ಆ್ಯಪ್ನಗರ

ಸಹೋದ್ಯೋಗಿ ಸಾವು: ತರಬೇತಿ ಪೊಲೀಸರಿಂದ ಮೇಲಧಿಕಾರಿ ಮೇಲೆ ಹಲ್ಲೆ

ಗಲಭೆ ನಡೆಸಿದ ಪೊಲೀಸರ ಪೈಕಿ ಹೆಚ್ಚಿನವರು ಮಹಿಳೆಯರಾಗಿದ್ದು, ಸಹೋದ್ಯೋಗಿ ಸವಿತಾ ಪಾಠಕ್ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TIMESOFINDIA.COM 3 Nov 2018, 4:57 pm
ಪಾಟ್ಣಾ: ಸಹೋದ್ಯೋಗಿಯ ಸಾವಿಗೆ ಕೆರಳಿದ 400ಕ್ಕೂ ಹೆಚ್ಚು ಪೊಲೀಸ್ ಪೇದೆಗಳು ತಮ್ಮ ಮೇಲಧಿಕಾರಿಯನ್ನು ಹೊಡೆದು ಸಾಯಿಸಲು ಯತ್ನಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಬುದ್ಧ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಲೋದಿಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
Vijaya Karnataka Web Police Hat


ಗಲಭೆ ನಡೆಸಿದ ಪೊಲೀಸರ ಪೈಕಿ ಹೆಚ್ಚಿನವರು ಮಹಿಳೆಯರಾಗಿದ್ದು, ಸಹೋದ್ಯೋಗಿ ಸವಿತಾ ಪಾಠಕ್ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಸವಿತಾ ಪಾಠಕ್‌ಗೆ ಮೇಲಧಿಕಾರಿಗಳು ರಜೆಯನ್ನು ನೀಡಿರಲಿಲ್ಲ. ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದರು.

ಸವಿತಾಗೆ ರಜೆ ನಿರಾಕರಿಸಿದ್ದಾರೆ, ಎನ್ನಲಾದ ಡಿವೈಎಸ್‌ಪಿ ಮೊಹಮ್ಮದ್ ಮಶಲುದ್ದೀನ್ ಮೇಲೆ ಏರಿ ಹೋದ ಉದ್ರಿಕ್ತ ಗುಂಪು ಅವರನ್ನು ಬಡಿದು ಸಾಯಿಸಲು ಯತ್ನಿಸಿತು. ಅವರನ್ನು ಸಮಾಧಾನ ಪಡಿಸಲು ಸ್ಥಳಕ್ಕೆ ತೆರಳಿದ ಹಿರಿಯ ಅಧಿಕಾರಿಗಳ ಮೇಲೆ ಸಹ ಪೇದೆಗಳು ದಾಳಿ ಮಾಡಿ ಗಾಯಗೊಳಿಸಿದರು.

ವಿಧ್ವಂಸಕತೆ ನಡೆಸಿದ ತರಬೇತಿ ನಿರತ ಪೊಲೀಸರು ರಸ್ತೆಗಿಳಿದು ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ವಾಹನಗಳನ್ನು ಜಖಂಗೊಳಿಸಿದ್ದಲ್ಲದೇ ಬೀದಿ ಬದಿಯ ಮಾರಾಟಗಾರರ ಮೇಲೆ ಸಹ ದಾಳಿ ಮಾಡಿದರು. ಹತ್ತಿರದ ದೇವಸ್ಥಾನವೊಂದರ ಸಿಸಿ ಟಿವಿ ಕ್ಯಾಮರಾವನ್ನು ನಾಶ ಪಡಿಸಿದಾಗ ಕೆರಳಿದ ಸ್ಥಳೀಯರು ಪ್ರತಿಭಟನಾ ನಿರತರ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ವರದಿಗಾರರು ಮತ್ತು 10ಕ್ಕೂ ಹೆಚ್ಚು ಜನರು ಸಹ ಗಾಯಗೊಂಡರು.

3 ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ಸವಿತಾ ಅವರಿಗೆ ರಜೆಯನ್ನು ನೀಡಿರಲಿಲ್ಲ. ಅಷ್ಟೇ ಅಲ್ಲದೇ ಕರ್ತವ್ಯಕ್ಕೂ ನಿಯೋಜಿಸಲಾಗಿತ್ತು ಎಂದು ಉದ್ರಿಕ್ತರು ದೂರಿದ್ದಾರೆ.

ಈ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಜಿಪಿ ಕೆ ಎಸ್ ದ್ವಿವೇದಿಗೆ ಆದೇಶ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಶಲುದ್ದೀನ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ