ಆ್ಯಪ್ನಗರ

ಬಿಜೆಪಿಯನ್ನು ಸದೃಢಗೊಳಿಸುವುದೇ ನಮ್ಮ ಗುರಿಯಾಗಿತ್ತು..! ಸೋಲಿನ ಬಳಿಕ 'ಕಮಲ'ಕ್ಕೆ ಜೈ ಎಂದ ಚಿರಾಗ್

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್‌ ಮೇಕರ್‌ ಕನಸು ಕಾಣುತ್ತಿದ್ದ ಚಿರಾಗ್‌ ಪಾಸ್ವಾನ್ ಈಗ ರಾಜ್ಯದಲ್ಲಿ ಬಿಜೆಪಿಯನ್ನು ಸದೃಢಗೊಳಿಸುವ ಗುರಿ ಹೊಂದಿದ್ದೇವು. ಅದಾಗಿದೆ ಎನ್ನುವ ಮೂಲಕ ಬಿಜೆಪಿಗೆ ಜೈ ಎಂದಿದ್ದಾರೆ.

Agencies 11 Nov 2020, 5:25 pm
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್‌ ಮೇಕರ್‌ ಆಗುವ ಕನಸು ಕಾಣುತ್ತಿದ್ದ ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಕೇವಲ ಒಂದು ಕ್ಷೇತ್ರದ ಗೆಲುವಿಗೆ ಮಾತ್ರ ತೃಪ್ತಿಪಡುವಂತಾಗಿದೆ. ಆದರೆ, ನಾವು ಏನು ಅಂದುಕೊಂಡಿದ್ದೇವೋ ಅದನ್ನು ಸಾಧಿಸಿದ್ದೇವೆ ಎಂದು ಹೇಳಿರುವ ಚಿರಾಗ್‌, ರಾಜ್ಯದಲ್ಲಿ ಬಿಜೆಪಿಯನ್ನು ಸದೃಢಗೊಳಿಸುವ ಗುರಿ ಹೊಂದಿದ್ದೇವು ಆ ಗುರಿ ತಲುಪಿದ್ದೇವೆ ಎಂದಿದ್ದಾರೆ.
Vijaya Karnataka Web bihar election results 2020 chirag paswan now says all he wanted was to make bjp stronger
ಬಿಜೆಪಿಯನ್ನು ಸದೃಢಗೊಳಿಸುವುದೇ ನಮ್ಮ ಗುರಿಯಾಗಿತ್ತು..! ಸೋಲಿನ ಬಳಿಕ 'ಕಮಲ'ಕ್ಕೆ ಜೈ ಎಂದ ಚಿರಾಗ್


ಪಾಟ್ನಾದಲ್ಲಿ ಬುಧವಾರ ಮಾತನಾಡಿದ ಅವರು, ಎಲ್ಲ ಪಕ್ಷಗಳಂತೆ ನಮಗೂ ಎಷ್ಟು ಸಾಧ್ಯವಾಗುತದೆಯೋ ಅಷ್ಟು ಗೆಲ್ಲಬೇಕೆಂಬ ಹಂಬಲ ಇತ್ತು. ಆದರೆ, ನನ್ನ ಗುರು ಬಿಹಾರದಲ್ಲಿ ಬಿಜೆಪಿಯನ್ನು ಸದೃಢ ಪಕ್ಷವನ್ನಾಗಿ ಮಾಡುವುದಾಗಿತ್ತು. ನಮ್ಮ ಪಕ್ಷದ ಪ್ರಭಾವದಿಂದ ಅದು ಸಾಧಯವಾಗಿದ್ದು, ನಮಗೆ ಖುಷಿಯಿದೆ ಎಂದು ಹೇಳಿದ್ದಾರೆ.

ಚಿರಾಗ್‌ ಪಾಸ್ವಾನ್‌ ಎನ್‌ಡಿಎದಿಂದ ಹೊರಬಂದು ಏಕಾಂಗಿ ಪ್ರಚಾರ ಆರಂಭಿಸುವುದಕ್ಕೆ ಕಾರಣವೆಂದರೆ ನಿತೀಶ್‌ ಕುಮಾರ್‌ ಅವರ ಜೆಡಿಯುನ್ನು ಸೋಲಿಸಿ, ಬಿಜೆಪಿಯೊಂದಿಗೆ ಸರಕಾರ ರಚಿಸುವುದಾಗಿತ್ತು. ಆದರೆ, ಜೆಡಿಯುನ ಸ್ಥಾನಗಳಲ್ಲಿ ಗಮನಾರ್ಹ ಕುಸಿತ ಕಂಡರೂ ಎನ್‌ಡಿಎ ಸ್ಪಷ್ಟ ಬಹುಮತ ಪಡೆದಿದೆ.

ಬಿಹಾರದಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ..! 'ಕಮಲ'ದ ಕಮಾಲ್‌ನಿಂದ ನಿತೀಶ್‌ಗೆ‌ ಸಿಎಂ ಪಟ್ಟ

ಜೆಡಿಯುನ ಅಭ್ಯರ್ಥಿಗಳು ಸ್ಪರ್ಧಿಸಿದ ಕಡೆಯೆಲ್ಲಾ ಎಲ್‌ಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಚಿರಾಗ್‌ ಪಾಸ್ವಾನ್‌ ಫ್ಯಾಕ್ಟರ್‌ನಿಂದ ಜೆಡಿಯು ಸುಮಾರು 20 ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂದು ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರೇ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಎನ್‌ಡಿಎಗೆ 40 ಸ್ಥಾನಗಳು ಚಿರಾಗ್‌ರಿಂದ ಕೈತಪ್ಪಿವೆ ಎನ್ನಲಾಗುತ್ತಿದೆ.

ಬಿಜೆಪಿಗೆ ಲಕ್‌, ಆರ್‌ಜೆಡಿಗೆ ಕಾಂಗ್ರೆಸ್‌ ಶಾಕ್‌..! ಬಿಹಾರ ರಿಸಲ್ಟ್‌ನ 10 ಪ್ರಮುಖ ಅಂಶಗಳು

ಈ ಸಲದ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಪಕ್ಷ 43 ಸ್ಥಾನಗಳಿಗೆ ತನ್ನ ಅಭಿಯಾನ ಮುಗಿಸಿದ್ದು, ಕಳೆದ ಬಾರಿಗಿಂತ 28 ಕ್ಷೇತ್ರಗಳು ಕಡಿಮೆಯಾಗಿವೆ. 2015ರಲ್ಲಿ ಜೆಡಿಯು 71 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ 53 ರಿಂದ 74ಕ್ಕೆ ತನ್ನ ಕ್ಷೇತ್ರಗಳನ್ನು ಏರಿಸಿದ್ದು, ಎನ್‌ಡಿಎನ ಹಿರಿಯ ಪಾಲುದಾರ ಆಗಿದೆ. ಇದಕ್ಕೆ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಕಾರಣವಾಗಿದೆ ಎನ್ನಲಾಗುತ್ತಿದೆ.

ತೇಜಸ್ವಿ ಯಾದವ್‌ ಸಿಎಂ ಕನಸಿಗೆ ಮುಳುವಾದ ಕಾಂಗ್ರೆಸ್‌..! ಹೆಚ್ಚು ಸೀಟು ನೀಡಿ 'ಕೈ' ಸುಟ್ಟುಕೊಳ್ತಾ ಆರ್‌ಜೆಡಿ..?

ಬುಧವಾರ ಮಾತನಾಡಿದ ಅವರು, ಸೋಲನ್ನು ಹೇಗೆಎ ವ್ಯಾಖ್ಯಾನಿಸುತ್ತೀರಿ ಎಂದು ಪತ್ರಕರ್ತರಿಗೆ ಪ್ರಶ್ನಿಸಿ ಪಕ್ಷದ ವೋಟ್‌ ಶೇರ್‌ ಹೆಚ್ಚಾಗಿದೆ ಅದು ಗೆಲುವೇ ಎಂದಿದ್ದಾರೆ. ಎಲ್‌ಜೆಪಿಯ ಶಾಕ್‌ನಿಂದ ಜೆಡಿಯು ಅಸಮಧಾನಗೊಂಡಿದ್ದು, ಚಿರಾಗ್‌ ಪಾಸ್ವಾನ್‌ ಅವರನ್ನು ಬಿಜೆಪಿ ಮೊದಲಿನಂದಲೇ ನಿಯಂತ್ರಿಸಬೇಕಿತ್ತು ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ