ಆ್ಯಪ್ನಗರ

ಪಾಕಿಸ್ತಾನ ಈಗ ಭಾರತಕ್ಕೆ ಮಾತ್ರ ಅಲ್ಲ, ವಿಶ್ವಕ್ಕೇ ಸಮಸ್ಯೆ!: ರಾಮ್‌ ಮಹಾದೇವ್‌ ಕಾಮೆಂಟ್‌...

ಪಾಕಿಸ್ತಾನ ಇಂದು ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಹಾದೇವ್‌ ಹೇಳಿದ್ದಾರೆ.

THE ECONOMIC TIMES 21 Oct 2019, 8:12 pm
ಹೊಸದಿಲ್ಲಿ: ಪಾಕಿಸ್ತಾನ ಕೇವಲ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಹಾದೇವ್‌ ಹೇಳಿದ್ದಾರೆ.
Vijaya Karnataka Web ram mahadev


ಭಾರತದ ನೆರೆ ರಾಷ್ಟ್ರ ಇದೀಗ ನಮ್ಮ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ದೊಡ್ಡ ಸವಾಲಾಗಿ ಪರಿಣಿಮಿಸಿದ್ದು, ಭಯೋತ್ಪಾದನೆಯ ಕೇಂದ್ರವಾಗಿ ಬೆಳೆದಿದೆ. ಇಡೀ ವಿಶ್ವ ಇದೀಗ ಉಗ್ರವಾದದ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್‌ಗೆ ಒತ್ತಡ ಹೇರಬೇಕಾಗಿದೆ ಎಂದಿದ್ದಾರೆ.

ಸೋಮವಾರ ಯುಎಸ್‌-ಇಂಡಿಯಾ ಸ್ಟಾಟರ್ಜಿಕ್‌ ಪಾಟ್ನರ್ಶಿಪ್‌ ಫೋರಂ ಏರ್ಪಡಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ದೇಶಗಳ ನಡುವಿನ ಸಂಬಂಧ, ಮಾತುಕತೆಗಳೆಲ್ಲದರಲ್ಲೂ ಕಳೆದ 7 ದಶಕಗಳಿಂದ ಸಾಕಷ್ಟು ಏರು-ತಗ್ಗುಗಗಳಿದೆ. ಭಾರತ ಪ್ರತಿ ಹಂತದಲ್ಲೂ ನೆರೆ ರಾಷ್ಟ್ರದೊಂದಿಗೆ ಸ್ನೇಹಪೂರ್ವಕ ಸಂಬಂಧವನ್ನೇ ಬಯಸಿದೆ. ಆದರೆ ಗಡಿ ಭಾಗದಲ್ಲಿನ ಭಯೋತ್ಪಾನೆ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದು ಪಾಕ್‌ನ ಕರ್ತವ್ಯ ಎಂದು ಮಹಾದೇವ್‌ ಹೇಳಿದ್ದಾರೆ.

ಇಂದಿನ ದಿನದಲ್ಲಿ ಪಾಕ್‌ ಕೇವಲ ಭಾರತದ ಜತೆಗಿನ ಸಂಬಂಧದಲ್ಲಿ ತೊಡಕನ್ನು ಕಂಡುಕೊಳ್ಳುತ್ತಿಲ್ಲ. ಬದಲಾಗಿ ಅನೇಕ ದೇಶಗಳು ಪಾಕ್‌ನ ಜತೆಗಿನ ಸಂಬಂಧ ಸುಗಮವಾಗಿಲ್ಲ. ಉಗ್ರವಾದದ ವಿಚಾರದಲ್ಲಿ ಅನೇಕ ರಾಷ್ಟ್ರಗಳು ಪಾಕ್‌ನ ನಿಲುವಿಗೆ ಒಮ್ಮತವಾಗಿಲ್ಲ ಎಂದು ಹೇಳಿದ್ದಾರೆ.

ಒಂದು ಕಾಲದಲ್ಲಿ ಎಲ್ಲ ರಾಷ್ಟ್ರಗಳು ಭಾರತಕ್ಕೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಸಲಹೆ ನೀಡುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಹಾಗೂ ಯಾರೂ ಈ ರೀತಿಯ ಸಲಹೆ ಯಾರೂ ನೀಡುತ್ತಿಲ್ಲ. ಪಾಕಿಸ್ತಾನ ಇದೀಗ ಭಾರತಕ್ಕೆ ಮಾತ್ರವೇ ಸಮಸ್ಯೆಯಾಗಿ ಉಳಿದಿಲ್ಲ. ಪ್ರಸ್ತುತ ಪಾಕ್‌ ವಿಶ್ವಕ್ಕೆ ಸಮಸ್ಯೆಯಾಗಿ ಪರಿಣಿಮಿಸಿದೆ. ಪಾಕ್‌ನಲ್ಲಿರುವ ಉಗ್ರರ ಅಡಗುದಾಣಗಳು ಭಯೋತ್ಪಾದನೆಯ ಕೇಂದ್ರವಾಗಿದೆ. ಪಾಕಿಸ್ತಾನ ತನ್ನ ಆಂತಕರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವತ್ತ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಬೇಕಿದೆ. ಆದರೆ ಪಾಕ್‌ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಂತೆ ಭಾಸವಾಗುತ್ತಿಲ್ಲ. ನೆರೆ ರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದವರು ಹೇಳಿದ್ದಾರೆ.

ಎಫ್‌ಎಟಿಎಫ್‌ನಿಂದ ಪಾಕ್‌ ಕಪ್ಪುಪಟ್ಟಿಗೆ ಹೋಗುವುದು ಸ್ವಲ್ಪದರಲ್ಲೇ ತಪ್ಪಿಹೋಗಿದೆ. 2020 ಫೆಬ್ರವರಿಯಲ್ಲಿ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ