ಆ್ಯಪ್ನಗರ

ರಕ್ತದ ಮಡುವಿನಲ್ಲಿದ್ದ ಚಾಲಕನಿಂದ ಪ್ರಯಾಣಿಕರ ರಕ್ಷಣೆ

ಅಪಘಾತದಿಂದ ಗಾಯಗೊಂಡು ಚಾಲಕ ರಕ್ತದ ಮಡುವಿನಲ್ಲಿದ್ದರೂ, ಪ್ರಯಾಣಿಕರನ್ನು ಉಳಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾನೆ.

ತಮಿಳು ಸಮಯಂ 8 Jul 2016, 6:27 pm
ವಿಲ್ಲುಪುರಮ್: ಅಪಘಾತವೊಂದರಲ್ಲಿ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ನಿಗಮದ ಬಸ್ ಚಾಲಕನೊಬ್ಬನಿಗೆ ಗಂಭೀರ ಗಾಯಗಳಾಗಿ, ರಕ್ತದ ಮಡುವಿನಲ್ಲಿದ್ದರೂ, ಪ್ರಯಾಣಿಕರನ್ನು ಉಳಿಸಿ ಕರ್ತವ್ಯ ಪ್ರಜ್ಞೆ ಮೆರೆದ ಘಟನೆ ಇಲ್ಲಿಗೆ ಸಮೀಪದಲ್ಲಿ ನಡೆದಿದೆ.
Vijaya Karnataka Web bleeding bus driver who saved passengers life
ರಕ್ತದ ಮಡುವಿನಲ್ಲಿದ್ದ ಚಾಲಕನಿಂದ ಪ್ರಯಾಣಿಕರ ರಕ್ಷಣೆ


ತಂಜೋರಿನಿಂದ ಚೆನ್ನೈಗೆ ತೆರಳುತ್ತಿದ್ದ ಬಸ್‌ವೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಜಿಲ್ಲೆಯ ವಿಕಿರವಂಡಿ ಗ್ರಾಮದ ಸಮೀಪ ಅಪಘಾತ ಸಂಭವಿಸಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಅವಘಡದಿಂದ ಲಾರಿಯಲ್ಲಿ ಇದ್ದ ಕಬ್ಬಿಣದ ಸಲಾಕೆಗಳು ಬಸ್‌ನೊಳಗೆ ಮುಂಚಾಚಿ, ಪ್ರಯಾಣಿಕರ ಜೀವಕ್ಕೇ ಕುಂದು ತರುವುದಿತ್ತು. ಬಸ್ಸಿನ ಮುಂದಿನ ಗಾಜು ಪುಡಿ ಪುಡಿಯಾಗಿತ್ತು. ಚಾಲಕನಿಗೆ ಗಂಭೀರ ಗಾಯಗಳಾಗಿದ್ದವು. ಆದರೂ, ಸಮಯ ಪ್ರಜ್ಞೆ ಮೆರೆದ ಆತ ನಿಧಾನವಾಗಿ ಬಸ್ಸನ್ನು ಸುರಕ್ಷಿತ ಸ್ಥಳಕ್ಕೆ ಚಲಿಸಿ, ಪ್ರಯಾಣಿಕರಿಗೆ ಇಳಿಯಲು ಅನುವು ಮಾಡಿಕೊಟ್ಟಿದ್ದಾನೆ.

ಬಸ್‌ನಿಂದ ಇಳಿದ ಪ್ರಯಾಣಿಕರು ಚಾಲಕನನ್ನು ನೋಡಿದರೆ, ತಲೆಗೆ ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕಬ್ಬಿಣದ ಸಲಾಕೆಗಳು ಆತನಿಗೆ ತಾಗುವ ಸಾಧ್ಯತೆಯೂ ಇತ್ತು.

ತನ್ನ ಪ್ರಾಣವೇ ಅಪಾಯದಲ್ಲಿದ್ದರೂ, ಅಪಾಯದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಚಾಲಕ ಮುಂದಾಗಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ