ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿ ಮೂರು ಮಹಡಿಗಳ ಕಟ್ಟಡ ಕುಸಿದು ಬಿದ್ದಿರುವ ಘಟನೆಯಲ್ಲಿ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮೂಲಗಳು ತಿಳಿಸಿವೆ.
ಮೃತಪಟ್ಟವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ ಒಂದು ಮಗು 2 ವರ್ಷದ್ದಾದರೆ, ಮತ್ತೊಂದು ಮಗು 14 ವರ್ಷದ್ದಾಗಿದೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಭಿವಾಂಡಿಯ ಇಂದಿರಾ ಗಾಂಧಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಿವಾಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಕಟ್ಟಡ ಕುಸಿದಿದೆ. ಈ ಕಟ್ಟಡದಲ್ಲಿ ಒಟ್ಟು 21 ಫ್ಲ್ಯಾಟ್ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ಕುಸಿದು ಅವಘಡ ಸಂಭವಿಸಿತ್ತು.
ಮಹಾರಾಷ್ಟ್ರ: ಮೂರು ಮಹಡಿ ಕಟ್ಟಡ ಕುಸಿತ, ಹೋಯ್ತು ಗಾಢ ನಿದ್ರೆಯಲ್ಲಿದ್ದ 10 ಮಂದಿಯ ಪ್ರಾಣ!
ಭಿವಾಂಡಿ ನಿಜಾಂಪುರ ನಗರ ಪಾಲಿಕೆ ತಿಳಿಸಿರುವಂತೆ ಸೋಮವಾರ ಮುಂಜಾನೆ 3.40ರ ಸುಮಾರಿಗೆ ಈ ಘಟನೆ ಭಿವಾಂಡಿಯ ನರ್ಪೋಲಿಯ ಪಟೇಲ್ ಕೌಂಪೌಂಡ್ನಲ್ಲಿ ನಡೆದಿದೆ. ಸುಮಾರು 62ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದ ಕಟ್ಟಡದಲ್ಲಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ ಈಗಾಗಲೇ ಹಲವು ಮಂದಿಯನ್ನು ರಕ್ಷಣಾ ಪಡೆಗಳು ಅವಶೇಷಗಳಡಿಯಿಂದ ರಕ್ಷಿಸಿವೆ ಎಂದು ಥಾಣೆ ಪಾಲಿಕೆ ತಿಳಿಸಿದೆ. 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕೊರೊನಾ ಪಾಸಿಟಿವ್ ಎಂದು ಹೆಂಡತಿಯಿಂದ ನಾಪತ್ತೆ..! ಪ್ರೇಯಸಿಯೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದ ಭೂಪ
ಪ್ರಕರಣದ ತನಿಖೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರಕಾರಿ ಅಧಿಕಾರಿಗಳನ್ನು ಈ ವಿಚಾರವಾಗಿ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಮೃತಪಟ್ಟವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ ಒಂದು ಮಗು 2 ವರ್ಷದ್ದಾದರೆ, ಮತ್ತೊಂದು ಮಗು 14 ವರ್ಷದ್ದಾಗಿದೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಭಿವಾಂಡಿಯ ಇಂದಿರಾ ಗಾಂಧಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಿವಾಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಕಟ್ಟಡ ಕುಸಿದಿದೆ. ಈ ಕಟ್ಟಡದಲ್ಲಿ ಒಟ್ಟು 21 ಫ್ಲ್ಯಾಟ್ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ಕುಸಿದು ಅವಘಡ ಸಂಭವಿಸಿತ್ತು.
ಮಹಾರಾಷ್ಟ್ರ: ಮೂರು ಮಹಡಿ ಕಟ್ಟಡ ಕುಸಿತ, ಹೋಯ್ತು ಗಾಢ ನಿದ್ರೆಯಲ್ಲಿದ್ದ 10 ಮಂದಿಯ ಪ್ರಾಣ!
ಭಿವಾಂಡಿ ನಿಜಾಂಪುರ ನಗರ ಪಾಲಿಕೆ ತಿಳಿಸಿರುವಂತೆ ಸೋಮವಾರ ಮುಂಜಾನೆ 3.40ರ ಸುಮಾರಿಗೆ ಈ ಘಟನೆ ಭಿವಾಂಡಿಯ ನರ್ಪೋಲಿಯ ಪಟೇಲ್ ಕೌಂಪೌಂಡ್ನಲ್ಲಿ ನಡೆದಿದೆ. ಸುಮಾರು 62ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದ ಕಟ್ಟಡದಲ್ಲಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ ಈಗಾಗಲೇ ಹಲವು ಮಂದಿಯನ್ನು ರಕ್ಷಣಾ ಪಡೆಗಳು ಅವಶೇಷಗಳಡಿಯಿಂದ ರಕ್ಷಿಸಿವೆ ಎಂದು ಥಾಣೆ ಪಾಲಿಕೆ ತಿಳಿಸಿದೆ. 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕೊರೊನಾ ಪಾಸಿಟಿವ್ ಎಂದು ಹೆಂಡತಿಯಿಂದ ನಾಪತ್ತೆ..! ಪ್ರೇಯಸಿಯೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದ ಭೂಪ
ಪ್ರಕರಣದ ತನಿಖೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರಕಾರಿ ಅಧಿಕಾರಿಗಳನ್ನು ಈ ವಿಚಾರವಾಗಿ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.