ಆ್ಯಪ್ನಗರ

ರಾಹುಲ್ ಬಳಿ ಸುಳಿದಾಡೋ ಸಂಸದರಿಗೆ ಕೊರೊನಾ: ಬಿಜೆಪಿ ಸಂಸದ!

ಕೊರೊನಾ ವೈರಸ್ ಕುರಿತು ಬಿಜೆಪಿ ನಾಯಕರೊಬ್ಬರು ಹಗುರ ಮಾತುಗಳನ್ನಾಡಿದ್ದು, ಇಟಲಿಯಿಂದ ಮರಳಿರುವ ರಾಹುಲ್ ಗಾಂಧಿ ಸುತ್ತ ಸುಳಿದಾಡುವ ಸಂಸದರಿಗೆ ಕೊರೊನಾ ತಗುಲಬಹುದು ಎಂದು ಹೇಳಿದ್ದಾರೆ. ಬಿಜೆಪಿ ಸಂಸದ ಹುನುಮಾನ್ ಬೇನಿವಾಲ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

Vijaya Karnataka Web 5 Mar 2020, 3:32 pm
ನವದೆಹಲಿ: ಮಾರಕ ಕೊರೊನಾ ವೈರಸ್ ಕುರಿತು ಇಡೀ ದೇಶ ಭಯದಿಂದ ದಿನ ದೂಡುವಂತಾಗಿದೆ. ಅದರಲ್ಲೂ ಭಾರತ ಪ್ರವಾಸದಲ್ಲಿರುವ ೧೫ ಇಟಲಿ ಪ್ರಜೆಗಳಲ್ಲಿ ಕೊರೊನಾ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ, ಸರ್ಕಾರ ತೀವ್ರ ಕಟ್ಟೆಚ್ಚರವಹಿಸಿದೆ.
Vijaya Karnataka Web Rahul Gandhi
ಇತ್ತಿಚೀಗಷ್ಟೇ ಇಟಲಿಯಿಂದ ಮರಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುತ್ತ ಸುಳಿದಾಡುವ ಸಂಸದರಿಗೆ ಕೊರೊನಾ ವೈರಸ್ ಹರಡಬಹುದು ಎಂದು ಬಿಜೆಪಿಯ ಹನುಮಾನ್ ಬೆನಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಈ ಮಧ್ಯೆ ಕೊರೊನಾ ವೈರಸ್ ಕುರಿತು ಬಿಜೆಪಿ ನಾಯಕರೊಬ್ಬರು ಹಗುರ ಮಾತುಗಳನ್ನಾಡಿದ್ದು, ಇಟಲಿಯಿಂದ ಮರಳಿರುವ ರಾಹುಲ್ ಗಾಂಧಿ ಸುತ್ತ ಸುಳಿದಾಡುವ ಸಂಸದರಿಗೆ ಕೊರೊನಾ ತಗುಲಬಹುದು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಬಗ್ಗೆ ಹೆದರಿಕೆ ಬೇಡ, ಆದರೆ ಎಚ್ಚರಿಕೆ ಇರಲಿ...

ಲೋಕಸಭೆಯಲ್ಲಿ ಕೊರೊನಾ ವೈರಸ್ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ, ಇತ್ತೀಚಿಗಷ್ಟೇ ಇಟಲಿಯಿಂದ ಮರಳಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಹುನುಮಾನ್ ಬೇನಿವಾಲ್ ಒತ್ತಾಯಿಸಿದರು.

ರಾಹುಲ್ ಮತ್ತು ಸೋನಿಯಾ ಇಟಲಿಯಿಂದ ಇತ್ತೀಚಿಗಷ್ಟೇ ಮರಳಿದ್ದು, ಇಬ್ಬರ ವೈದ್ಯಕೀಯ ತಪಾಸಣೆ ಅಗತ್ಯವಿದೆ ಎಂದು ಹನುಮಾನ್ ಬೆನಿವಾಲ್ ಆಗ್ರಹಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ಸಂಸದ ಕ್ಷಮೆ ಕೇಳಬೇಕು ಇಲ್ಲವಾದರೆ ಅವರನ್ನು ಸದನದಿಂದ ಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಭಾರತಕ್ಕೆ ಬಂದ 15 ಇಟಲಿ ಪ್ರವಾಸಿಗರಲ್ಲಿ ಕೊರೊನಾ ಪತ್ತೆ: 21ಕ್ಕೇರಿದ ಸೋಂಕಿತರ ಸಂಖ್ಯೆ!

ಹನುಮಾನ್ ಬೆನಿವಾಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಹೇಳಳಿಕೆಯನ್ನು ಕಡತದಿಂದ ತೆಗೆದು ಹಾಕುವಂತೆ ಸೂಚಿಸಿದರು. ಆದರೆ ಇಷ್ಟಕ್ಕೆ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಹನುಮಾನ್ ಬೆನಿವಾಲ್ ಕ್ಷಮೆಗೆ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ