ಆ್ಯಪ್ನಗರ

ದ್ರೌಪದಿ ವಸ್ತ್ರಾಪಹರಣ ಹೋಲಿಕೆ: ರಾಹುಲ್‌ ಕ್ಷಮೆಗೆ ಬಿಜೆಪಿ ಆಗ್ರಹ

ಪೋಸ್ಟರ್‌ ಬಗ್ಗೆ ಓವೈಸಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಮಹಿಳೆಯರಿಗೆ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ ತೆಲಂಗಾಣ ಕಾಂಗ್ರೆಸ್‌ ಪೋಸ್ಟರ್‌ ಅನ್ನು ಸಮರ್ಥಿಸಿಕೊಂಡಿದೆ.

Vijaya Karnataka 26 Jan 2019, 5:00 am
ಹೈದರಾಬಾದ್‌: ಚುನಾವಣಾ ಆಯೋಗದ ಕಾರ್ಯನಿರ್ವಹಣೆಯನ್ನು ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಸನ್ನಿವೇಶಕ್ಕೆ ಹೋಲಿಸಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪೋಸ್ಟರ್‌ಗಳ ವಿರುದ್ಧ ಗುಡುಗಿರುವ ಬಿಜೆಪಿ, ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಕ್ಷಮಾಪಣೆ ಕೋರಬೇಕೆಂದು ಆಗ್ರಹಿಸಿದೆ.
Vijaya Karnataka Web poster


ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂಬುದನ್ನು ಸೂಚಿಸಲು ದ್ರೌಪದಿ ವಸ್ತ್ರಾಪಹರಣ ಸನ್ನಿವೇಶವನ್ನು ಪೋಸ್ಟರ್‌ಗಳಲ್ಲಿ ಬಳಸಲಾಗಿದೆ. ಮತದಾರರನ್ನು ದ್ರೌಪದಿಯಂತೆಯೂ, ಚುನಾವಣಾ ಆಯೋಗವನ್ನು ಕೌರವರಂತೆಯೂ ಬಿಂಬಿಸಲಾಗಿದೆ. 'ತೆಲಂಗಾಣದಲ್ಲಿ ಪ್ರಜಾಪ್ರಭುತ್ವ' ಎಂದು ಪೋಸ್ಟರ್‌ ಮೇಲೆ ಬರೆಯಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌, ಎಐಎಂಐಎಂ ಮುಖಂಡ ಓವೈಸಿ ಅವರೂ ಈ ವಸ್ತ್ರಾಪಹರಣ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿರುವಂತೆ ಚಿತ್ರಿಸಲಾಗಿದೆ.

ಈ ಬಗ್ಗೆ ಕಿಡಿಕಾರಿರುವ ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣ ಸಾಗರ್‌ ರಾವ್‌ ಅವರು, ''ಇಂತಹ ಹೋಲಿಕೆಗಳನ್ನು ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಒಪ್ಪುತ್ತಾರೆಯೇ,'' ಎಂದು ಪ್ರಶ್ನಿಸಿದ್ದಾರೆ. ಪೋಸ್ಟರ್‌ ಬಗ್ಗೆ ಓವೈಸಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಮಹಿಳೆಯರಿಗೆ ಅಪಮಾನ ಮಾಡಲಾಗಿದೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ ತೆಲಂಗಾಣ ಕಾಂಗ್ರೆಸ್‌ ಪೋಸ್ಟರ್‌ ಅನ್ನು ಸಮರ್ಥಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ