ಆ್ಯಪ್ನಗರ

ಕ್ಲಾಸ್ 12 ರ‍್ಯಾಂಕ್ ವಿದ್ಯಾರ್ಥಿ ಫಲಿತಾಂಶ ರದ್ದು, ಬಂಧನ

ದಾಖಲೆ ಪತ್ರಗಳನ್ನು ನಕಲು ಮಾಡಿದ ಕಾರಣ ಬಿಹಾರ ಶಾಲಾ ಪರೀಕ್ಷಾ ಮಂಡಳಿ (ಬಿಎಸ್‍ಇಬಿ) ಗಣೇಶ್ ಕುಮಾರ್ ಎಂಬ ವಿದ್ಯಾರ್ಥಿಯ ಫಲಿತಾಂಶವನ್ನು ರದ್ದು ಮಾಡಿತ್ತು. ಇದೀಗ ಆತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 2 Jun 2017, 11:35 pm
ಹೊಸದಿಲ್ಲಿ: ದಾಖಲೆ ಪತ್ರಗಳನ್ನು ನಕಲು ಮಾಡಿದ ಕಾರಣ ಬಿಹಾರ ಶಾಲಾ ಪರೀಕ್ಷಾ ಮಂಡಳಿ (ಬಿಎಸ್‍ಇಬಿ) ಗಣೇಶ್ ಕುಮಾರ್ ಎಂಬ ವಿದ್ಯಾರ್ಥಿಯ ಫಲಿತಾಂಶವನ್ನು ರದ್ದು ಮಾಡಿತ್ತು. ಇದೀಗ ಆತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Vijaya Karnataka Web bihar board topper ganesh kumar arrested his result cancelled
ಕ್ಲಾಸ್ 12 ರ‍್ಯಾಂಕ್ ವಿದ್ಯಾರ್ಥಿ ಫಲಿತಾಂಶ ರದ್ದು, ಬಂಧನ


ಬಿಎಸ್‍ಇಬಿ ಆತನ ವಿರುದ್ಧ ಕೇಸು ದಾಖಲಿಸಿದ್ದ ಕಾರಣ ಪೊಲೀಸರು ಬಂಧಿಸಿದ್ದಾರೆ. 'ಕ್ಲಾಸ್ 12 ವಿದ್ಯಾರ್ಥಿ ಗಣೇಶ್ ಕುಮಾರ್ ಫಲಿತಾಂಶವನ್ನು ರದ್ದು ಮಾಡಲಾಗುತ್ತಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಆತನ ವಿರುದ್ಧ ಕೇಸು ದಾಖಲಿಸಿದ್ದೇವೆ' ಎಂದು ಬಿಎಸ್ಇಬಿ ಅಧ್ಯಕ್ಷ ಆನಂದ್ ಕಿಶೋರ್ ತಿಳಿಸಿದ್ದಾರೆ.

ಗಣೇಶ್‍ಗೆ ಈ ಹಿಂದೆ ಕ್ಲೀನ್‌ಚಿಟ್ ನೀಡಲಾಗಿತ್ತು. ಆದರೆ ಇಂದು ಸಡನ್ ಆಗಿ ಮಂಡಳಿ ಯೂ-ಟರ್ನ್ ತೆಗೆದುಕೊಂಡಿದೆ. ಗಣೇಶ್ ಅವರ ರ್‍ಯಾಂಕ್ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ ಎಂದಿದ್ದರು ಮಂಡಳಿ ಅಧ್ಯಕ್ಷರು. ಗಣೇಶ್ ಒಬ್ಬ ಅಪ್ಪಟ ವಿದ್ಯಾರ್ಥಿ ಎಂದು ಬಿಹಾರದ ಶಿಕ್ಷಣ ಸಚಿವ ಅಶೋಕ್ ಚೌದರಿ ಸಹ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಇಂದು ಎಲ್ಲವೂ ಉಲ್ಟಾ ಆಗಿದೆ.

ಈ ವರ್ಷದ ಕ್ಲಾಸ್ 12 ಪರೀಕ್ಷಾ ಫಲಿತಾಂಶದಲ್ಲಿ ಶೇ.65ರಷ್ಟು ಮಂದಿ ನಪಾಸಾಗಿದ್ದರು. ಗಣೇಶ್ ಕುಮಾರ್ (24) ಈ ಸಲದ ಪರೀಕ್ಷೆಗೆ ಹಾಜರಾಗಿದ್ದ. ಲಲಿತಕಲಾ ವಿಭಾಗದಲ್ಲಿ ಶೇ.82.6 ಅಂಕಗಳನ್ನು ಪಡೆದಿದ್ದ, ಜತೆಗೆ ಸಂಗೀತದ ಪ್ರಾಯೋಗಿಕ ಪರೀಕ್ಷೆಯಲ್ಲಿ 70ಕ್ಕೆ 65 ಅಂಕ ಹಾಗೂ ಥಿಯರಿಯಲ್ಲಿ 30ಕ್ಕೆ 18 ಅಂಕ ಪಡೆದಿದ್ದ. ಹಿಂದಿಯಲ್ಲಿ 100ಕ್ಕೆ 92 ಅಂಕ ಗಳಿಸಿದ್ದ.

ಆದರೆ ಈತನಿಗೆ ಕನಿಷ್ಟ ಜ್ಞಾನವೂ ಇರಲಿಲ್ಲ ಎಂಬುದು ಆ ಬಳಿಕ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಗೊತ್ತಾಗಿತ್ತು. ಸರಳ ಪ್ರಶ್ನೆಗಳಿಗೂ ಉತ್ತರ ಗೊತ್ತಿರಲಿಲ್ಲ. ಸಂಗೀತದ ಬಗ್ಗೆ ಕೇಳಿದರೆ ಬಾಲಿವುಡ್ ಸಿನಿಮಾ ಹಾಡುಗಳ ಒಂದೆರಡು ಸಾಲು ಹೇಳಿ ಸಿಕ್ಕಿಬಿದ್ದಿದ್ದ. ಬಳಿಕ ಈತನ ಬಂಡವಾಳ ಬಯಲಾಗಿತ್ತು. ಪರೀಕ್ಷೆಯಲ್ಲಿ ಗೋಲ್‍ಮಾಲ್ ನಡೆದಿರುವುದು ಬೆಳಕಿಗೆ ಬಂದು ಈತನ ಫಲಿತಾಂಶ ರದ್ದಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ