ಆ್ಯಪ್ನಗರ

ನಿತೀಶ್ ಅವರನ್ನು ಹೊರ ಹಾಕಲು ಮೋದಿ ಬಂದಂತಿದೆ: ಪ್ರಧಾನಿ ಭಾಷಣದ ಮೇಲೆ ಒವೈಸಿಗೇಕೆ ಅನುಮಾನ?

ಬಿಹಾರದಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರ ವೈಖರಿಯನ್ನು ಪ್ರಶ್ನಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಮೋದಿ ತಮ್ಮ ಭಾಷಣದಲ್ಲಿ ಎಲ್‌ಜೆಪಿ ನಿಲುವನ್ನು ಟೀಕಿಸದಿರುವ ನಡೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 23 Oct 2020, 3:45 pm
ಹೈದರಾಬಾದ್: ಬಿಹಾರ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿರುವ ಪ್ರಧಾನಿ ಮೋದಿ, ಎನ್‌ಡಿಎ ಮೈತ್ರಿಕೂಟದ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
Vijaya Karnataka Web Asaduddin Owaisi
ಸಂಗ್ರಹ ಚಿತ್ರ


ಆದರೆ ಪ್ರಧಾನಿ ಮೋದಿ ಅವರ ಪ್ರಚಾರ ವೈಖರಿಯನ್ನು ಪ್ರಶ್ನಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಮೋದಿ ತಮ್ಮ ಭಾಷಣದಲ್ಲಿ ಎಲ್‌ಜೆಪಿ ನಿಲುವನ್ನು ಟೀಕಿಸದಿರುವ ನಡೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ತಮ್ಮ ಭಾಷಣದಲ್ಲಿ ಎನ್‌ಡಿಎದಿಂದ ಹೊರ ಹೋಗಿರುವ ಎಲ್‌ಜೆಪಿ ಕುರಿತು ಪ್ರಸ್ತಾಪಿಸಲೇ ಇಲ್ಲ. ಇದನ್ನು ನೋಡಿದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊರಹಾಕಲೆಂದೇ ಮೋದಿ ಬಂದಂತಿದೆ ಎಂದು ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.

ಬಿಹಾರದಲ್ಲಿ ನಕ್ಸಲ್ ಚಳವಳಿಗೆ ಅವಕಾಶ ನೀಡಿ, ಅಭಿವೃದ್ಧಿ ವಂಚಿತ ಮಾಡಿದ ಮಹಾಘಟಬಂಧನ: ಪ್ರಧಾನಿ ವಾಗ್ದಾಳಿ

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಎರಡು ಕುದುರೆಗಳ ಮೇಲೆ ಸವಾರಿ ಮಾಡುತ್ತಿದೆ. ಚುನಾವಣೆ ಬಳಿಕ ನಿತೀಶ್ ಕುಮಾರ್ ಕುದುರೆ ಬಿಟ್ಟು ಚಿರಾಗ್ ಪಾಸ್ವಾನ್ ಕುದುರೆ ಏರುವ ಬಿಜೆಪಿಯ ತಂತ್ರ ಮೋದಿ ಭಾಷಣದಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.


ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡುವುದು ಬಿಜೆಪಿ-ಆರ್‌ಎಸ್‌ಎಸ್ ಹುನ್ನಾರ ಎಂದಿರುವ ಅಸಾದುದ್ದೀನ್ ಒವೈಸಿ, ಈ ಕಾರಣಕ್ಕಾಗಿಯೇ ಚಿರಾಗ್ ಪಾಸ್ವಾನ್ ಅವರನ್ನು ಚುನಾವಣೆಯಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದ್ದಾರೆ.

ಬಿಹಾರದ ಸಸಾರಾಂನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್ ವಿರುದ್ಧ ವಾಗ್ದಾಳಿ ನಡೆಸಿದರಾದರೂ, ಚಿರಾಗ್ ಫಾಸ್ವಾನ್ ಅಥವಾ ಎಲ್‌ಜೆಪಿ ಕುರಿತು ಪ್ರಸ್ತಾಪಿಸಲಿಲ್ಲ.

ನಾನು ಪಾಕ್ ಹೊಗಳಿದ್ದೇನೆ ಎಂದು ಯೋಗಿ ಸಾಬೀತುಪಡಿಸಲಿ: ಒವೈಸಿ ಸವಾಲು!

ಮೋದಿ ಅವರ ಈ ನಡೆ ಚಿರಾಗ್ ಪಾಸ್ವಾನ್ ಕುರಿತು ಅವರ ಮೃದು ಧೋರಣೆಗೆ ಸಾಕ್ಷಿಯಾಗಿದ್ದು, ಚುನಾವಣೆ ಬಳಿಕವೇ ಜೆಡಿಯುಗೆ ತಾನು ಮೋಸ ಹೋಗಿರುವುದರ ಬಗ್ಗೆ ಗೊತ್ತಾಗಲಿದೆ ಎಂದು ಒವೈಸಿ ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ