ಪಟನಾ: ಮಿತ್ರಪಕ್ಷಗಳಾದ ಜೆಡಿಯು ಹಾಗೂ ಲೋಕಜನ ಶಕ್ತಿ ಪಾರ್ಟಿ ಮುಖ್ಯಸ್ಥರು ಭಾಗವಹಿಸಿದ್ದ ಇಫ್ತಾರ್ ಕೂಟದ ವಿರುದ್ಧ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಟ್ವಿಟರ್ ಖಾತೆಯಲ್ಲಿ ಇಫ್ತಾರ್ ಕೂಟದ ಫೋಟೊಗಳನ್ನು ಹಾಕಿರುವ ಸಿಂಗ್, '' ನವರಾತ್ರಿಯಂದು ಫಲಾಹಾರ ಆಯೋಜಿಸಿದ್ದರೆ ಈ ಫೋಟೊವನ್ನು ಇನ್ನೂ ಹೆಚ್ಚು ಸುಂದರವಾಗಿಸಬಹುದಿತ್ತು'' ಎಂದು ನಿತೀಶ್ ಸರಕಾರಕ್ಕೆ ಕುಟುಕಿದ್ದಾರೆ. ನಾವು ಯಾಕೆ ನಮ್ಮ ವಿಶ್ವಾಸವನ್ನು ಹಿಂದಕ್ಕೆ ಸರಿಸಿ ನಟನೆಗೆ ಮುಂದಾಗುತ್ತೇವೆ ಎಂದು ಪರೋಕ್ಷವಾಗಿ ನಿತೀಶ್ ಸರಕಾರ ಅಲ್ಪಸಂಖ್ಯಾತರ ಓಲೈಕೆ ನಡೆಯನ್ನು ಪ್ರಶ್ನಿಸಿದ್ದಾರೆ. ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್ಕುಮಾರ್ ಹಾಗೂ ಕೇಂದ್ರ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಗಿರಿರಾಜ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರ ಸಂಜಯ್ ಸಿಂಗ್, ''ಬಿಜೆಪಿ ಹಿರಿಯ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು,'' ಎಂದು ಒತ್ತಾಯಿಸಿದ್ದಾರೆ.
ಇಫ್ತಾರ್ಗೆ ಗಿರಿರಾಜ್ ಟಾಂಗ್
ನಾವು ಯಾಕೆ ನಮ್ಮ ವಿಶ್ವಾಸವನ್ನು ಹಿಂದಕ್ಕೆ ಸರಿಸಿ ನಟನೆಗೆ ಮುಂದಾಗುತ್ತೇವೆ ಎಂದು ಪರೋಕ್ಷವಾಗಿ ನಿತೀಶ್ ಸರಕಾರ ಅಲ್ಪಸಂಖ್ಯಾತರ ಓಲೈಕೆ ನಡೆಯನ್ನು ಪ್ರಶ್ನಿಸಿದ್ದಾರೆ.
PTI 5 Jun 2019, 5:00 am