ಆ್ಯಪ್ನಗರ

ದೀಪಿಕಾ ತಲೆ ಕೇಳಿದ್ದ ಬಿಜೆಪಿ ನಾಯಕ ರಾಜೀನಾಮೆ

ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ ತಲೆ ಕಡಿದವರಿಗೆ 10 ಕೋಟಿ ರೂ...

Agencies 29 Nov 2017, 10:06 pm

ಚಂಡೀಗಢ: ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ಕೊಡುವುದಾಗಿ ಘೋಷಿಸಿದ್ದ ಹರಿಯಾಣದ ಬಿಜೆಪಿ ನಾಯಕ ಸೂರಜ್‌ ಪಾಲ್‌ ಅಮು ಅವರು ಪಕ್ಷದ ರಾಜ್ಯ ಘಟಕದ ಮುಖ್ಯ ಮಾಧ್ಯಮ ಸಮನ್ವಯಕಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Vijaya Karnataka Web bjp leader who asked for deepika padukones head over padmavati quits
ದೀಪಿಕಾ ತಲೆ ಕೇಳಿದ್ದ ಬಿಜೆಪಿ ನಾಯಕ ರಾಜೀನಾಮೆ


ವಿವಾದಾತ್ಮಕ ಹೇಳಿಕೆಗಾಗಿ ಹರಿಯಾಣ ಬಿಜೆಪಿ ಘಟಕ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ ಬೆನ್ನಿಗೇ ಈ ಘಟನೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್‌ ಬೋರಾಲಾ ಅವರಿಗೆ ವಾಟ್ಸ್ಯಾಪ್‌ ಮೂಲಕ ಅವರು ರಾಜೀನಾಮೆ ಸಂದೇಶ ಕಳುಹಿಸಿದ್ದಾರೆ.

ಮಂಗಳವಾರ ನಿಗದಿಯಾಗಿದ್ದ ಕರ್ಣಿ ಸೇನಾ ಪ್ರತಿನಿಧಿಗಳ ಜತೆಗಿನ ಸಭೆಗೆ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರು ಗೈರು ಹಾಜರಾಗಿದ್ದರಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಪಾಲ್‌ ಹೇಳಿದ್ದಾರೆ. ಆದರೆ, ಸಭೆಗೆ ಸಮಯ ನಿಗದಿಯಾಗಿರಲಿಲ್ಲ ಎಂದು ಖಟ್ಟರ್‌ ಹೇಳಿದ್ದಾರೆ. ತಾವು ಇನ್ನು ಮುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮುಂದುವರಿಸುವುದಾಗಿ ಪಾಲ್‌ ಹೇಳಿದ್ದಾರೆ.

ಹೊಸ ಶಪಥ: ಶ್ರೀನಗರದ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕುರಿತು ಸವಾಲಿನ ಮಾತಾಡಿ ವಿವಾದ ಸೃಷ್ಟಿಸಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಮುಖಂಡ ಪಾರೂಕ್‌ ಅಬ್ದುಲ್ಲಾ ಅವರ ಕೆನ್ನೆಗೆ ಅದೇ ಲಾಲ್‌ ಚೌಕ್‌ನಲ್ಲಿ ನಿಂತು ಹೊಡೆಯುವುದಾಗಿ ಸೂರಜ್‌ ಶಪಥ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ