ಆ್ಯಪ್ನಗರ

ಔರಂಗಜೇಬ ಕೊನೆಯ ಮೊಘಲ್ ಸಾಮ್ರಾಟ, ರಾಹುಲ್ ಗಾಂಧಿ ಕೊನೆಯ ಕೈ ಸಾಮ್ರಾಟ

ಔರಂಗಜೇಬ ಮೊಘಲ್ ಸಾಮ್ರಾಜ್ಯದ ಕೊನೆಯ ಬಾದ್‌ಶಾ ಆಗಿದ್ದಂತೆ ರಾಹುಲ್ ಕೂಡ ಕಾಂಗ್ರೆಸ್ ಸಾಮ್ರಾಜ್ಯದ ಕೊನೆಯ ಬಾದ್‌ಶಾ. ಕಾಂಗ್ರೆಸ್ ಅಂತ್ಯವಾಗುವುದು ನಿಶ್ಚಿತ ಎಂದಿದ್ದಾರೆ ಅಹುಜಾ.

Times Now 18 Jan 2019, 3:41 pm
ಜೈಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮೊಘಲ್ ಸಾಮ್ರಾಟ ಔರಂಗಜೇಬನಿಗೆ ಹೋಲಿಸುವುದರ ಮೂಲಕ ರಾಜಸ್ಥಾನ ಬಿಜೆಪಿ ಉಪಾಧ್ಯಕ್ಷ ಜ್ಞಾನ ದೇವ್ ಅಹುಜಾ ಹೊಸ ವಿವಾದ ಸೃಷ್ಟಿಸಿದ್ದಾರೆ. ಔರಂಗಜೇಬ್ ಕೊನೆಯ ಮೊಘಲ್ ಸಾಮ್ರಾಟನಾಗಿದ್ದಂತೆ ರಾಹುಲ್ ಕೂಡ ಕಾಂಗ್ರೆಸ್ ಪಕ್ಷದ ಕೊನೆಯ ಸಾಮ್ರಾಟ ಎಂದು ಅವರು ಹೇಳಿದ್ದಾರೆ.

ಔರಂಗಜೇಬ ಮೊಘಲ್ ಸಾಮ್ರಾಜ್ಯದ ಕೊನೆಯ ಬಾದ್‌ಶಾ ಆಗಿದ್ದಂತೆ ರಾಹುಲ್ ಕೂಡ ಕಾಂಗ್ರೆಸ್ ಸಾಮ್ರಾಜ್ಯದ ಕೊನೆಯ ಬಾದ್‌ಶಾ. ಕಾಂಗ್ರೆಸ್ ಅಂತ್ಯವಾಗುವುದು ನಿಶ್ಚಿತ ಎಂದಿದ್ದಾರೆ ಅಹುಜಾ.

ಕಾಂಗ್ರೆಸ್ ಗೋ ರಕ್ಷಣೆ ವಿಷಯವನ್ನು ಹೈಜಾಕ್ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿದ ಅವರು ರಾಹುಲ್ ಗಾಂಧಿಯ ಜನಿವಾರ ಸಂಸ್ಕಾರವನ್ನು ಸಹ ಪ್ರಶ್ನಿಸಿದರು. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ರಾಹುಲ್‌ಗೆ ಜನಿವಾರ ಸಂಸ್ಕಾರ ಮಾಡಿದ ಅರ್ಚಕರು ಯಾರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.

ನಮ್ಮ ಪಕ್ಷ ರಾಮಗಢ ಉಪಚುನಾವಣೆಯನ್ನು ಗೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಜ್ಞಾನದೇವ್ ಈ ಹಿಂದೆ ಗೋ ರಕ್ಷಕರ ಪರ ಮಾತನಾಡಿ ವಿವಾದಕ್ಕೀಡಾಗಿದ್ದರು. ಗೋ ಹತ್ಯೆ ಆತಂಕವಾದಕ್ಕಿಂತ ದೊಡ್ಡ ಅಪರಾಧ. ಭಯೋತ್ಪಾದಕ 2- ಜನರ ಹತ್ಯೆ ಮಾಡುತ್ತಾನೆ. ಆದರೆ ಒಂದು ಆಕಳನ್ನು ಹತ್ಯೆ ಮಾಡಿದರೆ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ