತರ ಆಕ್ರೋಶ ತೀವ್ರಗೊಂಡಿದೆ. ಇದರ ಫಲಿತಾಂಶವಾಗಿ ಅನ್ನದಾತರು ಸೆ.25ರ ಶುಕ್ರವಾರ ದೇಶ ವ್ಯಾಪಿ ಬಂದ್‌ಗೆ ಅಥವಾ ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ. ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್‌ ಪಡೆಯುವಂತೆ ಮುಂಜಾನೆಯೇ ಪ್ರತಿಭಟನೆ ಆರಂಭಿಸಿದ್ದಾರೆ.
Vijaya Karnataka Web protest


ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ), ಅಖಿಲ ಭಾರತ ಕಿಸಾನ್ ಮಹಾಸಂಘ್ (ಎಐಕೆಎಂ) ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಭಾರತ್‌ ಬಂದ್‌ಗೆ ಕರೆ ನೀಡಿದ್ದು, ರಾಜ್ಯಗಳ ವಿವಿಧ ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಪ್ರಧಾನಿ ಮೋದಿ ಆದಿಯಾಗಿ ಹಲವು ಸಚಿವರುಗಳು ಕೃಷಿ ಮಸೂದೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ ಕೃಷಿ ಮಸೂದೆಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ ಎಂದು ನಂಬಿರುವ ರೈತರು ಪ್ರತಿಭಟಿಸುತ್ತಿದ್ದಾರೆ ಆದರೆ ಈ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.

ಬಿಹಾರದಲ್ಲಿ ಪ್ರತಿಭಟನೆ!

ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ. ಇದರ ಕಾರ್ಯಕರ್ತರು ಎಮ್ಮೆಯ ಮೇಲೇರಿ ಬಂದು ಪ್ರೊಟೆಸ್ಟ್‌ ನಡೆಸಿದ್ದಾರೆ. ಇನ್ನು ಪಕ್ಷದ ಪ್ರಬಲ ನಾಯಕ ತೇಜಸ್ವಿ ಯಾದವ್ ಟ್ರ್ಯಾಕ್ಟರ್‌ ಮೂಲಕ ಪ್ರತಿಭಟನೆಗೆ ಬಂದ ಘಟನೆ ನಡೆದಿದೆ.



ಓದುಗರೆ ಗಮನಿಸಿ!
ಭಾರತ್‌ ಬಂದ್‌ಗೆ ಕರೆ ನೀಡುತ್ತಿದ್ದರು ಎಲ್ಲೂ ಕೂಡ ವಾಹನ ಸಂಚಾರ ಸ್ಥಬ್ಧವಾಗಿಲ್ಲ. ಎಲ್ಲ ರಾಜ್ಯಗಳಲ್ಲೂ ವಾಹನ ಸಂಚಾರ ನಡೆಯುತ್ತಿದೆ. ಸುಮಾರು 10 ಗಂಟೆ ನಂತರ ಯಾವ ರೀತಿಯ ಚಿತ್ರಣವಿರಲಿದೆ ಎನ್ನುವುದನ್ನು ನೋಡಬೇಕಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಕೇವಲ ಪ್ರತಿಭಟನೆ ನಡೆದರೆ ಇನ್ನು ಕೆಲವು ರಾಜ್ಯಗಳಲ್ಲಿ ಪ್ರತಿಭಟನೆಯೇ ಇಲ್ಲ.

ಪಂಜಾಬ್‌ನಲ್ಲಿ ಆರಂಭಗೊಂಡ ಪ್ರತಿಭಟನೆ!
ಇನ್ನು ಕೇಂದ್ರ ಸರಕಾರದ ಕೃಷಿ ಮಸೂದೆ ಸಂಬಂಧ ಮೊದಲು ಆಕ್ರೋಶದ ಕಿಚ್ಚು ಆರಂಭವಾಗಿರುವುದು ಪಂಜಾಬ್‌ ರಾಜ್ಯದಿಂದ. ಇನ್ನು ಪಂಜಾಬ್‌ನ 31 ರೈತ ಸಂಘಟನೆಗಳು ಭಾರತ್‌ ಬಂದ್‌ಗೆ ಬೆಂಬಲ ಸೂಚಿಸಿದ್ದು ಈಗಾಗಲೇ ರೈಲಿನ ಹಳಿಗಳ ಮೇಲೆ ವೇದಿಕೆ ಹಾಕಿ ಪ್ರತಿಭಟಿಸುತ್ತಿದ್ದಾರೆ. ಇನ್ನು ಈ ಹಿನ್ನೆಲೆ ಉತ್ತರ ರೈಲ್ವೆ ಕೆಲವು ರೈಲುಗಳನ್ನು ರದ್ದುಗೊಳಿಸಿದೆ. ಇನ್ನು ಪಂಜಾಬ್‌ ಸಿಂ ಅಮರೀಂದರ್‌ ಸಿಂಗ್‌ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಕಾರರಲ್ಲಿ ಮನವಿ ಮಾಡಿದ್ದಾರೆ.




ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಬೆಂಬಲ!

ಇನ್ನು ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿವೆ. ಎಲ್ಲಾ ರಾಜ್ಯಗಳಲ್ಲಿ ನಮ್ಮ ಕಾರ್ಯಕರ್ತರು ರಸ್ತೆಗೆ ಇಳಿದು ಪ್ರರಿಭಟನೆ ನಡೆಸಲಿದೆ. ರೈತ ವಿರೋಧಿ ಕೇಂದ್ರ ಸರಕಾರದ ಮಸೂದೆ ವಿರುದ್ಧ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಇನ್ನು ಈ ಮೂರು ಪಕ್ಷಗಳು ಮಾತ್ರವಲ್ಲದೆ ಸಮಾಜವಾದಿ ಪಕ್ಷ, ಬಿಎಸ್‌ಪಿ, ಟಿಆರ್‌ಎಸ್‌ ಬೆಂಬಲ ಸೂಚಿಸಿವೆ. ‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ