ಆ್ಯಪ್ನಗರ

ಜಮ್ಮು-ಕಾಶ್ಮೀರ: ಮತ್ತೋರ್ವ ಬಿಜೆಪಿ ಮುಖಂಡನನ್ನ ಗುಂಡಿಕ್ಕಿ ಕೊಂದ ಉಗ್ರರು!

ತ್ತೋರ್ವ ಬಿಜೆಪಿ ಮುಖಂಡನನ್ನ ಕ್ರೂರಿ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಬುದ್ಗಾಮ್‌ ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿದ್ದ ಅಬ್ಧುಲ್‌ ಹಮೀದ್‌ ನಜರ್‌ ಅವರು ಕೊಲೆಯಾದ ವ್ಯಕ್ತಿ. ಇವರ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ANI 10 Aug 2020, 9:03 am
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನ ಉಗ್ರರು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಮತ್ತೋರ್ವ ಬಿಜೆಪಿ ಮುಖಂಡನನ್ನ ಕ್ರೂರಿ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಬುದ್ಗಾಮ್ ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿದ್ದ ಅಬ್ಧುಲ್‌ ಹಮೀದ್‌ ನಜರ್‌ ಅವರು ಕೊಲೆಯಾದ ವ್ಯಕ್ತಿ.
Vijaya Karnataka Web jpg - 2020-08-10T085319.624


ನಿನ್ನೆ ನಡೆದ ಹತ್ಯೆ!
ಭಾನುವಾರ ಬೆಳಗ್ಗೆ ಬಿಜೆಪಿ ಮುಖಂಡ ಅಬ್ಧುಲ್‌ ಹಮೀದ್‌ ನಜರ್ ವಾಕಿಂಗ್‌ಗೆಂದು ತೆರಳಿದ್ದರು. ಈ ವೇಳೆ ಓಂಪೋರ್‌ ಬಳಿ ಉಗ್ರರು ನಜರ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ 38 ವರ್ಷದ ನಜರ್‌ ಅವರನ್ನ ಶ್ರೀನಗರದ ಶ್ರೀ ಮಹಾರಾಜ ಹರಿಸಿಂಗ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನಪ್ಪಿದ್ದಾರೆ.

ಕಳೆದ ವಾರ ಕೇವಲ 48 ಗಂಟೆಯಲ್ಲಿ ಇಬ್ಬರು ಬಿಜೆಪಿ ಮುಖಂಡರ ಮೇಲೆ ಉಗ್ರರು ಹತ್ಯೆಗೆ ಯತ್ನಿಸಿದ್ದರು. ಈ ಪೈಕಿ ಒಬ್ಬರು ಮೃತರಾದರೆ, ಮತ್ತೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕಳೆದ ತಿಂಗಳು ಬಿಜೆಪಿಯ ಜಮ್ಮು-ಕಾಶ್ಮೀರದ ಪ್ರಬಲ ಯುವ ನಾಯಕ ವಾಸೀಂ ಬರಿ ಹಾಗೂ ಅವರ ಕುಟುಂಬದವರನ್ನ ಉಗ್ರರು ಗುಂಡಿಕ್ಕಿ ಕೊಂದಿದ್ದರು.

ಅಮಿತ್‌ ಶಾಗೆ 2ನೇ ಬಾರಿ ಕೊರೊನಾ ಟೆಸ್ಟ್‌ ನಡೆಸಿಲ್ಲ; ವದಂತಿಗೆ ಗೃಹ ಸಚಿವಾಲಯ ಸ್ಪಷ್ಟನೆ!

ಬಿಜೆಪಿ ನಾಯಕರು, ಮುಖಂಡರನ್ನ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಲೇ ಇದ್ದಾರೆ. ಭಯ ಹುಟ್ಟಿಸುವ ನಿಟ್ಟಿನಲ್ಲಿ ಉಗ್ರರು ಈ ರೀತಿಯ ಕೃತ್ಯ ಎಸಗುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ