ಆ್ಯಪ್ನಗರ

ಅಲ್ಲಿ ಭಾರತ-ಚೀನಾ ಗಡಿ ಸಂಘರ್ಷ, ಇಲ್ಲಿ ಕಾಂಗ್ರೆಸ್‌-ಬಿಜೆಪಿ ಮಾತಿನ ಸಂಘರ್ಷ

ಭಾರತವು ಚೀನಾ ಮುಂದೆ ತಲೆಬಾಗಿದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡುತ್ತಿರುವುದು ಆ ಪಕ್ಷದ ಕೀಳು ಮನಸ್ಥಿತಿಯನ್ನು ತೋರಿಸುದೆ. ದೇಶ ಸಂಕಷ್ಟದಲ್ಲಿರುವ ವಿಕೃತ ಆನಂದ ಅನುಭವಿಸುವುದು ಆ ಪಕ್ಷದ ಮನಸ್ಥಿತಿ ಎಂದು ಬಿಜೆಪಿ ಹೇಳಿದೆ

Vijaya Karnataka Web 23 Jun 2020, 10:44 pm
ಹೊಸದಿಲ್ಲಿ: ಚೀನಾ ಸಂಘರ್ಷದ ವಿಚಾರದಲ್ಲಿ ಕಾಂಗ್ರೆಸ್‌-ಬಿಜೆಪಿ ಜಟಾಪಟಿ ಮಂಗಳವಾರವೂ ಮುಂದುವರಿದಿದೆ.
Vijaya Karnataka Web ಬಿಜೆಪಿ ಕಾಂಗ್ರೆಸ್‌
ಬಿಜೆಪಿ ಕಾಂಗ್ರೆಸ್‌


''ಗಡಿ ಸಂಘರ್ಷ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಸರಕಾರ ಸೋತಿದ್ದು, ಇದು ಅದರ ವಿದೇಧಿಶಾಂಗ ನೀತಿಯ ವೈಫಲ್ಯವನ್ನು ತೋರಿಸುತ್ತದೆ'' ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ''ಗಡಿ ಬಿಕ್ಕಟ್ಟಿನಿಂದ ದೇಶದ ಸುರಕ್ಷತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಒದಗಿದೆ. ಗಲ್ವಾನ್‌ ಕಣಿವೆ, ಪಾಂಗೋಂಗ್‌ ತ್ಸೊ ಸರೋವರ ಪ್ರದೇಶದಲ್ಲಿ ಚೀನಿ ಯೋಧರ ಅತಿಕ್ರಮಣವಾಗಿದ್ದರೂ ಸರಕಾರ ಅದನ್ನು ಅಲ್ಲಗೆಳೆಯುತ್ತಿದೆ. ಸರಕಾರ ಈಗಲಾದರೂ ದೃಢ ನಿರ್ಧಾರ ತೆಗೆದುಕೊಂಡು ಗಡಿಯಲ್ಲಿ ಉಂಟಾಗಿರುವ ಸಂಘರ್ಷವನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಿಸಲಿದೆ,'' ಎಂದರು.

''ಭಾರತದ ನೆಲವನ್ನು ಅತಿಕ್ರಮಿಸಿಲ್ಲ ಎಂಬ ಚೀನಾದ ವಾದವನ್ನು ನಂಬುವ ಮೂಲಕ ಪ್ರಧಾನಿ ಮೋದಿ ಅವರು ನಮ್ಮ ಸೈನಿಕರ ಹೋqAಟಕ್ಕೆ ದ್ರೋಹ ಬಗೆದಿದ್ದಾರೆ. ಮೋದಿ ಅವರು ರಾಜತಾಂತ್ರಿಕತೆ ಸಾಂಸ್ಥಿಕ ರಚನೆಯನ್ನು ಹಾಳುಗೆಡವಿದ್ದರ ಪರಿಣಾಮ ವಿದೇಶಾಂಗ ನೀತಿ ಸಂಪೂರ್ಣ ವೈಫಲ್ಯ ಕಂಡಿದೆ. ಸಾಂಪ್ರದಾಯಿಕ ಮಿತ್ರರಾಷ್ಟ್ರಗಳ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗಿದೆ'' ಎಂದು ರಾಹುಲ್‌ ಗಾಂಧಿ ಕಿಡಿಕಾರಿದರು.

ಬಿಜೆಪಿ ಪ್ರತ್ಯುತ್ತರ

''ಚೀನಾ ತಂಟೆಗೆ ತಕ್ಕ ಎದಿರೇಟು ನೀಡಿ ಹುತಾತ್ಮರಾದ ಈ ಸಂದರ್ಭದಲ್ಲೂ ಕಾಂಗ್ರೆಸ್‌, ಭಾರತವು ಚೀನಾ ಮುಂದೆ ತಲೆಬಾಗಿದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡುತ್ತಿರುವುದು ಆ ಪಕ್ಷದ ಕೀಳು ಮನಸ್ಥಿತಿಯನ್ನು ತೋರಿಸುದೆ. ದೇಶ ಸಂಕಷ್ಟದಲ್ಲಿರುವ ವಿಕೃತ ಆನಂದ ಅನುಭವಿಸುವುದು ಆ ಪಕ್ಷದ ಮನಸ್ಥಿತಿ'' ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ತಿರುಗೇಟು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ