ಆ್ಯಪ್ನಗರ

ಬಿಜೆಪಿ ನಾಯಕರು ಚಂಬಲ್ ಕಣಿವೆಯ ಡಕಾಯಿತರಿದ್ದಂತೆ: ಮಮತಾ ಬ್ಯಾನರ್ಜಿ ವಾಗ್ದಾಳಿ!

ಜೆಪಿ ನಾಯಕರಿಗಿಂತ ದೊಡ್ಡ ಕಳ್ಳರು ಈ ದೇಶದಲ್ಲಿ ಯಾರೂ ಇಲ್ಲ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಗರು ಚಂಬಲ್ ಕಣಿವೆಯ ಡಕಾಯಿತರಿದ್ದಂತೆ ಎಂದು ಹರಿಹಾಯ್ದಿದ್ದಾರೆ.

Vijaya Karnataka Web 15 Dec 2020, 8:55 pm
ಕೋಲ್ಕತ್ತಾ: ಬಿಜೆಪಿ ನಾಯಕರಿಗಿಂತ ದೊಡ್ಡ ಕಳ್ಳರು ಈ ದೇಶದಲ್ಲಿ ಯಾರೂ ಇಲ್ಲ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಗರು ಚಂಬಲ್ ಕಣಿವೆಯ ಡಕಾಯಿತರಿದ್ದಂತೆ ಎಂದು ಹರಿಹಾಯ್ದಿದ್ದಾರೆ.
Vijaya Karnataka Web MamataBanerjee.ap
ಸಂಗ್ರಹ ಚಿತ್ರ


ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, 2014, 2016 ಹಾಗೂ 2019ರ ಚುನಾವಣೆಗಳಲ್ಲಿ ರಾಜ್ಯದ ಏಳು ಚಹಾ ತೋಟಗಳನ್ನು ಪುನಃ ತೆರೆಯವುದಾಗಿ ಬಿಜೆಪಿಗರು ಭರವಸೆ ನೀಡಿದ್ದರು. ಅಲ್ಲದೇ ಈ ಚಹಾ ತೋಟಗಳ ಮೇಲುಸ್ತುವಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ ಈ ಭರವಸೆಯನ್ನು ಬಿಜೆಪಿ ಮರೆತಿದೆ ಎಂಉ ಕಿಡಿಕಾರಿದರು.

ಕೇಂದ್ರದ ಸಭೆಗೆ ಬಂಗಾಳ ಅಧಿಕಾರಿಗಳು ಗೈರು, ಐಪಿಎಸ್‌ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸಲೂ ದೀದಿ ನಿರಾಕರಣೆ

ಏಳು ಚಹಾ ತೋಟಗಳನ್ನು ಮರಳಿ ತೆರೆಯುವುದಾಗಿ ಹೇಳಿ ಜನರಿಗೆ ಮೋಸ ಮಾಡಿರುವ ಬಿಜೆಪಿ, ಇದೀಗ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡುತ್ತಿದೆ ಎಂದು ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಡೈಮಂಡ್ ಹಾರ್ಬರ್ ಬಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಬಳಿಕ, ಬಿಜೆಪಿ ಹಾಗೂ ಟಿಎಂಸಿ ನಡುವಿನ ವಾಕ್ಸಮರ ತೀವ್ರಗೊಂಡಿದೆ.

ನಡ್ಡಾ ಕಾರಿನ ಮೇಲೆ ದಾಳಿ: ಪ.ಬಂಗಾಳ ಪೊಲೀಸ್ ಮುಖ್ಯಸ್ಥ, ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಗೃಹ ಸಚಿವಾಲಯ ಸಮನ್ಸ್!

ಅಲ್ಲದೇ ಕೇಂದ್ರ ಸರ್ಕಾರ ಹಾಗೂ ಟಿಎಂಸಿ ಸರ್ಕಾರದ ನಡುವೆಯೂ ತಿಕ್ಕಾಟ ಜಾಸ್ತಿಯಾಗಿದ್ದು, ಈ ರಾಜಕೀಯ ಜಿದ್ದಾಜಿದ್ದಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ