ಆ್ಯಪ್ನಗರ

ಕಾಂಗ್ರೆಸ್ ಭಾರತದಲ್ಲಿ ಚುನಾವಣೆ ಎದುರಿಸುತ್ತಿದೆಯೋ, ಪಾಕ್‌ನಲ್ಲೋ: ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಟೀಕೆ

ಬಾಲಾಕೋಟ್‌ನಲ್ಲಿ ದಾಳಿ ನಡೆಸಲಾಗಿದೆ. 300 ಮಂದಿಯನ್ನು ಕೊಂದಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ವಿದೇಶೀ ಮಾಧ್ಯಮಗಳಲ್ಲಿ ಯಾರೂ ಸತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಸಾವಿನ ಬಗ್ಗೆ ಪ್ರೂಫ್ ಕೊಡಿ ಎಂದು ಕೇಳಿದ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಬಿಜೆಪಿ ಟೀಕೆ ಮಾಡಿದೆ.

Vijaya Karnataka Web 22 Mar 2019, 5:10 pm
ಹೊಸದಿಲ್ಲಿ: ಕಾಂಗ್ರೆಸ್ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಬಿಜೆಪಿ ತೀವ್ರ ಟೀಕೆ ಮಾಡಿದೆ. ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆ ಬಳಿಕ ಪ್ರತಿಕ್ರಿಯೆ ನೀಡಿದ ಬಿಜೆಪಿ, ಕಾಂಗ್ರೆಸ್ ಭಾರತದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತಿದೆಯೋ ಅಥವಾ ಪಾಕಿಸ್ತಾನದಲ್ಲೋ ಎಂದು ನಮಗೆ ಆಶ್ಚರ್ಯವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದೆ.
Vijaya Karnataka Web bjp flag


ಮುಂಬಯಿ ದಾಳಿ ಕುರಿತು ಉಲ್ಲೇಖಿಸಿದ್ದ ಸ್ಯಾಮ್ ಪಿತ್ರೋಡಾ ಅವರು, "ದೇಶಕ್ಕೆ 8 ಜನ (26/11 ಭಯೋತ್ಪಾದಕರು) ಬಂದು ಏನೋ ಮಾಡಿ ಹೋಗುತ್ತಾರೆ. ಇದಕ್ಕಾಗಿ ನಾವು ಇಡೀ ದೇಶದ (ಪಾಕಿಸ್ತಾನದ) ಮೇಲೆ ಮುಗಿಬೀಳುವುದು ಸರಿಯಲ್ಲ" ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಕರ್ನಾಟಕ ಅಧಿಕೃತ ಟ್ವಿಟರ್ ಖಾತೆ, ''ಕಾಂಗ್ರೆಸ್ ಭಾರತದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತಿದೆಯೋ ಅಥವಾ ಪಾಕಿಸ್ತಾನದಲ್ಲೋ ಎಂದು ನಮಗೆ ಆಶ್ಚರ್ಯವಾಗುತ್ತಿದೆ'' ಎಂದು ಟೀಕೆ ಮಾಡಿದೆ.

ಇನ್ನು, ''ದಾಳಿಗಳು ಸಾಮಾನ್ಯ. ಎಲ್ಲ ಕಡೆಯಲ್ಲೂ ದಾಳಿ ನಡೆಯುತ್ತದೆ. ಮುಂಬಯಿ ಮೇಲೂ ದಾಳಿ ನಡೆದಿತ್ತು. ಅ ವೇಳೆಯೂ ನಾವು ಜೆಟ್‌ಗಳನ್ನು ಕಳಿಸಬಹುದಿತ್ತು. ಆದರೆ, ಜಗತ್ತಿನೊಂದಿಗೆ ಈ ರೀತಿ ವ್ಯವಹರಿಸುವುದು ನನ್ನ ಪ್ರಕಾರ ಸರಿಯಲ್ಲ'' ಎಂದು ಸುದ್ದಿಸಂಸ್ಥೆಯ ಸಂದರ್ಶನದ ವೇಳೆ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ, '' ದಾಳಿಗಳು ಯಾವಾಗಲೂ ನಡೆಯುವುದಿಲ್ಲ ಸ್ಯಾಮ್‌ ಪಿತ್ರೋಡಾ. ದೇಶವನ್ನು ಪಪ್ಪೆಟ್‌ಗಳು ಆಳಿದಾಗ ಮಾತ್ರ ದಾಳಿಯಾಗುತ್ತವೆ. ನಿಮ್ಮ ಪಕ್ಷ ಕೇವಲ ಗಾಂಧಿಗಳಿಗೆ ಸೌಕರ್ಯ ನೀಡುತ್ತಿತ್ತು. ಇದರಿಂದಾಚೆಗೆ ಯೋಚಿಸಿದ್ದರೆ, ಭಾರತ ಈ ವೇಳೆಗೆ ಇನ್ನೂ ಬಲಿಷ್ಠ ರಾಷ್ಟ್ರವಾಗುತ್ತಿತ್ತು'' ಎಂದು ಟ್ವೀಟ್‌ ಮೂಲಕ ತಿರುಗೇಟು ಕೊಟ್ಟಿದೆ.
ಅಲ್ಲದೆ, "ನಾನು ನ್ಯೂಯಾರ್ಕ್ ಟೈಮ್ಸ್ ಮತ್ತು ಇತರ ಪತ್ರಿಕೆಗಳಲ್ಲಷ್ಟೇ ಓದಿರುವುದರಿಂದ, 300 ಮಂದಿ ಮೃತಪಟ್ಟ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ನಾವು ನಿಜಕ್ಕೂ ಯಾವುದರ ಮೇಲೆ ದಾಳಿ ಮಾಡಿದೆವು? ನಿಜವಾಗಿಯೂ 300 ಮಂದಿಯನ್ನು ಕೊಂದಿದ್ದೇವೆಯೇ?'' ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ''ಅವರು 300 ಜನರಲ್ಲ, ಉಗ್ರರು. ಕಾಂಗ್ರೆಸ್‌ ನಾಗರಿಕರು ಉಗ್ರರ ನಡುವಿನ ವ್ಯತ್ಯಾಸವು ಗೊತ್ತಾಗಲ್ಲ. ಈ ಬಗ್ಗೆ ನಮಗೇನೂ ಅಚ್ಚರಿಯಾಗಲ್ಲ. ಕಾಂಗ್ರೆಸ್‌ನ ಅಡಿಪಾಯದಲ್ಲೇ ಗೊಂದಲವಿದೆ. ಈ ಪೈಕಿ, ಕಾಂಗ್ರೆಸ್ ಅಧ್ಯಕ್ಷರೇ ಅತಿ ದೊಡ್ಡ ಗೊಂದಲ'' ಎಂದು ಬಿಜೆಪಿ ಕರ್ನಾಟಕ ಅಧಿಕೃತ ಟ್ವಿಟರ್ ಖಾತೆ ಮೂಲಕ ಕಾಂಗ್ರೆಸ್ ಸಾಗರೋತ್ತರ ಘಟಕದ ಮುಖ್ಯಸ್ಥ ಹಾಗೂ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ