ಹೊಸ ದಿಲ್ಲಿ: ಜವಹರ ಲಾಲ್ ನೆಹರೂ ಅವರು ಹಲವು ಸಂಸ್ಥೆಗಳ ನಿರ್ಮಾತೃ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಪ್ರಜಾಪ್ರಭುತ್ವದ ಬೇರುಗಳನ್ನು ನೆಹರೂ ಅವರು ಗಟ್ಟಿಗೊಳಿಸಿದರು ಎಂದು ಹಾಡಿ ಹೊಗಳಿದ್ದಾರೆ. ಭಾರತದ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಅವರ ಪುಣ್ಯ ತಿಥಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಮುತ್ತಾತನ ಸಾಧನೆಗಳನ್ನು ಸ್ಮರಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧವೂ ಹರಿಹಾಯ್ದ ರಾಹುಲ್ ಗಾಂಧಿ, ನೆಹರೂ ಅವರು ಗಟ್ಟಿಗೊಳಿಸಿದ ಪ್ರಜಾಪ್ರಭುತ್ವದ ಬೇರುಗಳನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ನೆಹರೂ ಅವರು ಕಟ್ಟಿದ ಸಂಸ್ಥೆಗಳನ್ನು ಬಿಜೆಪಿ ಧ್ವಂಸ ಮಾಡುತ್ತಿದೆ ಎಂದೂ ರಾಹುಲ್ ಕಿಡಿ ಕಾರಿದರು.
ಈ ಎಲ್ಲಾ ಕಾರಣಗಳಿಂದಾಗಿ ದೇಶಕ್ಕೆ ಈಗ ‘ಭಾರತ್ ಜೋಡೋ’ (ಭಾರತವನ್ನು ಒಂದಾಗಿಸಿ) ಅಭಿಯಾನ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ಹಿಂದೆಂದಿಗಿಂತಲೂ ಈಗ ಈ ಅಭಿಯಾನದ ಅಗತ್ಯತೆ ಹೆಚ್ಚಾಗಿದೆ ಎಂದರು. ಭಾರತದ ಸದ್ಯದ ಸ್ಥಿತಿಗತಿಗಳು, ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ, ‘ಭಾರತ್ ಜೋಡೋ’ ಯಾತ್ರೆ ಅತ್ಯಗತ್ಯವಾಗಿದ್ದು, ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ‘ಭಾರತ್ ಜೋಡೋ’ ಯಾತ್ರೆ ನಡೆಸಲಿದೆ ಎಂದು ಹೇಳಿದರು. ಗಾಂಧಿ ಜಯಂತಿ ದಿನದಂದೇ ಯಾತ್ರೆ ಆರಂಭ ಆಗಲಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು.
‘ಐಐಟಿ, ಐಐಎಂ, ಎಲ್ಐಸಿ, ಐಟಿಐ, ಬಿಎಚ್ಇಎಲ್, ಎನ್ಐಡಿ, ಬಿಎಆರ್ಸಿ, ಎಐಐಎಂಎಸ್, ಇಸ್ರೋ, ಎಸ್ಎಐಎಲ್, ಒಎನ್ಜಿಸಿ, ಡಿಆರ್ಡಿಒ.. ಇತ್ಯಾದಿ ಸಂಸ್ಥೆಗಳನ್ನು ನೆಹರೂ ಅವರು ಕಟ್ಟಿದರು, ಜೊತೆಯಲ್ಲೇ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿದರು. ಆದ್ರೆ, ಬಿಜೆಪಿ ಕಳೆದ 8 ವರ್ಷಗಳಲ್ಲಿ ನೆಹರೂ ಅವರು ಕಟ್ಟಿದ ಸಂಸ್ಥೆಗಳನ್ನು ಧ್ವಂಸಗೊಳಿಸಿತು. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿತು. ಹೀಗಾಗಿ, ಭಾರತಕ್ಕೆ ಹಿಂದೆಂದಿಗಿಂತಲೂ ಹೆಚ್ಚಾಗಿ ‘ಭಾರತ್ ಜೋಡೋ’ ಜಾತ್ರೆಯ ಅಗತ್ಯತೆ ಇದೆ ಎಂದು ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಪ್ರತಿಪಾದಿಸಿದರು.
ಇದೇ ವೇಳೆ ಮತ್ತೊಂದು ಟ್ವೀಟ್ನಲ್ಲಿ ನೆಹರೂ ಅವರಿಗೆ ವಿಶ್ವದ ಹಲವು ದೇಶಗಳ ನಾಯಕರ ಜೊತೆಗೆ ಇದ್ದ ಒಡನಾಟ ಹಾಗೂ ವಿಶ್ವ ನಾಯಕರು ನೆಹರೂ ಅವರ ಬಗ್ಗೆ ಹೊಂದಿದ್ದ ನಿಲುವುಗಳನ್ನು ಬಿಂಬಿಸುವ ವಿಡಿಯೋವನ್ನು ರಾಹುಲ್ ಗಾಂಧಿ ಶೇರ್ ಮಾಡಿದ್ದಾರೆ.
ನೆಹರೂ ಅವರು ನಮ್ಮನ್ನು ಅಗಲಿ 58 ವರ್ಷಗಳೇ ಕಳೆದಿವೆ. ಆದರೆ, ಅವರ ಚಿಂತನೆಗಳು, ರಾಜಕಾರಣ ಹಾಗೂ ದೂರದೃಷ್ಟಿ ದೇಶಕ್ಕೆ ಇಂದಿಗೂ ಪ್ರಸ್ತುತ ಎಂದಿರುವ ರಾಹುಲ್ ಗಾಂಧಿ, ಭಾರತ ದೇಶದ ಅಮರ ಪುತ್ರ ನಮಗೆ ಎಂದಿಗೂ ಮಾರ್ಗದರ್ಶಿ ಎಂದು ಹೊಗಳಿದ್ದಾರೆ.
ಹೊಸ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ನೆಹರೂ ಅವರ ಪುಣ್ಯ ತಿಥಿ ಅಂಗವಾಗಿ ನೆಹರೂ ಅವರ ಸ್ಮಾರಕಕ್ಕೆ ಭೇಟಿ ನೀಡಿ ಹೂ ಗುಚ್ಛ ಅರ್ಪಿಸಿದರು. ಕಾಂಗ್ರೆಸ್ ಪಕ್ಷದ ಹಲವು ನಾಯಕರು ನೆಹರೂ ಅವರಿಗೆ ತಮ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧವೂ ಹರಿಹಾಯ್ದ ರಾಹುಲ್ ಗಾಂಧಿ, ನೆಹರೂ ಅವರು ಗಟ್ಟಿಗೊಳಿಸಿದ ಪ್ರಜಾಪ್ರಭುತ್ವದ ಬೇರುಗಳನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ನೆಹರೂ ಅವರು ಕಟ್ಟಿದ ಸಂಸ್ಥೆಗಳನ್ನು ಬಿಜೆಪಿ ಧ್ವಂಸ ಮಾಡುತ್ತಿದೆ ಎಂದೂ ರಾಹುಲ್ ಕಿಡಿ ಕಾರಿದರು.
ಈ ಎಲ್ಲಾ ಕಾರಣಗಳಿಂದಾಗಿ ದೇಶಕ್ಕೆ ಈಗ ‘ಭಾರತ್ ಜೋಡೋ’ (ಭಾರತವನ್ನು ಒಂದಾಗಿಸಿ) ಅಭಿಯಾನ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ಹಿಂದೆಂದಿಗಿಂತಲೂ ಈಗ ಈ ಅಭಿಯಾನದ ಅಗತ್ಯತೆ ಹೆಚ್ಚಾಗಿದೆ ಎಂದರು. ಭಾರತದ ಸದ್ಯದ ಸ್ಥಿತಿಗತಿಗಳು, ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ, ‘ಭಾರತ್ ಜೋಡೋ’ ಯಾತ್ರೆ ಅತ್ಯಗತ್ಯವಾಗಿದ್ದು, ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ‘ಭಾರತ್ ಜೋಡೋ’ ಯಾತ್ರೆ ನಡೆಸಲಿದೆ ಎಂದು ಹೇಳಿದರು. ಗಾಂಧಿ ಜಯಂತಿ ದಿನದಂದೇ ಯಾತ್ರೆ ಆರಂಭ ಆಗಲಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು.
‘ಐಐಟಿ, ಐಐಎಂ, ಎಲ್ಐಸಿ, ಐಟಿಐ, ಬಿಎಚ್ಇಎಲ್, ಎನ್ಐಡಿ, ಬಿಎಆರ್ಸಿ, ಎಐಐಎಂಎಸ್, ಇಸ್ರೋ, ಎಸ್ಎಐಎಲ್, ಒಎನ್ಜಿಸಿ, ಡಿಆರ್ಡಿಒ.. ಇತ್ಯಾದಿ ಸಂಸ್ಥೆಗಳನ್ನು ನೆಹರೂ ಅವರು ಕಟ್ಟಿದರು, ಜೊತೆಯಲ್ಲೇ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿದರು. ಆದ್ರೆ, ಬಿಜೆಪಿ ಕಳೆದ 8 ವರ್ಷಗಳಲ್ಲಿ ನೆಹರೂ ಅವರು ಕಟ್ಟಿದ ಸಂಸ್ಥೆಗಳನ್ನು ಧ್ವಂಸಗೊಳಿಸಿತು. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿತು. ಹೀಗಾಗಿ, ಭಾರತಕ್ಕೆ ಹಿಂದೆಂದಿಗಿಂತಲೂ ಹೆಚ್ಚಾಗಿ ‘ಭಾರತ್ ಜೋಡೋ’ ಜಾತ್ರೆಯ ಅಗತ್ಯತೆ ಇದೆ ಎಂದು ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಪ್ರತಿಪಾದಿಸಿದರು.
ಇದೇ ವೇಳೆ ಮತ್ತೊಂದು ಟ್ವೀಟ್ನಲ್ಲಿ ನೆಹರೂ ಅವರಿಗೆ ವಿಶ್ವದ ಹಲವು ದೇಶಗಳ ನಾಯಕರ ಜೊತೆಗೆ ಇದ್ದ ಒಡನಾಟ ಹಾಗೂ ವಿಶ್ವ ನಾಯಕರು ನೆಹರೂ ಅವರ ಬಗ್ಗೆ ಹೊಂದಿದ್ದ ನಿಲುವುಗಳನ್ನು ಬಿಂಬಿಸುವ ವಿಡಿಯೋವನ್ನು ರಾಹುಲ್ ಗಾಂಧಿ ಶೇರ್ ಮಾಡಿದ್ದಾರೆ.
ನೆಹರೂ ಅವರು ನಮ್ಮನ್ನು ಅಗಲಿ 58 ವರ್ಷಗಳೇ ಕಳೆದಿವೆ. ಆದರೆ, ಅವರ ಚಿಂತನೆಗಳು, ರಾಜಕಾರಣ ಹಾಗೂ ದೂರದೃಷ್ಟಿ ದೇಶಕ್ಕೆ ಇಂದಿಗೂ ಪ್ರಸ್ತುತ ಎಂದಿರುವ ರಾಹುಲ್ ಗಾಂಧಿ, ಭಾರತ ದೇಶದ ಅಮರ ಪುತ್ರ ನಮಗೆ ಎಂದಿಗೂ ಮಾರ್ಗದರ್ಶಿ ಎಂದು ಹೊಗಳಿದ್ದಾರೆ.
ಹೊಸ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ನೆಹರೂ ಅವರ ಪುಣ್ಯ ತಿಥಿ ಅಂಗವಾಗಿ ನೆಹರೂ ಅವರ ಸ್ಮಾರಕಕ್ಕೆ ಭೇಟಿ ನೀಡಿ ಹೂ ಗುಚ್ಛ ಅರ್ಪಿಸಿದರು. ಕಾಂಗ್ರೆಸ್ ಪಕ್ಷದ ಹಲವು ನಾಯಕರು ನೆಹರೂ ಅವರಿಗೆ ತಮ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.