ಆ್ಯಪ್ನಗರ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಯತ್ನ: ಶಿವಸೇನೆ ಆರೋಪ

"ಸರಕಾರ ರಚನೆ ಪ್ರಕ್ರಿಯೆಯನ್ನು ಬಿಜೆಪಿ ಮುಂದೂಡುತ್ತಿದೆ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ನಮಗೆ ಸರಕಾರ ರಚಿಸಲು ಸಾಧ್ಯವಿಲ್ಲ ಎಂಬುದಾಗಿ ಬಿಜೆಪಿ ನಾಯಕರು ಘೋಷಣೆ ಮಾಡಬೇಕು. ಆಗ ಶಿವಸೇನೆ ಮುಂದಿನ ಹೆಜ್ಜೆಗಳನ್ನು ಇಡಲಿದೆ," - ಸಂಜಯ್‌ ರಾವತ್‌.

TIMESOFINDIA.COM 7 Nov 2019, 6:05 pm

ಮುಂಬಯಿ: ಮಹಾರಾಷ್ಟ್ರದಲ್ಲಿ ಹಾಲಿ ವಿಧಾನಸಭೆಯ ಅವಧಿ ಕೊನೆಗೊಳ್ಳಲು (ನ. 9) ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಸರಕಾರ ರಚನೆ ಕಸರತ್ತು ಮತ್ತಷ್ಟು ಕಗ್ಗಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಯತ್ನಿಸುತ್ತಿದೆ ಎಂಬರ್ಥದಲ್ಲಿ ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಆರೋಪಿಸಿದ್ದಾರೆ.
Vijaya Karnataka Web Senior Shiv Sena leader Sanjay Raut


ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರಕಾರ ರಚನೆ ಪ್ರಕ್ರಿಯೆಯನ್ನು ಬಿಜೆಪಿ ಮುಂದೂಡುತ್ತಿದೆ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂಬುದಾಗಿ ದೂರಿದ್ದಾರೆ. ನಮಗೆ ಸರಕಾರ ರಚಿಸಲು ಸಾಧ್ಯವಿಲ್ಲ ಎಂಬುದಾಗಿ ಬಿಜೆಪಿ ನಾಯಕರು ಘೋಷಣೆ ಮಾಡಬೇಕು. ಆಗ ಶಿವಸೇನೆ ಮುಂದಿನ ಹೆಜ್ಜೆಗಳನ್ನು ಇಡಲಿದೆ ಎಂಬುದಾಗಿ ಅವರು ವಿವರಿಸಿದ್ದಾರೆ.

ತಮ್ಮ ಪಟ್ಟನ್ನು ಪುರುಚ್ಛರಿಸಿರುವ ಅವರು, ಉದ್ಧವ್‌ ಠಾಕ್ರೆ ಪಕ್ಷದವರೇ ಮಾಹಾರಾಷ್ಟ್ರದ ಮುಖ್ಯಮಂತ್ರಿ ಆಗಲಿದ್ದಾರೆ. “ಸದನದಲ್ಲಿ ನೀವು ಇದನ್ನು ಕಾಣಲಿದ್ದೀರಿ. ನಮ್ಮ ಬಳಿಯಲ್ಲಿ ಅಗತ್ಯ ಸಂಖ್ಯಾ ಬಲವಿದೆ,” ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲೂ ಶುರುವಾಯ್ತು ರೆಸಾರ್ಟ್ ರಾಜಕಾರಣ: ಹೋಟೆಲ್‌ಗೆ ಶಿಫ್ಟ್ ಆದ ಶಿವಸೇನಾ ಶಾಸಕರು!

ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, “ಇವತ್ತು ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕರೇಕೆ ಸರಕಾರ ರಚನೆಗೆ ಹಕ್ಕು ಮಂಡಿಸಿಲ್ಲ? ಅವರು ಯಾಕೆ ಬರಿಗೈಲಿ ವಾಪಸಾದರು? ರಾಷ್ಟ್ರಪತಿ ಆಳ್ವೆಕೆಗೆ ಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಲು ಅವರು ಹೊರಟಿದ್ದಾರೆ. ಬಿಜೆಪಿ ಬಳಿಯಲ್ಲಿ ಸಂಖ್ಯಾಬಲವಿಲ್ಲ,” ಎಂದಿದ್ದಾರೆ.

ಇನ್ನು ಶಾಸಕರನ್ನು ಬಾಂದ್ರಾದ ರಂಗ್‌ಶಾರ್ದ ರೆಸಾರ್ಟ್‌ಗೆ ಕರೆದೊಯ್ದ ಬಗ್ಗೆ ಸಮಜಾಯಿಷಿ ನೀಡಿರುವ ಅವರು, “ಎಲ್ಲಾ ಶಾಸಕರಿಗೆ ಮುಂಬಯಿನಲ್ಲಿ ಮನೆಗಳಿಲ್ಲ. ಹೀಗಾಗಿ ಒಂದೇ ಸೂರಿನಡಿಯಲ್ಲಿ ಅವರಿಗೆ ಎಲ್ಲಾ ಸೌಲಭ್ಯಗಳು ಸಿಗಲಿ ಎಂದು ಪಕ್ಷ ನಿರ್ಧರಿಸಿತು,” ಎಂದು ತೇಪೆ ಹಚ್ಚಿದ್ದಾರೆ.

ಮಹಾರಾಷ್ಟ್ರ ರಾಜಕಾರಣಕ್ಕೆ ಮರಳುವ ಪ್ರಶ್ನೆಯೇ ಇಲ್ಲ: ನಿತಿನ್‌ ಗಡ್ಕರಿ ಸ್ಪಷ್ಟನೆ

ಇದೇ ವೇಳೆ ಬಿಜೆಪಿ ನಾಯಕ ಸುಧೀರ್‌ ಮುಂಗಂತಿವಾರ್‌ ಹೇಳಿಕೆಗೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇವೇಂದ್ರ ಫಡ್ನವೀಸ್‌ ಕೂಡ ಓರ್ವ ಶಿವ ಸೈನಿಕನಂತೆ ಎಂಬುದಾಗಿ ಅವರು ಹೇಳಿಕೆ ನೀಡಿದ್ದರು. “ನೀವು ಶಿವಸೇನಾದವರು ಎಂದು ಅಂದುಕೊಂಡರೆ ಅದರಂತೆ ನಡೆದುಕೊಳ್ಳಿ. ಶಿವಸೇನೆಯವರಿಗೆ ಕೊಟ್ಟ ಮಾತು ಮುಖ್ಯ. ನೀಡಿದ ವಚನ ಜೀವಕ್ಕಿಂತ ದೊಡ್ಡದು,” ಎಂದು ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ