ಆ್ಯಪ್ನಗರ

ನೀಟ್‌ನಲ್ಲಿ ಬಾಲಕರದ್ದೇ ಮೇಲುಗೈ: ದೇಶಕ್ಕೆ ಬಿಹಾರದ ಕಲ್ಪನಾ ಕುಮಾರಿ, ರಾಜ್ಯಕ್ಕೆ ಶ್ರೀಧರ್‌ ದೊಡ್ಡಮನಿ ಟಾಪರ್‌

ದೇಶಾದ್ಯಂತ ಮೆಡಿಕಲ್‌ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಯಲ್ಲಿ ಬಿಹಾರದ ಹುಡುಗಿ ಕಲ್ಪನಾ ಕುಮಾರಿ ದೇಶಕ್ಕೇ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಕರ್ನಾಟಕದ ವಿಜಯಪುರದ ಶ್ರೀಧರ್‌ ದೊಡ್ಡಮನಿ 105ನೇ ರ‍್ಯಾಂಕ್‌ ಗಳಿಸಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.

Vijaya Karnataka Web 5 Jun 2018, 7:38 am
ಹೊಸದಿಲ್ಲಿ: ದೇಶಾದ್ಯಂತ ವಿವಿಧ ಕಾಲೇಜುಗಳಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ಕನಸು ಹೊತ್ತು ಲಕ್ಷಾಂತರ ವಿದ್ಯಾರ್ಥಿಗಳು ಬರೆದಿದ್ದ 2018ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಫಲಿತಾಂಶವನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸೋಮವಾರ ಪ್ರಕಟಿಸಿದೆ. ಟಾಪ್‌ 50 ರಾರ‍ಯಂಕ್‌ಪಟ್ಟಿಯಲ್ಲಿ 36 ವಿದ್ಯಾರ್ಥಿಗಳು ಹಾಗೂ 14 ವಿದ್ಯಾರ್ಥಿನಿಯರಿದ್ದು, ಬಾಲಕರ ಸಾಧನೆ ವಿಶೇಷವೆನಿಸಿದೆ.
Vijaya Karnataka Web Kalpana Kumari


720 ಅಂಕಗಳಿಗೆ 691 ಅಂಕಗಳನ್ನು ಪಡೆಯುವ ಮೂಲಕ ಬಿಹಾರದ ಕುವರಿ ಕಲ್ಪನಾ ಕುಮಾರಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಆಕೆ ಭೌತಶಾಶ್ತ್ರದಲ್ಲಿ 171 (180), ರಸಾಯನಶಾಸ್ತ್ರದಲ್ಲಿ 160 (180) ಹಾಗೂ ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ 360(360ಕ್ಕೆ) ಅಂಕ ಪಡೆದಿದ್ದಾರೆ. 690 ಅಂಕಗಳೊಂದಿಗೆ ತೆಲಂಗಾಣದ ರೋಹನ್‌ ಪುರೋಹಿತ್‌ ಮತ್ತು ದಿಲ್ಲಿಯ ಹಿಮಾಂಶು ಶರ್ಮಾ 2ನೇ ರಾರ‍ಯಂಕ್‌ಅನ್ನು ಜಂಟಿಯಾಗಿ ಪಡೆದುಕೊಂಡಿದ್ದಾರೆ. ಇನ್ನು 686 ಅಂಕಗಳೊಂದಿಗೆ ದಿಲ್ಲಿಯ ಅರೋಶ್‌ ಧಾಮಿಜಿಯಾ ಮತ್ತು ರಾಜಸ್ಥಾನದ ಪ್ರಿನ್ಸ್‌ ಚೌಧರಿ 3ನೇ ರಾರ‍ಯಂಕ್‌ಅನ್ನು ಹಂಚಿಕೊಂಡಿದ್ದಾರೆ.

ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮತ್ತು ಭಾರತೀಯ ದಂತ ವೈದ್ಯಕೀಯ ಮಂಡಳಿ (ಡಿಸಿಐ) ಅನುಮೋದಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೀಟ್‌ ಪರೀಕ್ಷೆ ಕಡ್ಡಾಯವಾಗಿದೆ. ಆದರೆ ಆಲ್‌ ಇಂಡಿಯಾ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ಏಮ್ಸ್‌) ಮತ್ತು ಪುದುಚೆರಿಯ ಜವಾಹರಲಾಲ್‌ ಇನ್ಸಿಟಿಟ್ಯೂಟ್‌ ಆಫ್‌ ಪೋಸ್ಟ್‌ ಗ್ರಾಜ್ಯುಯೇಟ್‌ ಮೆಡಿಕಲ್‌ ಎಜುಕೇಷನ್‌ ಅಂಡ್‌ ರಿಸರ್ಚ್‌ (ಜೈಪಿಎಂಇಆರ್‌) ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆ ಸಹಕಾರಿಯಾಗುವುದಿಲ್ಲ ಎನ್ನುತ್ತವೆ ಮೂಲಗಳು.

11 ಭಾಷೆಗಳಲ್ಲಿ ಪರೀಕ್ಷೆ : ಮೇ 6ರಂದು ದೇಶದ 136 ನಗರಗಳ 2255 ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡವೂ ಸೇರಿದಂತೆ 11 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 12.69 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 5,53,849 ಬಾಲಕರು ಹಾಗೂ 7,16,072 ಬಾಲಕಿಯರು.


ಕೇಂದ್ರಕ್ಕೆ ನೋಟಿಸ್‌ ನೀಡಿದ ಸುಪ್ರೀಂ

ನೀಟ್‌ ಪರೀಕ್ಷೆ ಬರೆಯಲು ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 25 ಹಾಗೂ ಮೀಸಲು ಅಭ್ಯರ್ಥಿಗಳಿಗೆ 30 ವರ್ಷ ನಿಗದಿಗೊಳಿಸಿ ಭಾರತೀಯ ವೈದ್ಯಕೀಯ ಮಂಡಳಿ ನಿಯಮಾವಳಿಯಲ್ಲಿ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ನೋಟಿಸ್‌ ನೀಡಿದೆ. ಈ ನಿಯಮ ಪ್ರಶ್ನಿಸಿ 170 ನೀಟ್‌ ಪರೀಕ್ಷಾ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯಲ್‌ ನೇತೃತ್ವದ ನ್ಯಾಯಪೀಠವು ಕೇಂದ್ರ, ಸಿಬಿಎಸ್‌ಇ ಹಾಗೂ ಕೇರಳ ಸರಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್‌ ನೀಡಿ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ