ಆ್ಯಪ್ನಗರ

ಭಾರತ್ ಬಂದ್ ಘರ್ಷಣೆ: 8ನೇ ಪ್ರಕರಣ ದಾಖಲು

ಭಾರತ್ ಬಂದ್ ವೇಳೆ ಉಡುಪಿಯಲ್ಲಿ ನಡೆದ ಘರ್ಷಣೆ, ಮಹಿಳಾ ದೌರ್ಜನ್ಯ, ಒತ್ತಾಯ ಪೂರ್ವಕ ಬಂದ್‍ಗೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ವಿರುದ್ಧ 8ನೇ ಪ್ರಕರಣ ದಾಖಲಾಗಿದೆ.

Vijaya Karnataka Web 13 Sep 2018, 2:39 pm
ಉಡುಪಿ: ಭಾರತ್ ಬಂದ್ ವೇಳೆ ಉಡುಪಿಯಲ್ಲಿ ನಡೆದ ಘರ್ಷಣೆ, ಮಹಿಳಾ ದೌರ್ಜನ್ಯ, ಒತ್ತಾಯ ಪೂರ್ವಕ ಬಂದ್‍ಗೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ವಿರುದ್ಧ 8ನೇ ಪ್ರಕರಣ ದಾಖಲಾಗಿದೆ.
Vijaya Karnataka Web fir


ಅಂದು ಕಾರಿನಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಅಡ್ಡಿಗಟ್ಟಿ ನಿಲ್ಲಿಸಿದ್ದ ಚೈತ್ರಾ ಕುಂದಾಪುರ ಹಾಗೂ ಸಂಗಡಿಗರು ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದೂರು ದಾಖಲಾಗಿದೆ.

ಚಂದ್ರಿಕಾ ಶೆಟ್ಟಿ ತನ್ನ ಸ್ನೇಹಿತರಾದ ಜ್ಯೋತಿ ಹೆಬ್ಬಾರ್ ಹಾಗೂ ಆಶಾ ಕಡಿಯಾಳಿ ಅವರೊಂದಿಗೆ ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಕಾರನ್ನು ಅಡ್ಡಗಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾಗಿ ಚೈತ್ರಾ ಕುಂದಾಪುರ ಅವರು ದಿನಕರ ಪೂಜಾರಿ, ಯೋಗೀಶ್ ವಿ. ಸಾಲ್ಯಾನ್, ಶರತ್ ಬೈಲಕೆರೆ, ಗಿರೀಶ್ ಅಂಚನ್, ದಿನೇಶ್ ಅಮೀನ್, ಬಾಲಕೃಷ್ಣ ಶೆಟ್ಟಿ, ದಾವೂದ್, ದಿವಾಕರ ಪೂಜಾರಿ, ವಿನಾಯಕ್ ಶೇಟ್, ಶಿವರಾಜ್ ಕುಮಾರ್, ಆರೀಫ್ ದೊಡ್ಡಣಗುಡ್ಡೆ, ರಾಕೇಶ್ ಜೋಗಿ ಸಹಿತ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಚಂದ್ರಿಕಾ ಶೆಟ್ಟಿ ನೀಡಿದ ದೂರು ಆಧರಿಸಿ ನಾನಾ ಸೆಕ್ಷನ್‍ಗಳಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ