ಆ್ಯಪ್ನಗರ

ಗುರುತು ನಾಪತ್ತೆಗೆ ಮಚ್ಚೆ ಅಳಿಸಿ ಹಾಕಿದರೇ ಧನುಷ್‌ ?

ಧನುಷ್‌ ತಮ್ಮ ದೇಹದ ಮೇಲಿನ ಮಚ್ಚೆಗಳನ್ನು ಅಳಿಸಿ ಹಾಕಿದ್ದಾರೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 20 Mar 2017, 8:05 pm
ಚೆನ್ನೈ: ನಟ ಧನುಷ್‌ ತಮ್ಮ ಮಗನೆಂದು ಹೇಳಿ ದಂಪತಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ದಿನದಿಂದ ದಿನಕ್ಕೆ ವಿವಿದ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಧನುಷ್‌ ತಮ್ಮ ದೇಹದ ಮೇಲಿನ ಮಚ್ಚೆಗಳನ್ನು ಅಳಿಸಿ ಹಾಕಿದ್ದಾರೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದೆ.
Vijaya Karnataka Web birth marks removed from dhanush body medical reports says
ಗುರುತು ನಾಪತ್ತೆಗೆ ಮಚ್ಚೆ ಅಳಿಸಿ ಹಾಕಿದರೇ ಧನುಷ್‌ ?


ಧನುಷ್‌ ನಮ್ಮ ಮಗ ಎಂದು ಮೇಲೂರಿನ ದಂಪತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯ ವೇಳೆ ಇಬ್ಬರು ದಂಪತಿಗಳು ಧನುಷ್‌ ದೇಹದಲ್ಲಿನ ಮಚ್ಚೆ ಗುರುತನ್ನು ಹೇಳಿದ್ದರು. ಇದರ ಪರೀಕ್ಷೆ ನಡೆಸಿದ್ದ ಮದುರೈ ಸರಕಾರಿ ಆಸ್ಪತ್ರೆಯ ಡೀನ್‌, ಧನುಷ್‌ ಅವರ ದೇಹದಲ್ಲಿ ಕೆಲ ಮಚ್ಚೆಗಳನ್ನು ಲೇಸರ್‌ ಟ್ರೀಟ್‌ಮೆಂಟ್‌ ಮೂಲಕ ಅಳಿಸಲಾಗಿದೆ ಎಂದು ಮದುರೈ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ವರದಿಯನ್ನು ಪರಿಶೀಲಿಸಿರುವ ನ್ಯಾಯಲಯ ಮುಂದಿನ ವಿಚಾರಣೆಯನ್ನು ಮಾರ್ಚ್‌ 27ಕ್ಕೆ ಮುಂದೂಡಿದೆ.

ಕಳೆದ ಬಾರಿಯ ವಿಚಾರಣೆಯಲ್ಲಿ ಮಧುರೈ ಮೇಲೂರು ನಿವಾಸಿಗಳಾದ ಆರ್‌.ಕದಿರೇಸನ್‌ (60 ವರ್ಷ) ಮತ್ತು ಕೆ.ಮೀನಾಕ್ಷಿ(55 ವರ್ಷ) ದಂಪತಿ ಧನುಷ್‌ ತಮ್ಮ ಮಗನೆಂದು ನಿರೂಪಿಸಲು ಡಿಎನ್‌ಎ ಪರೀಕ್ಷೆ ನಡೆಸಿ ಎಂದು ಕೇಳಿದ್ದರು. ಇದರ ಮುಂದುವರಿದ ಭಾಗವಾಗಿ ಸೋಮವಾರ ವೈದ್ಯರು ಧನುಷ್‌ ದೇಹದಲ್ಲಿನ ಮಚ್ಚೆಯನ್ನು ಅಳಿಸಿರುವ ಕುರಿತು ವರದಿ ಸಲ್ಲಿಸಿದ್ದಾರೆ.

ಈ ಹಿಂದೆ ಧನುಷ್‌ ತಮ್ಮ ಮಗ ಎಂದು ಸಾಬೀತು ಪಡಿಸಲು ಅವರ ತಂದೆ ನಿರ್ದೇಶಕ ಕಸ್ತೂರಿ ರಾಜ, ಹಾಗೂ ತಾಯಿ ವಿಜಯಲಕ್ಷ್ಮಿ ಕೂಡಾ ನ್ಯಾಯಾಲಯಕ್ಕೆ ಹಾಜಾರಾಗಿದ್ದರು. ಈ ವೇಳೆ ಧನುಷ್‌ ತಮ್ಮ ಮಗ ಎಂದು ಸಾಬೀತು ಪಡಿಸಲು ಅಂಕಪಟ್ಟಿ ಸಲ್ಲಿಸಿದ್ದರು. ಈ ಅಂಕಪಟ್ಟಿಯನ್ನು ಕದಿರೇಸನ್‌ ದಂಪತಿ ಸುಳ್ಳು ಎಂದು ಆರೋಪಿಸಿದ್ದರು. ಅಲ್ಲದೇ ತಮ್ಮ ಜೀವನ ನಿರ್ವಹಣೆಗೆ ಧನುಷ್‌ ತಿಂಗಳಿಗೆ 65 ಸಾವಿರ ಹಣವನ್ನು ನೀಡುವಂತೆ ಮನವಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ