ಆ್ಯಪ್ನಗರ

‘ತ್ಯಾಗಿ’ ಸುಶೀಲ್‌ ಕುಮಾರ್‌ಗೆ ಬಿಜೆಪಿ ರಾಜ್ಯಸಭೆ ಟಿಕೆಟ್..! ‌ಕೇಂದ್ರದಲ್ಲಿ ದೊಡ್ಡ ಜವಾಬ್ದಾರಿ ನಿರೀಕ್ಷೆ

ಅಂದುಕೊಂಡಂತೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುತ್ತಿದ್ದಾರೆ. ಬಿಹಾರದಲ್ಲಿ ಹೊಸ ಸರಕಾರ ರಚನೆ ವೇಳೆ ಉಪ ಮುಖ್ಯಮಂತ್ರಿ ಪದವಿ ತ್ಯಾಗ ಮಾಡಿದ್ದ ಹಿರಿಯ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಬಿಜೆಪಿಯು ರಾಜ್ಯಸಭೆ ಟಿಕೆಟ್‌ ನೀಡಿದ್ದು, ಕೇಂದ್ರದಲ್ಲಿ ದೊಡ್ಡ ಜವಾಬ್ದಾರಿ ನೀಡುವ ನಿರೀಕ್ಷೆ ಇದೆ.

Agencies 27 Nov 2020, 11:10 pm
ಪಟನಾ: ಬಿಹಾರದಲ್ಲಿ ಹೊಸ ಸರಕಾರ ರಚನೆ ವೇಳೆ ಉಪ ಮುಖ್ಯಮಂತ್ರಿ ಪದವಿ ತ್ಯಾಗ ಮಾಡಿರುವ ಹಿರಿಯ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಬಿಜೆಪಿಯು ರಾಜ್ಯಸಭೆ ಟಿಕೆಟ್‌ ನೀಡಿದೆ.
Vijaya Karnataka Web Sushil Kumar Modi


ಎಲ್‌ಜೆಪಿ ಮುಖಂಡ ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನದೊಂದಿಗೆ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿ.14ರಂದು ಉಪ ಚುನಾವಣೆ ನಡೆಯಲಿದೆ. ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಮೋದಿ ಆಯ್ಕೆ ಬಹುತೇಕ ಖಚಿತವಾಗಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಗೆಲುವು ಸಾಧಿಸಿದರೂ ವರಿಷ್ಠರ ಆದೇಶಕ್ಕೆ ಬೆಲೆಕೊಟ್ಟು ಸುಶೀಲ್‌ ಕುಮಾರ್‌ ಡಿಸಿಎಂ ಸ್ಥಾನ ತ್ಯಜಿಸಿದ್ದರು. ಅವರಿಗೆ ಕೇಂದ್ರದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗುತ್ತದೆ ಎನ್ನುವ ಊಹಾಪೋಹಗಳು ಕೇಳಿ ಬಂದಿದ್ದು, ಅದಕ್ಕೆ ಪೂರಕ ಬೆಳವಣಿಗೆಗಳು ಈಗ ರಾಜ್ಯದಲ್ಲಿ ಘಟಿಸಿವೆ.

ಸುಶೀಲ್ ಬೇಸರಗೊಂಡಿಲ್ಲ, ದೊಡ್ಡ ಹುದ್ದೆಗೆ ಸಜ್ಜಾಗುತ್ತಿದ್ದಾರೆ: ದೇವೇಂದ್ರ ಫಡ್ನವೀಸ್!

ತೆರವಾದ ಸ್ಥಾನಕ್ಕೆ ತಮ್ಮ ತಾಯಿ ರೀನಾ ಪಾಸ್ವಾನ್‌ ಅವರನ್ನು ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕೆಂದು ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಒತ್ತಾಯಿಸಿದ್ದರು. ಆದರೆ, ಅವರ ಬೇಡಿಕೆ ಪರಿಗಣಿಸದ ಬಿಜೆಪಿಯು ಸುಶೀಲ್‌ ಮೋದಿ ಅವರಿಗೆ ಟಿಕೆಟ್‌ ನೀಡಿದೆ. ಈ ಮೊದಲು ಇದೇ ರಾಜ್ಯಸಭೆ ಸ್ಥಾನವನ್ನು ಬಿಜೆಪಿಯ ರವಿಶಂಕರ್‌ ಪ್ರಸಾದ್‌ ಪ್ರತಿನಿಧಿಸಿದ್ದರು.

ಬಿಹಾರದಲ್ಲಿ ಬದಲಾವಣೆ ಪರ್ವ: ಗೃಹ ಖಾತೆ ಉಳಿಸಿಕೊಂಡ ನಿತೀಶ್‌, ಇಬ್ಬರು ಡಿಸಿಎಂಗಳಿಗೆ ಬಲಿಷ್ಠ ಖಾತೆ

ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಆಯ್ಕೆಯಾದ ನಂತರ ಆ ಸ್ಥಾನವನ್ನು ರಾಮ್‌ ವಿಲಾಸ್‌ ಪಾಸ್ವಾನ್‌ ಅವರಿಗೆ ಬಿಟ್ಟುಕೊಡಲಾಗಿತ್ತು. ಬಿಹಾರದಲ್ಲಿ 2005 ರಿಂದ 2013, 2017 ರಿಂದ 2020ರ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸುಶೀಲ್‌ಕುಮಾರ್‌ ಮೋದಿ ಸದ್ಯ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ