ಆ್ಯಪ್ನಗರ

ಜೇಟ್ಲಿ-ಮಲ್ಯ ಭೇಟಿ ಬಗ್ಗೆ ಕಾಂಗ್ರೆಸ್‌ ಸಂಸದ ಪುನಿಯಾ 2 ವರ್ಷ ನಂತರ ಹೇಳಿದ್ದೇಕೆ?: ಪಿಯೂಷ್‌ ಗೋಯಲ್‌

ಸಚಿವ ಅರುಣ್‌ ಜೇಟ್ಲಿ ಅವರ ಕುರಿತು ಸಂಸದ ಪಿಎಲ್‌ ಪುನಿಯಾ ನೀಡಿರುವ ಹೇಳಿಕೆ ಒತ್ತಡದಲ್ಲಿ ನೀಡಿರುವುದು ಎಂದೆನಿಸುತ್ತದೆ ಎಂದು ಬಿಜೆಪಿ ತಿವಿದಿದೆ.

TIMESOFINDIA.COM 13 Sep 2018, 8:27 pm
[This story originally published in times of India on sept 13, 2018]
Vijaya Karnataka Web goyal


ಹೊಸದಿಲ್ಲಿ: ಬಹುಕೋಟಿ ಸಾಲ ಪಡೆದು ವಂಚನೆಯ ಆರೋಪ ಎದುರಿಸುತ್ತಿರುವ ವಿಜಯ್‌ ಮಲ್ಯ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಕುರಿತು ಸಂಸದ ಪಿಎಲ್‌ ಪುನಿಯಾ ನೀಡಿರುವ ಹೇಳಿಕೆ ಒತ್ತಡದಲ್ಲಿ ನೀಡಿರುವುದು ಎಂದೆನಿಸುತ್ತದೆ ಎಂದು ಬಿಜೆಪಿ ತಿವಿದಿದೆ.

ಈ ಸಂಬಂಧ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸುದ್ದಿಗೋಷ್ಠಿ ನಡೆಸಿದ್ದು, ವಿಜಯ್‌ ಮಲ್ಯ ಹಾಗೂ ಜೇಟ್ಲಿ ಭೇಟಿ ಮಾಡಿ ಮಾತುಕತೆ ಮಾಡಿರುವುದು ತಿಳಿದಿದ್ದಲ್ಲಿ, ಕಳೆದ ಎರಡೂವರೆ ವರ್ಷದಿಂದ ಯಾಕಾಗಿ ಸುಮ್ಮನಿದ್ದಾರೆ? ಅವರು ಗೊಂದಲ ಮಾಡಿಕೊಂಡಂತಿದೆ. ಅಥವಾ ಯಾರದ್ದಾದರೂ ಒತ್ತೆಕ್ಕೆ ಮಣಿದು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ವಿಚಾರದಲ್ಲಿ ಜುಗಲ್‌ ಬಂಧಿಯಾಡುತ್ತಿದ್ದಾರೆ. 2010ರಿಂದ ಯುಪಿಎ ಸರಕಾರ ಕಿಂಗ್‌ಫಿಷರ್‌ ಹಾಗೂ ವಿಜಯ್‌ ಮಲ್ಯ ಅವರಿಗಾಗಿ ಎಲ್ಲ ಬಗೆಯ ನೀತಿ, ನಿಯಮಗಳನ್ನು ಗಾಳಿಗೆ ತೂರಿದೆ. ಇದೀಗ ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಡಲು ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದರು.

ವಿಜಯ್‌ ಮಲ್ಯ ಅವರಿಗೆ ಸಾಲ ನೀಡಿದ್ದು ಯುಪಿಎ ಸರಕಾರ. ಯಾಕಾಗಿ ನೀಡಿತ್ತು? ಭಾರತೀಯ ರಿಸರ್ವ್‌ ಬ್ಯಾಂಕ್‌ಗೂ ಒತ್ತಡ ಹೇರಲಾಗಿತ್ತು. ಮಲ್ಯ ಅವರನ್ನು ಎಲ್ಲ ನಿಯಮಗಳಿಂದ ಹೊರಗಿಡಲು ಏನು ಕಾರಣ ಎಂಬುದಕ್ಕೆ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮೊದಲು ಉತ್ತರಿಸಬೇಕು ಎಂದು ಹೇಳಿದ್ದಾರೆ.

ಸಚಿವ ಜೇಟ್ಲಿ ಅವರೊಂದಿಗೆ ವಿಜಯ್‌ ಮಲ್ಯ ಮಾತುಕತೆ ನಡೆಸುವುದನ್ನು ನಾನು ಕಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೂ ನೋಡಬಹುದು. ನಾನು ಹೇಳಿರುವುದು ಸುಳ್ಳಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವೆ. ನಿಜವಾದರೆ ಜೇಟ್ಲಿ ರಾಜಕೀಯ ಬಿಡಲಿ ಎಂದು ಪಿಎಲ್‌ ಪುನಿಯಾ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ