ಆ್ಯಪ್ನಗರ

ವಿಜ್ಞಾನ ಭವನದ ಹೊರಗೆ ರೈತ ನಾಯಕರ ಹುಟ್ಟು ಹಬ್ಬ: ಗಮನ ಸೆಳೆದ 'ಜೈ ಜವಾನ್ ಜೈ ಕಿಸಾನ್' ಕೇಕ್!

ಕೇಂದ್ರ ಕೃಷಿ ಕಾಯ್ದೆಯ ಪೂರ್ವಾಪರ ಕುರಿತು ಚರ್ಚಿಸಲು, ರಾಷ್ಟ್ರ ರಾಜಧಾನಿ ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರ ಹಾಗೂ ರೈತರ ಸಂಘಟನೆಗಳ ನಡುವಿನ 11ನೇ ಸುತ್ತಿನ ಮಾತುಕತೆ ಆರಂಭವಾಗಿದೆ. ಮಾತುಕತೆ ಬಿಡುವಿನ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ರೈತ ಸಂಘಟನೆಗಳ ನಾಯಕರ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

Vijaya Karnataka Web 22 Jan 2021, 5:07 pm
ಹೊಸದಿಲ್ಲಿ: ಕೇಂದ್ರ ಕೃಷಿ ಕಾಯ್ದೆಯ ಪೂರ್ವಾಪರ ಕುರಿತು ಚರ್ಚಿಸಲು, ರಾಷ್ಟ್ರ ರಾಜಧಾನಿ ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರ ಹಾಗೂ ರೈತರ ಸಂಘಟನೆಗಳ ನಡುವಿನ 11ನೇ ಸುತ್ತಿನ ಮಾತುಕತೆ ಆರಂಭವಾಗಿದೆ.
Vijaya Karnataka Web Farmers Birthday
ದೆಹಲಿಯ ವಿಜ್ಞಾನ ಭವನದಲ್ಲಿ ರೈತ ನಾಯಕರ ಹುಟ್ಟುಹಬ್ಬ


ಮಾತುಕತೆ ಬಿಡುವಿನ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ರೈತ ಸಂಘಟನೆಗಳ ನಾಯಕರ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

ವಿಜ್ಞಾನ ಭವನದ ಆವರಣದಲ್ಲಿ ಜಮಾವಣೆಗೊಂಡ ರೈತ ಸಂಘಟನೆಗಳ ನಾಯಕರು, ಕೆಲವು ನಾಯಕರ ಹುಟ್ಟುಹಬ್ಬವನ್ನು ಆಚರಿಸಿದರು. ಈ ವೇಳೆ ರೈತ ಘೋಷಣೆಗಳನ್ನು ಮೊಳಗಿಸಲಾಯಿತು.

18 ತಿಂಗಳು ಕೃಷಿ ಕಾಯಿದೆ ಜಾರಿ ಮುಂದೂಡಿಕೆ ಪ್ರಸ್ತಾವ ತಿರಸ್ಕರಿಸಿದ ರೈತರು

'ಜೈ ಜವಾನ್, ಜೈ ಕಿಸಾನ್' ಎಂಬ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಘೋಷವಾಕ್ಯವನ್ನು ಬರೆದ ಕೇಕ್‌ನ್ನು ರೈತ ನಾಯಕರು ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.


ಸದ್ಯ ಕೇಂದ್ರ ಹಾಗೂ ರೈತ ಸಂಘಟನೆಗಳ ನಡುವಿನ 11ನೇ ಸುತ್ತಿನ ಮಾತುಕತೆ ಮುಂದುವರೆದಿದ್ದು, ಸಭೆಯ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.

ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಬೆದರಿತೇ ಕೇಂದ್ರ? ಕೃಷಿ ಕಾಯಿದೆ ಜಾರಿ ಒಂದೂವರೆ ವರ್ಷ ಮುಂದೂಡಿಕೆ!

ಕೃಷಿ ಕಾಯ್ದೆಗಳ ತಮ್ಮ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಉಭಯ ಬಣಗಳೂ ಸಿದ್ಧವಿಲ್ಲದ ಕಾರಣಕ್ಕೆ, ಮಾತುಕತೆ ಸುದೀರ್ಘವಾಗುತ್ತಲೇ ಇದೆ. ಇದುವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಸಭೆ ವಿಫಲವಾಗಿದ್ದು, ಇಂದು(ಜ.22-ಶುಕ್ರವಾರ) ನಡೆಯುತ್ತಿರುವ ಸಭೆ ಬಳಿಕ ಧನಾತ್ಮಕ ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ