ಆ್ಯಪ್ನಗರ

'ಖಲಿಫೇಟ್‌' ಸ್ಥಾಪನೆಗೆ ಮುಂದಾಗಿದ್ದ ಭಟ್ಕಳ ಸೋದರರ ಆಪ್ತ

ಭಟ್ಕಳ ಸೋದರರ ಆಪ್ತ ಅದ್ನಾನ್‌ ಹಸನ್‌ ಸ್ವಯಘೋಷಿತ 'ಖಲಿಫೇಟ್‌' ಸ್ಥಾಪನೆಗಾಗಿ ಐಸಿಸ್‌ಗೂ ಮೊದಲೇ ಸಕ್ರಿಯನಾಗಿದ್ದ.

ಟೈಮ್ಸ್ ಆಫ್ ಇಂಡಿಯಾ 29 Jul 2016, 2:04 pm
ಹೊಸದಿಲ್ಲಿ: ಇಂಡಿಯನ್‌ ಮುಜಾಹಿದ್ದೀನ್‌ ಸ್ಥಾಪಕರಾಗಿರುವ ರಿಯಾಜ್‌ ಭಟ್ಕಳ ಮತ್ತು ಇಕ್ಬಾಲ್‌ ಭಟ್ಕಳ ಅವರ ಆಪ್ತ ಅದ್ನಾನ್‌ ಹಸನ್‌ ಐಸಿಸ್‌ಗೂ ಮೊದಲೇ ಸ್ವಯಂಘೋಷಿತ "ಖಲಿಫೇಟ್‌' ಸ್ಥಾಪನೆಗಾಗಿ ಭಾರತದಲ್ಲಿ ಜಿಹಾದಿಗಳ ನೇಮಕದಲ್ಲಿ ತೊಡಗಿದ್ದರು ಎಂಬುದು ಬಯಲಾಗಿದೆ.
Vijaya Karnataka Web bhatkals aide was planning for a caliphate even before is
'ಖಲಿಫೇಟ್‌' ಸ್ಥಾಪನೆಗೆ ಮುಂದಾಗಿದ್ದ ಭಟ್ಕಳ ಸೋದರರ ಆಪ್ತ


ಐಸಿಸ್‌ 2014ರ ಜೂನ್‌ನಲ್ಲಿ ಸ್ವಯಂಘೋಷಿತ 'ಖಲೀಫಾ‌' ಸಾಮ್ರಾಜ್ಯ ಸ್ಥಾಪನೆಯನ್ನು ಪ್ರಕಟಿಸಿದ ಬಳಿಕ ಕೆಲವು ಭಾರತೀಯರು ಅದರ ಜತೆ ಸಂಪರ್ಕ ಸಾಧಿಸಿರುವುದನ್ನು ಗುಪ್ತಚರ ಸಂಸ್ಥೆಗಳು ಈ ಹಿಂದೆ ಪತ್ತೆ ಹಚ್ಚಿದ್ದವು. ಆದರೆ ಈಗ ಗುಪ್ತಚರ ಸಂಸ್ಥೆಗಳು ಹೇಳುವ ಪ್ರಕಾರ ಅದಕ್ಕೂ ಮೊದಲೇ 2013ರ ಅಕ್ಟೋಬರ್‌ ಮತ್ತು ನವೆಂಬರ್‌ನಿಂದಲೇ ರಿಯಾಜ್‌ ಭಟ್ಕಳ ಮತ್ತು ಇಕ್ಬಾಲ್‌ ಭಟ್ಕಳ ಅವರ ಆಪ್ತ ಅದ್ನಾನ್‌ ಹಸನ್‌ ಸ್ವಯಘೋಷಿತ "ಖಲಿಫೇಟ್‌' ಸ್ಥಾಪನೆಗೆ ಸಕ್ರಿಯನಾಗಿದ್ದ.

ರಾಷ್ಟ್ರೀಯ ತನಿಖಾ ತಂಡವು ಸೋಮವಾರ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಕಥೆಯನ್ನು ಬಿಟ್ಟಿಟ್ಟಿದೆ. ಅದ್ನಾನ್‌ ಬಹಳಷ್ಟು ಭಾರತೀಯ ಯುವಕರನ್ನು ಐಸಿಸ್‌ ಸಂಘಟನೆ ಮತ್ತು ಕೃತ್ಯಗಳಿಗೆ ಕೈಜೋಡಿಸುವಂತೆ ಉತ್ತೇಜಿಸುತ್ತಿದ್ದ. ಆನ್‌ಲೈನ್‌ನಲ್ಲಿ ಸುದ್ದಿ ಪೋಸ್ಟ್‌, ಕಮೆಂಟ್‌, ವೀಡಿಯೊ, ಫೋಟೊಗಳ, ಇಸ್ಲಾಂ ವಿದ್ವಾಂಸರ ಭಾಷಣಗಳ ಪೋಸ್ಟ್‌ ಮೂಲಕ ಆತ ಯುವಕರನ್ನು ಜಿಹಾದ್‌ಗೆ ಆಕರ್ಷಿಸುವ ಕೆಲಸ ಮಾಡುತ್ತಿದ್ದ. ಭಾರತ ಮತ್ತು ವಿದೇಶಗಳಲ್ಲಿ ಐಸಿಸ್‌ ಸದಸ್ಯರ ಜತೆ ನಿರಂತರ ಆಪ್ತ ಸಂಪರ್ಕದಲ್ಲಿದ್ದ ಎಂದು ತನಿಖಾ ತಂಡ ಹೇಳಿದೆ.

ಸಂಯುಕ್ತ ಅರಬ್‌ ಒಕ್ಕೂಟ ಅದ್ನಾನ್‌ನನ್ನು ಗಡಿಪಾರುಗೊಳಿಸಿದ ಬಳಿಕ ಇಬ್ಬರು ಸಹಚರರ ಜತೆ ಆತನನ್ನು ಬಂಧಿಸಲಾಗಿತ್ತು. ನೈಜೀರಿಯಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಪಿಲಿಪ್ಪೀನ್‌, ಬ್ರಿಟನ್‌, ಅಮೆರಿಕ, ಸೆರ್ಬಿಯಾ, ಸೌದಿ ಅರೇಬಿಯಾ, ಬಾಂಗ್ಲಾ, ಮಲೇಷ್ಯಾ, ಯುರೋಪ್‌ ರಾಷ್ಟ್ರಗಳ ಹಲವರ ಜತೆ ಅದ್ನಾನ್‌ ನಿರಂತರ ಸಂಪರ್ಕದಲ್ಲಿದ್ದಾನೆ.

ಆತ ಹಣ ಸಂಗ್ರಹಿಸಿ ಐಸಿಸ್‌ ಕಾರ್ಯಾಚರಣೆ ನಡೆಸುವವರಿಗೆ ವಿತರಿಸುತ್ತಿದ್ದ. ಪಾಕಿಸ್ತಾನ, ಅಫಘಾನಿಸ್ತಾನ, ಸಿರಿಯಾಗಳ್ಲಲಿರುವ ಇಂಡಿಯನ್ ಮುಜಾಹಿದ್ದೀನ್‌ ಸದಸ್ಯರು ಮತ್ತು ಐಸಿಸ್‌ನ ಭಾರತದ ಮುಖ್ಯ ನೇಮಕ ಪ್ರಕ್ರಿಯೆ ನಿರ್ವಹಿಸುವ ಶಫಿ ಅರ್ಮರ್‌ ಜತೆಗೂ ಸಂಪರ್ಕದಲ್ಲಿ ಇದ್ದಾನೆ ಎಂದು ತನಿಖಾ ತಂಡ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ