ಆ್ಯಪ್ನಗರ

ಲವ್ ಜಿಹಾದ್‌ಗೆ ಬಾಲ್ಯವಿವಾಹವೇ ಪರಿಹಾರ: ಬಿಜೆಪಿ ಶಾಸಕ

ಲವ್ ಜಿಹಾದ್ ನಿಯಂತ್ರಣಕ್ಕೆ ಬಾಲ್ಯವಿವಾಹವೇ ಪರಿಹಾರ ಎಂದು ಹೇಳುವುದರ ಮೂಲಕ ಬಿಜೆಪಿ ಶಾಸಕ ಗೋಪಾಲ್ ಪರ್ಮಾರ್ ಹೊಸ ವಿವಾದ ಸೃಷ್ಟಿಸಿದ್ದಾರೆ.

Navbharat Times 6 May 2018, 2:03 pm
ಭೂಪಾಲ್: ಲವ್ ಜಿಹಾದ್ ನಿಯಂತ್ರಣಕ್ಕೆ ಬಾಲ್ಯವಿವಾಹವೇ ಪರಿಹಾರ ಎಂದು ಹೇಳುವುದರ ಮೂಲಕ ಬಿಜೆಪಿ ಶಾಸಕ ಗೋಪಾಲ್ ಪರ್ಮಾರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
Vijaya Karnataka Web PARMAR


ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಪರ್ಮಾರ್, ವೈವಾಹಿಕ ಕಾಯಿದೆ ಅಡಿಯಲ್ಲಿ ಸರ್ಕಾರ ಮದುವೆಯ ವಯಸ್ಸನ್ನು ನಿಗದಿ ಪಡಿಸಿದ್ದಾಗಿಂದ ಹೆಣ್ಣು ಮಕ್ಕಳು ಓಡಿ ಹೋಗಿ ಮದುವೆ ಮಾಡಿಕೊಳ್ಳುತ್ತಿರುವುದು ಹೆಚ್ಚಿದೆ. ಲವ್ ಜಿಹಾದ್‌ನಿಂದ ತಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಬೇಕೆಂದರೆ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಸಿ ಎಂದು ಪೋಷಕರಿಗೆ ಅದರಲ್ಲೂ ವಿಶೇಷವಾಗಿ ತಾಯಂದಿರಿಗೆ ಸಲಹೆ ನೀಡಿದ್ದಾರೆ.

"ಬಾಲಕಿಯರು ಹದಿಹರೆಯಕ್ಕೆ ತಲುಪಿದಾಗ, ಅವರ ಮನಸ್ಸು ಚಂಚಲವಾಗಲು ಪ್ರಾರಂಭವಾಗುತ್ತದೆ. ಲವ್ ಜಿಹಾದ್‌ನಿಂದ ಜಾಗರೂಕರಾಗಿರುವಂತೆ ನಾನು ತಾಯಂದಿರಿಗೆ ಒತ್ತಾಯಿಸುತ್ತೇನೆ" ಎಂದು ಪರ್ಮಾರ್ ಹೇಳಿದ್ದಾರೆ. ಬಳಿಕ ಎಎನ್ಐ ಜತೆ ಮಾತನಾಡುತ್ತಿದ್ದ ಅವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ಮದುವೆ ಮಾಡಿಬೇಕು ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಂದಿನ ಕಾಲದಲ್ಲಿ ಹಿರಿಯರು ಬಾಲ್ಯದಲ್ಲೇ ಮದುವೆ ನಿಗದಿ ಪಡಿಸುತ್ತಿದ್ದರು. ಇಂಥ ಸಂಬಂಧಗಳು ದೀರ್ಘಕಾಲ ಮುಂದುವರೆಯುತ್ತಿದ್ದವು. ಆದರೆ 18 ವರ್ಷದ ವ್ಯಾಧಿ( ಕಾನೂನುಬದ್ಧ ಮದುವೆ ವಯಸ್ಸು) ಪ್ರಾರಂಭವಾದಾಗಿನಿಂದ ಹೆಣ್ಣುಮಕ್ಕಳು ಲವ್ ಜಿಹಾದ್ ಪ್ರಭಾವಕ್ಕೆ ಒಳಗಾಗಿ ಓಡಿ ಹೋಗಿ ಮದುವೆಯಾಗುತ್ತಿರುವ ಪ್ರಸಂಗಗಗಳು ಹೆಚ್ಚಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ