ಆ್ಯಪ್ನಗರ

ಹಣ ಬಲದಿಂದ ಜಯ ಗಳಿಸಿದ ಬಿಜೆಪಿ: ರಾಹುಲ್‌

ಬಿಜೆಪಿಯು ಹಣ ಬಲ ಮತ್ತು ಮತದಾರರ ಧ್ರುವೀಕರಣದಿಂದಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 14 Mar 2017, 2:56 pm
ಹೊಸದಿಲ್ಲಿ: ಬಿಜೆಪಿಯು ಹಣ ಬಲ ಮತ್ತು ಮತದಾರರ ಧ್ರುವೀಕರಣದಿಂದಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web bjp used polarization money power to win in up rahul gandhi
ಹಣ ಬಲದಿಂದ ಜಯ ಗಳಿಸಿದ ಬಿಜೆಪಿ: ರಾಹುಲ್‌


ಗೋವಾದಲ್ಲಿ ತಕ್ಷಣ ಬಲಾಬಲಾ ಸಾಬೀತುಪಡಿಸುವಂತೆ ಮನೋಹರ್‌ ಪರಿಕರ್‌ಗೆ ಸುಪ್ರೀಂಕೋರ್ಟ್‌ ಆದೇಶಿಸಿದ ಬಳಿಕ ರಾಹುಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಉತ್ತರಪ್ರದೇಶದಲ್ಲಿ ಜಯಗಳಿಸಿರುವುದಕ್ಕೆ ಬಿಜೆಪಿಯನ್ನು ಅಭಿನಂದಿಸುವೆ. ಅವರು ಮತದಾರರ ಧ್ರುವೀಕರಣದ ಜತೆಗೆ ಹಣ ಬಲ ಪ್ರಯೋಗಿಸಿ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಿದ್ದಾರೆ. ಬಿಜೆಪಿ ಜತೆ ನಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಮಣಿಪುರ ಮತ್ತು ಗೋವಾಗಳಲ್ಲಿ ಕಾಂಗ್ರೆಸ್‌ ಉತ್ತಮ ನಿವರ್ಹಣೆ ತೋರಿದೆ. ಅಲ್ಲಿ ಇತರರ ಬೆಂಬಲ ಪಡೆಯಲು ಬಿಜೆಪಿ ಎಷ್ಟು ವೆಚ್ಚ ಮಾಡಿದೆ ಎಂದು ರಾಹುಲ್‌ ಪ್ರಶ್ನಿಸಿದರು. ಕಾಂಗ್ರೆಸ್‌ ಒಂದು ಪ್ರಬಲ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.

ಕಾಂಗ್ರೆಸ್‌ಗೆ ಸಂಘಟಿತ, ರಚನಾತ್ಮಕ ಬದಲಾವಣೆ ಅಗತ್ಯ ಇದೆ, ಅದು ಶೀಘ್ರದಲ್ಲೇ ನಡೆಯಲಿದೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.

BJP used polarization, money power to win in UP: Congress vice-president Rahul Gandhi today attacked the BJP for polarizing voters and using money power in the recently concluded assembly elections across five states.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ