ಆ್ಯಪ್ನಗರ

ಬಿಹಾರ: ಬಿಜೆಪಿ ಶಾಸಕನಿಗೆ ಆಮಿಷ ಒಡ್ಡಿದ ಲಾಲು ಯಾದವ್‌ ವಿರುದ್ಧ ಎಫ್‌ಐಆರ್‌ ದಾಖಲು!

ಬಿಜೆಪಿ ಶಾಸಕರಿಗೆ ಕರೆ ಮಾಡಿ ಆಮಿಷವೊಡ್ಡಿದ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ವಿರುದ್ಧ ದೂರು ದಾಖಲಾಗಿದೆ. ಸದ್ಯ ಲಾಲೂ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಿಂದಲೇ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಆಮಿಷವೊಡ್ಡಿದ್ದಾರೆ ಎನ್ನುವ ಆರೋಪ ಲಾಲೂ ಮೇಲಿದೆ.

Vijaya Karnataka Web 27 Nov 2020, 7:15 am
ಪಟನಾ: ಸ್ಪೀಕರ್‌ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಸೋಲಿಸಲು ನೆರವಾಗುವಂತೆ ಜೈಲಿನಿಂದಲೇ ಎನ್‌ಡಿಎ ಶಾಸಕರಿಗೆ ಕರೆ ಮಾಡಿದ್ದ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುರುತ್ತಿರುವ ಲಾಲು ರಾಂಚಿ ಜೈಲಿನಲ್ಲಿದ್ದಾರೆ.
Vijaya Karnataka Web lalu prasad yadav


ಅಲ್ಲಿಂದಲೇ ಮಂಗಳವಾರ ರಾತ್ರಿ ಬಿಜೆಪಿ ಶಾಸಕ ಲಲನ್‌ ಕುಮಾರ್‌ ಪಾಸ್ವಾನ್‌ ಅವರಿಗೆ ಕರೆ ಮಾಡಿ, ''ಕೊರೊನಾ ನೆಪದಲ್ಲಿ ಅಧಿವೇಶನಕ್ಕೆ ಗೈರು ಹಾಜರಾಗಿ. ಸ್ಪೀಕರ್‌ ಚುನಾವಣೆಯಲ್ಲಿ ಸೋಲುಂಟಾದರೆ ಸರಕಾರಕೆ ಮುಖಭಂಗವಾಗುತ್ತದೆ. ನಂತರ ನಾವು ಸರಕಾರ ಬೀಳಿಸುತ್ತೇವೆ. ಮುಂದೆ ಬರಲಿರುವ ಮಹಾಘಟಬಂಧನ್‌ ಸರಕಾರದಲ್ಲಿ ನಿಮಗೆ ಸಚಿವ ಸ್ಥಾನ ನೀಡಲಾಗುವುದು,'' ಎಂದು ಆಮಿಷವೊಡ್ಡಿದ್ದರು.

ಕರೆ ಮಾಹಿತಿ ಸಮೇತ ಪಾಸ್ವಾನ್‌ ಅವರು ಪೊಲೀಸ್‌ ಜಾಗೃತ ದಳಕ್ಕೆ ದೂರು ನೀಡಿದ್ದಾರೆ. ಲಾಲು ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಹಲವು ಕಲಮುಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಪೀಕರ್‌ ಚುನಾವಣೆ ಸಂಬಂಧ ಲಾಲು ತಮಗೂ ಹಲವು ಕರೆ ಮಾಡಿದ್ದರು ಎಂದು ಹಿಂದೂಸ್ತಾನಿ ಅವಾಮ್‌ ಮೋರ್ಚಾ ಮುಖ್ಯಸ್ಥ ಜಿತಿನ್‌ ರಾಮ್‌ ಮಾಂಝಿ ಅವರೂ ತಿಳಿಸಿದ್ದಾರೆ. ಬುಧವಾರ ನಡೆದ ಸ್ಪೀಕರ್‌ ಚುನಾವಣೆಯಲ್ಲಿ ಬಿಜೆಪಿಯ ವಿಜಯ್‌ಕುಮಾರ್‌ ಸಿನ್ಹಾ ಆಯ್ಕೆಯಾಗಿದ್ದಾರೆ.

ಹೈದರಾಬಾದ್‌: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ