ಆ್ಯಪ್ನಗರ

ಕೋರ್ಟ್‌ ಆವರಣದಲ್ಲೇ ಶಾಸಕನ ಪುತ್ರಿ, ಪತಿಯ ಮೇಲೆ ಹಲ್ಲೆ

ಜೀವಭಯವಿದೆಯೆಂದು ರಕ್ಷಣೆಗಾಗಿ ಕೋರ್ಟ್‌ ಮೊರೆ ಹೋಗಿದ್ದ ನೂತನ ದಂಪತಿಗೆ ಭದ್ರತೆ ಒದಗಿಸಲು ಅಲಹಾಬಾದ್‌ ಹೈಕೋರ್ಟ್‌ ಆದೇಶ ನೀಡಿದ ಕೆಲವೇ ನಿಮಿಷದಲ್ಲಿ, ನ್ಯಾಯಾಲಯದ ಆವರಣದಲ್ಲೇ ದುಷ್ಕರ್ಮಿಗಳು ಅವರ ಮೇಲೆ ಎರಗಿದ್ದಾರೆ.

Agencies 16 Jul 2019, 5:00 am
ಅಲಹಾಬಾದ್‌: ದಲಿತ ಯುವಕನನ್ನು ಮದುವೆಯಾಗಿರುವ ಉತ್ತರ ಪ್ರದೇಶ ಬಿಜೆಪಿ ಶಾಸಕನ ಪುತ್ರಿ ಸಾಕ್ಷಿ ಮಿಶ್ರಾ ಹಾಗೂ ಆಕೆಯ ಪತಿ ಅಜಿತೇಶ್‌ ಕುಮಾರ್‌ ಅವರ ಮೇಲೆ ಸೋಮವಾರ ಬೆಳಿಗ್ಗೆ ಅಲಹಾಬಾದ್‌ ಹೈಕೋರ್ಟ್‌ ಆವರಣದಲ್ಲೇ ಹಲ್ಲೆ ನಡೆಸಲಾಗಿದೆ.
Vijaya Karnataka Web bjp mlas daughter her husband assaulted inside allahabad hc
ಕೋರ್ಟ್‌ ಆವರಣದಲ್ಲೇ ಶಾಸಕನ ಪುತ್ರಿ, ಪತಿಯ ಮೇಲೆ ಹಲ್ಲೆ


ಜೀವಭಯವಿದೆಯೆಂದು ರಕ್ಷಣೆಗಾಗಿ ಕೋರ್ಟ್‌ ಮೊರೆ ಹೋಗಿದ್ದ ನೂತನ ದಂಪತಿಗೆ ಭದ್ರತೆ ಒದಗಿಸಲು ಅಲಹಾಬಾದ್‌ ಹೈಕೋರ್ಟ್‌ ಆದೇಶ ನೀಡಿದ ಕೆಲವೇ ನಿಮಿಷದಲ್ಲಿ, ನ್ಯಾಯಾಲಯದ ಆವರಣದಲ್ಲೇ ದುಷ್ಕರ್ಮಿಗಳು ಅವರ ಮೇಲೆ ಎರಗಿದ್ದಾರೆ. ಕೋರ್ಟ್‌ ಹಾಲ್‌ನಿಂದ ಹೊರಗೆ ಬಂದ ಕೂಡಲೇ ಅಲ್ಲಿದ್ದ ಕೆಲವು ವಕೀಲರು ಗುಂಪುಗೂಡಿ ದಂಪತಿಯನ್ನು ಎಳೆದಾಡಿ, ಥಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೊಲೀಸ್‌ ಭದ್ರತೆಯಲ್ಲೇ ನ್ಯಾಯಾಲಯಕ್ಕೆ ಆಗಮಿಸಿದ ದಂಪತಿಯು ಕೆಲ ನಿಮಿಷಗಳ ಕಾಲ ತಮ್ಮ ಅರ್ಜಿಯ ವಿಚಾರಣೆಯಲ್ಲಿ ಪಾಲ್ಗೊಂಡರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸಿದ್ದಾರ್ಥ ವರ್ಮಾ ಅವರು, ವಯಸ್ಕ ಜೋಡಿಗೆ ಸಂಗಾತಿ ಆಯ್ಕೆಯಲ್ಲಿ ಇರುವ ಹಕ್ಕನ್ನು ಎತ್ತಿ ಹಿಡಿದರು. ಶಾಸಕ ಹಾಗೂ ಪುತ್ರಿಯ ತಂದೆ ರಾಜೇಶ್‌ ಮಿಶ್ರಾ ನವ ದಂಪತಿಯ ಜೀವನದಲ್ಲಿ ಮೂಗುತೂರಿಸಬಾರದು. ಜೋಡಿಗೆ ಪೊಲೀಸರು ಭದ್ರತೆ ಒದಗಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದರು. ಕೋರ್ಟ್‌ ಹಾಲ್‌ನಿಂದ ಹೊರಗೆ ತಮ್ಮ ಮೇಲೆ ಹಲ್ಲೆ ನಡೆದ ಕೂಡಲೇ ದಂಪತಿ ಮತ್ತೆ ನ್ಯಾಯಾಧೀಶರ ಮುಂದೆ ಹಾಜರಾಗಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ನ್ಯಾಯಾಧೀಶರು ನವ ಜೋಡಿಗೆ ಅಗತ್ಯವಾಗಿರುವ ಎಲ್ಲಾ ಭದ್ರತಾ ಸೌಕರ್ಯಗಳನ್ನು ಒದಗಿಸುವಂತೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ