ಆ್ಯಪ್ನಗರ

ರಾಜಸ್ಥಾನ ರಾಜಕೀಯಕ್ಕೆ ಬಿಗ್‌ ಟ್ವಿಸ್ಟ್‌..! ಗೆಹ್ಲೋಟ್‌ ಬೆಂಬಲಕ್ಕೆ ನಿಂತ ವಸುಂಧರಾ; ಬಿಜೆಪಿ ಮೈತ್ರಿ ಪಕ್ಷದ ಆರೋಪ

ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟಿಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಸಚಿನ್‌ ಪೈಲಟ್‌ ಬಂಡಾಯದಿಂದ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಅಶೋಕ್‌ ಗೆಹ್ಲೋಟ್‌ ಬೆಂಬಲಕ್ಕೆ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ನಿಂತಿದ್ದಾರೆ ಎಂದು ಬಿಜೆಪಿ ಮೈತ್ರಿ ಪಕ್ಷ ಆರ್‌ಎಲ್‌ಪಿ ಆರೋಪಿಸಿದೆ. ಇದರಿಂದ ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಎದ್ದಂತಾಗಿದೆ.

Agencies 16 Jul 2020, 8:08 pm
ಜೈಪುರ: ರಾಜಸ್ಥಾನದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿಗೆ ಮತ್ತೊಂದು ತಿರುವು ಸಿಕ್ಕಿದೆ. ಸಂಕಷ್ಟದಲ್ಲಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬೆಂಬಲಕ್ಕೆ ರಾಜಸ್ಥಾನ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೆ ನಿಂತಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಮೈತ್ರಿ ಪಕ್ಷ ಆರ್‌ಎಲ್‌ಪಿ ಆರೋಪಿಸಿದೆ.
Vijaya Karnataka Web bjp leader vasundhara raje has asked congress mlas to support ashok gehlot alleges rlp
ರಾಜಸ್ಥಾನ ರಾಜಕೀಯಕ್ಕೆ ಬಿಗ್‌ ಟ್ವಿಸ್ಟ್‌..! ಗೆಹ್ಲೋಟ್‌ ಬೆಂಬಲಕ್ಕೆ ನಿಂತ ವಸುಂಧರಾ; ಬಿಜೆಪಿ ಮೈತ್ರಿ ಪಕ್ಷದ ಆರೋಪ


ಬಿಜೆಪಿ ಮೈತ್ರಿ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ್‌ ಪಕ್ಷದ ಸಂಸದ ಹನುಮಾನ್‌ ಬೆನಿವಾಲ್‌ ಟ್ವೀಟ್‌ ಮಾಡುವ ಮೂಲಕ ರಾಜಸ್ಥಾನದ ಕಾಂಗ್ರೆಸ್‌ ವರ್ಸಸ್‌ ಕಾಂಗ್ರೆಸ್‌ ಸಂಘರ್ಷಕ್ಕೆ ದೊಡ್ಡ ತಿರುವನ್ನು ನೀಡಿದ್ದಾರೆ. ಟ್ವೀಟ್‌ನಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಬೆಂಬಲಕ್ಕೆ ಮಾಜಿ ಸಿಎಂ ವಸುಂಧರಾ ರಾಜೆ ನಿಂತಿದ್ದಾರೆ ಎಂದು ಬಹಿರಂಗ ಆರೋಪವನ್ನು ಬೆನಿವಾಲ್‌ ಮಾಡಿದ್ದಾರೆ.

ಬೆನಿವಾಲ್‌ ಟ್ವೀಟ್‌ನಲ್ಲಿ, ಮಾಜಿ ಸಿಎಂ ವಸುಂಧರಾ ರಾಜೆ ತಮ್ಮ ಆತ್ಮೀಯ ಕಾಂಗ್ರೆಸ್‌ ಶಾಸಕರಿಗೆ ಕರೆ ಮಾಡಿ ಅಶೋಕ್‌ ಗೆಹ್ಲೋಟ್‌ ಪರ ನಿಲ್ಲುವಂತೆ ಕೇಳಿಕೊಂಡಿದ್ದಾರೆ. ಸಿಕರ್‌ ಹಾಗೂ ನಾಗೌರ್‌ನ ಪ್ರತಿ ಜಾಟ್‌ ಸಮುದಾಯದ ಶಾಸಕರಿಗೆ ಕರೆ ಮಾಡಿ ಸಚಿನ್‌ ಪೈಲಟ್‌ರಿಂದ ದೂರವಿರಿ ಎಂದು ಕೇಳಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಕೇವಲ ಆರೋಪ ಮಾಡದ ನಾಗೌರ್ ಸಂಸದ ಬೆನಿವಾಲ್‌ ಇದಕ್ಕೆ ನನ್ನ ಬಳಿ ಸಾಕ್ಷಿಗಳು ಕೂಡ ಇವೆ ಎಂದು ಹೇಳಿರುವುದು ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸಿದೆ. ಕಳೆದ ಭಾನುವಾರದಿಂದ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಬಂಡಾಯವೆದ್ದಿದ್ದ ಸಚಿನ್‌ ಪೈಲಟ್‌ರನ್ನು ಕಾಂಗ್ರೆಸ್‌ ಹೈಕಮಾಂಡ್‌ ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ.

ಇನ್ನು, ಬುಧವಾರ ಪ್ರತಿಕ್ರಿಯೆ ನೀಡಿದ್ದ ಸಚಿನ್‌ ಪೈಲಟ್‌ ನಾನು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿ, ನಾನಿನ್ನೂ ಕಾಂಗ್ರೆಸ್‌ನಲ್ಲಿದ್ದೇನೆ ಎಂದು ಹೇಳಿದ್ದರು. ಆದರೆ, ಹೈಕಮಾಂಡ್‌ ನಾಯಕರಿಗೂ ಕೂಡ ಸಚಿನ್‌ ಪೈಲಟ್‌ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರಾದೇಶಿಕ ಪಕ್ಷ ಹುಟ್ಟು ಹಾಕುವ ಬಗ್ಗೆಯೂ ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ