ಆ್ಯಪ್ನಗರ

ಕೇಜ್ರಿವಾಲ್‌ ಕಚೇರಿಯಲ್ಲಿ ಬಿಜೆಪಿ ಧರಣಿ

ಏಟಿಗೆ ಎದಿರೇಟು ಎಂಬಂತೆ ಬಿಜೆಪಿ ಮುಖಂಡರು ಹಾಗೂ ಆಪ್‌ ಬಂಡಾಯ ಶಾಸಕ ಕಪಿಲ್‌ ಮಿಶ್ರಾ 'ಸರಕಾರದ ನಿಷ್ಕ್ರಿಯತೆ' ವಿರುದ್ಧ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ

Vijaya Karnataka 14 Jun 2018, 8:32 am
ಹೊಸದಿಲ್ಲಿ: ಏಟಿಗೆ ಎದಿರೇಟು ಎಂಬಂತೆ ಬಿಜೆಪಿ ಮುಖಂಡರು ಹಾಗೂ ಆಪ್‌ ಬಂಡಾಯ ಶಾಸಕ ಕಪಿಲ್‌ ಮಿಶ್ರಾ ಬುಧವಾರ 'ಸರಕಾರದ ನಿಷ್ಕ್ರಿಯತೆ' ವಿರುದ್ಧ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಕಚೇರಿಯಲ್ಲಿ ಧರಣಿ ಕುಳಿತರು.
Vijaya Karnataka Web kejriwal


ಕೇಜ್ರಿವಾಲ್‌ ಮತ್ತು ಅವರ ಸಚಿವ ಸಂಪುಟ ಲೆ.ಗವರ್ನರ್‌ ಕಚೇರಿಯಲ್ಲಿ ನಡೆಸುತ್ತಿರುವ ಧರಣಿಗೆ ಪ್ರತಿಯಾಗಿ ಈ ಧರಣಿ. ಮುಖ್ಯಮಂತ್ರಿ ಜನರಿಗೆ ನೀರಿನ ಭರವಸೆ ನೀಡುವ ತನಕ ಧರಣಿ ಮುಂದುವರಿಯಲಿದೆ ಎಂದು ದಿಲ್ಲಿ ಪ್ರತಿಪಕ್ಷ ನಾಯಕ ವಿಜೇಂದರ್‌ ಗುಪ್ತಾ ತಿಳಿಸಿದ್ದಾರೆ.

ಸಿಸೊಡಿಯಾ ನಿರಶನ

ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಬುಧವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದರೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ಸಿಎಂ ಕೇಜ್ರಿವಾಲ್‌ ನೇತೃತ್ವದಲ್ಲಿ ದಿಲ್ಲಿ ಸಚಿವ ಸಂಪುಟ ನಡೆಸುತ್ತಿರುವ ಧರಣಿ 3ನೇ ದಿನ ಹೊಸ ತಿರುವು ಪಡೆದುಕೊಂಡಿದೆ. ಇದಕ್ಕೂ ಮೊದಲು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2ನೇ ದಿನವಾದ ಮಂಗಳವಾರ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ನಿರಶನ ಕುಳಿತಿದ್ದರು.

'ಐಎಎಸ್‌ ಅಧಿಕಾರಿಗಳಿಂದ ಉಪವಾಸ ಸ್ಥಗಿತ', '4 ತಿಂಗಳಿಂದ ಕೆಲಸ ಸ್ಥಗಿತಕ್ಕೆ ಕಾರಣರಾದವರ ವಿರುದ್ಧ ಕ್ರಮ', 'ಮನೆ ಬಾಗಿಲಿಗೆ ಪಡಿತರ ತಲುಪಿಸುವ ಪ್ರಸ್ತಾವಕ್ಕೆ ಸಮ್ಮತಿ'... ಇವು ಕೇಜ್ರಿ ಸಚಿವ ಸಂಪುಟದ ಪ್ರಮುಖ ಬೇಡಿಕೆಗಳಾಗಿವೆ.

ಕೇಜ್ರಿವಾಲ್‌ಗೆ ಕರ್ತವ್ಯ ಪ್ರಜ್ಞೆ ಇಲ್ಲ

ದಿಲ್ಲಿ ಜನರು ಪ್ರಸ್ತುತ ತೀರಾ ಸಂಕಷ್ಟದಲ್ಲಿದ್ದು, ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಿಗೆ ಸಾಂವಿಧಾನಿಕ ಕರ್ತವ್ಯದ ಬಗ್ಗೆ ಪ್ರಜ್ಞೆಯೇ ಇಲ್ಲ ಎಂದು ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ